
ಕಲಬುರಗಿ:ಮೇ:24: ಕೂಲಿಕಾರರು ತಮ್ಮ ದೇಹದ ಅರೋಗ್ಯ ಸಂರಕ್ಷಣೆಯಲ್ಲಿ ಉತ್ತಮ ಅಭ್ಯಾಸಗಳನ್ನು ರೂಡಿಸಿಕೊಳ್ಳಲು ಮನವಿ ಮಾಡಲಾಯಿತು.
ಕಮಲಾಪುರ ತಾಲೂಕಿನ ಕಿಣಿ ಸಡಕ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಬಾಚನಾಳ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಅಡಿಯಲ್ಲಿ ನಾಲಾ ಹೂಳೆತ್ತುವ ಕಾಮಗಾರಿಯಲ್ಲಿ ಕೂಲಿಕಾರ್ಮಿಕರು ತೊಡಗಿದ್ದರು ಕಾಮಗಾರಿ ಸ್ಥಳಕ್ಕೆ ಕಮಲಾಪುರ ತಾಲೂಕ ಪಂಚಾಯತಿಯ ಉದ್ಯೋಗ ಖಾತ್ರಿಯ ಪ್ರಭಾರಿ ಸಹಾಯಕ ನಿರ್ದೇಶಕರಾದ ಜಗನ್ನಾಥ್ ರೆಡ್ಡಿ ಭೇಟಿ ನೀಡಿ . ನಿಮ್ಮ ದೇಹದ ಆರೋಗ್ಯ ಸಂರಕ್ಷಣೆಯಲ್ಲಿ ಉತ್ತಮ ಅಭ್ಯಾಸಗಳನ್ನು ರೂಡಿಸಿಕೊಳ್ಳಿ ಎಂದು ಕೂಲಿ ಕಾರ್ಮಿಕರಿಗೆ ತಿಳಿಸಿ ಹೇಳಿದರು. ಸ್ಥಳದಲ್ಲಿ ಮಹಿಳೆಯರು ಸಂಖ್ಯೆ120 ಪುರುಷರ ಸಂಖ್ಯೆ.40 ಒಟ್ಟು160 ಜನ ಕೂಲಿ ಕಾರ್ಮಿಕರಿಗೆ
ಸ್ಥಳದಲ್ಲಿ ಆರೋಗ್ಯ ಅಮೃತ ಅಭಿಯಾನದಡಿ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕೂಲಿ ಕಾರ್ಮಿಕರಿಗೆ, ಅವರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ, ಕಾಮಗಾರಿ ಸ್ಥಳಗಳಲ್ಲಿ ಗ್ರಾಮ ಆರೋಗ್ಯ ಶಿಬಿರಗಳನ್ನು ಅಯೋಜಿಸಿ, ಅವರಿಗೆ ರಕ್ತದ ಒತ್ತಡ, ಶುಗರ್, ರಕ್ತ ಪರೀಕ್ಷೆ, ಕಣ್ಣಿನ ಪರೀಕ್ಷೆ ಹಲ್ಲು ಪರೀಕ್ಷೆ ಇನ್ನು ಮುಂತಾದ ಪರೀಕ್ಷೆಗಳನ್ನು ಏಕ ಕಾಲಕ್ಕೆ ಮಾಡಲಾಯಿತು
ಸ್ಥಳದಲ್ಲಿ ಗ್ರಾಮ ಪಂಚಾಯತಿಯ ಕಾಯಕ ಮಿತ್ರ ನಾಜ್ಮೀರ ಮತ್ತು ಃಈಖಿ ಬಸವರಾಜ .ಸಿಬ್ಬಂದಿ ವರ್ಗದವರು ಎಲ್ಲಾ ಅಧಿಕಾರಿಗಳು,& ಏಊPಖಿ ತಾಲೂಕ ಸಂಯೋಜಕರಾದ ಉಮೇಶ್ ಜಾಧವ. ಮತ್ತು ಸ್ವಯಂಸೇವಕರಾದ ಮಮತಾ ರಾಥೋಡ್. Pಊಅ ಸಿಬ್ಬಂದಿ ಸುಜಾತಾ ಮೇಡಂ ಮತ್ತು ಕಮ್ಯುನಿಟಿ ಹೆಲ್ತ್ ಆಫೀಸರ್ ಆದ ಫೇಕ ನವಾಜ ಮತ್ತು ಕಾರ್ಮಿಕ ವರ್ಗದವರು ಹಾಜರಿದ್ದರು.