
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಮೇ.24: ತೆಕ್ಕಲಕೋಟೆ ಪಟ್ಟಣ ಪಂಚಾಯತಿ ಕಾರ್ಯಾಲಯದ ವತಿಯಿಂದ ಕಚ್ಚಾ ವಸ್ತುಗಳ ಸಂಗ್ರಹಣ ಕೇಂದ್ರವನ್ನು ತೆರೆಯಲಾಗಿದೆ.
ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣ ಪಂಚಾಯಿತಿಯಲ್ಲಿ ಮರುಬಳಕೆ ವಸ್ತುಗಳ ಸಂಗ್ರಹಣ ಕೇಂದ್ರವನ್ನು ತೆರೆಯಲಾಗಿದ್ದು, ಪಟ್ಟಣದಲ್ಲಿ ಮರುಬಳಕೆ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ಆರ್.ಆರ್.ಆರ್, ಕೇಂದ್ರಕ್ಕೆ ನೀಡುವಂತೆ ಪ.ಪಂ ಮುಖ್ಯಾಧಿಕಾರಿ ಈರಣ್ಣ ತಿಳಿಸಿದ್ದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದೇಶದಂತೆ ತೆಕ್ಕಲಕೋಟೆ ಪಟ್ಟಣ ಪಂಚಾಯಿತಿಯಲ್ಲಿ ಎಸ್.ಬಿ.ಎಂ. ಯೋಜನೆಯಡಿಯಲ್ಲಿ ಮೇರಿ ಲೈಫ್ ಮೇರಿ ಸ್ವಚ್ಛ ರೆಹ ಅಂದರೆ ನನ್ನ ಜೀವನ ನಮ್ಮ ಸ್ವಚ್ಛ ಸುಂದರ ನಗರ ಕಾರ್ಯಕ್ರಮದಡಿ ಪಟ್ಟಣದ ಸಾರ್ವಜನಿಕರು, ತಮ್ಮ ಮನೆ ಮತ್ತು ಅಂಗಡಿಗಳಲ್ಲಿ ಉತ್ಪತ್ತಿಯಾಗುವ ಅಂದರೆ ಆ.ಆರ್.ಆರ್ (ರೇಸ್ ರೀಯೂಸ್ & ರೀಸೈಕಲ್) ಆಗುವಂತ ವಸ್ತುಗಳಾದ ಬಳಕೆಯಾದ ಪ್ಲಾಸ್ಟಿಕ್, ಹಳೆ ಬುಕ್ಸ್, ಎಲೆಕ್ನಿಕ್ ಸಾಮಾನುಗಳು, ಹಳೆಬಟ್ಟೆ, ಗೊಂಬೆಗಳು, ನ್ಯೂಸ್ ಪೇಪರ್ ಮತ್ತು ಉಪಯೋಗಕ್ಕೆ ಬಾರದ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡಬಾರದು. ಇವುಗಳ ಕಲೆಕ್ಷನ್ (ಸಂಗ್ರಹ) ಕೇಂದ್ರವನ್ನು ತೆಕ್ಕಲಕೋಟೆ ಪಟ್ಟಣ ಪಂಚಾಯಿತಿಯ ವಾಣಿಜ್ಯ ಮಳಿಗೆಯಲ್ಲಿ ತೆರೆಯಲಾಗಿದೆ, ದಿ. 20.05.2023 ರಿಂದ 25.05.2013 ರವರೆಗೆ ನಂತರ 24.05.2023 ರಿಂದ 04.06.2023ರವರೆಗೆ ಆರ್.ಆರ್.ಆರ್. ಸಂಗ್ರಹ ಕೇಂದ್ರದ ಬಗ್ಗೆ ಮನೆ ಮನೆಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ನಡೆಸಲಾಗುತ್ತದೆ.
ಪಟ್ಟಣ ಪಂಚಾಯತಿ ಸಿಬ್ಬಂದಿಗಳಾದ ಶೋಭಾ, ಶೇಕ್ಷವಲಿ, ಅನ್ನಪೂರ್ಣ, ಭಾಷ, ಮಹೇಶ್, ವಿಜಯ್, ಅರುಣ ಕುಮಾರ್, ಜಿ.ಸುನಂದ, ಮಹೇಶ್ವರಿ, ಶಶಿಕಲಾ, ಸುರೇಶ್ ಬಾಬು ಹಾಗೂ ಪಟ್ಟಣ ಪಂಚಾಯತಿ ಪೌರ ಕಾರ್ಮಿಕರು ಇದ್ದರು.