
ವಿಜಯಪುರ:ಮೇ.20: ಶಕ್ತಿದೇವತೆ ಚೌಡೇಶ್ವರಿ ಜಾತ್ರೆಯು ತಾಲೂಕಿನ ನಾಗಠಾಣ ಗ್ರಾಮದಲ್ಲಿ ಅಪಾರ ಭಕ್ತ ಸಮೂಹದೊಂದಿಗೆ ವಿಜೃಂಭಣೆಯಿಂದ ಜರುಗಿತು.
`ಭಕ್ತ ಮಹಿಳೆಯರು ಜಾತ್ರೆಯ ಮುನ್ನಾ ದಿನ ರಾತ್ರಿ ಅಂಬಲಿ ಬಿಂದಿಗೆ ಹೊತ್ತುಕೊಂಡು ಕಳಸ ಹಾಗೂ ಬಾಸಿಂಗ ಜೊತೆ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತೆರಳುವುದು ವಿಶೇಷವಾಗಿತ್ತು. ಅಮಾವಾಸ್ಯೆ ದಿನ ಬೆಳಿಗ್ಗೆ ಚೌಡೇಶ್ವರಿ ಮುಖ ಹೊತ್ತು,ಗ್ರಾಮದ ಭಕ್ತರ ಮನೆ ಮನೆಗೆ ಭೇಟಿ ನೀಡಿ ಕಾಯಿ,ನೈವೇದ್ಯ ಪಡೆದು ಆಶೀರ್ವದಿಸುವದು ಸಂಪ್ರದಾಯ. ಮಧ್ಯಾನ್ಹ ಕುಂಬಾರ ಮನೆತನದ ಮಹಿಳೆಯರು ಮನೆಯಿಂದ ಹಾಡುತ್ತಾ ಕಿಚಡಿಯನ್ನು ಗ್ರಾಮದ ನಡು ಬಜಾರಕ್ಕೆ ತರುವರು.ಅಲ್ಲಿ ಹಾಕಿದ ಹಂದರದಲ್ಲಿ ದೇವಿಯು ಮಜ್ಜಿಗೆಯನ್ನು ಕಡೆದು ಭಕ್ತರಿಗೆ ಕೊಡುವದು.ಆ ನಂತರ ಮೂಲ ದೇವಸ್ಥಾನಕ್ಕೆ ಸಕಲ ವಾದ್ಯಮೇಳದೊಂದಿಗೆ ಬರುವ ಸಂಪ್ರದಾಯ ಅನಾದಿ ಕಾಲದಿಂದಲೂ ನಡೆದು ಬಂದಿದ್ದು, ಜಾತ್ರಾ ವಿಶೇಷವಾಗಿದೆ.
ಕುಂಬಾರ ಮನೆತನದ ಅಮೋಘಸಿದ್ದ,ಮಲ್ಲು, ಭೀಮು, ಸಿದ್ದು,ಪವಾಡೇಶ,ಅಮೋಘಸಿದ್ದ, ಶರಣಪ್ಪ, ಶ್ರೀಶೈಲ, ಹಣಮಂತ,ಮಹಾಂತೇಶ, ಬಸವರಾಜ, ಚೌಡಪ್ಪ, ಸದಾನಂದ,ಬಾಬು,ಪುಂಡಲೀಕ, ಶಿವಾನಂದ, ನರಸಪ್ಪ, ಶ್ರೀಶೈಲ,ಮಲ್ಲಿಕಾರ್ಜುನ, ಗಿರಿಮಲ್ಲ,ಹಣಮಂತ, ಸಿದ್ದು, ಭೀಮಾಶಂಕರ,ಶಿವು,ಮಲ್ಲು,ಅರವಿಂದ,ಅಪ್ಪಾಸಿ, ಸಾಯಬಣ್ಣ,ಮಲ್ಲಿಕಾರ್ಜುನ, ನವೀನ ಹಾಗೂ ಬಂಡೆ ಕುಟುಂಬದ ಶಿವಾನಂದ, ಸುಭಾಸ,ಚಿದಾನಂದ, ಕಾಶೀನಾಥ, ಸಂತೋಷ, ಸಂಗಮೇಶ,ಈರಣ್ಣ, ಶ್ರೀಧರ, ಸಿದ್ಧಾರೂಢ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.