ನಗರದಲ್ಲಿ ಗಮನ ಸೆಳೆದ ಶಾಂತಲಾ ಕಲಾವಿದರ ಅಶ್ವಘೋಷ ನಾಟಕ ಪ್ರಯೋಗ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.10:- ನಗರದ ಶಾಂತಲಾ ಕಲಾವಿದರು ತಂಡಡಾ. ರಾಜ್‍ಕುಮಾರ್ ರಂಗಮಂದಿರದಲ್ಲಿ ಪ್ರಯೋಗಿಸಿದ ಅಶ್ವಘೋಷ ನಾಟಕತನ್ನ ವಿಶಿಷ್ಟ ಕಥಾ ವಸ್ತು, ಮುಖ್ಯ ಪಾತ್ರಧಾರಿಗಳ ಅಭಿನಯ, ರಂಗ ವಿನ್ಯಾಸ, ವಸ್ತ್ರ ವಿನ್ಯಾಸಗಳಿಂದ ಗಮನ ಸೆಳೆಯಿತು
ನಗರದ ಶಾಂತಲಾ ಕಲಾವಿದರು ತಂಡ ಈ ವರ್ಷ 50ನೇ ವರ್ಷ ಆಚರಿಸಿಕೊಳ್ಳುತ್ತಿದ್ದು, ಈ ಸುವರ್ಣ ಮಹೋತ್ಸವದ ಅಂಗವಾಗಿ ಪ್ರತಿ ತಿಂಗಳೂ ಸಾಂಸ್ಕøತಿಕ ಕಾರ್ಯಕ್ರಮ ನಡೆಸುತ್ತಿದೆ. ಆಗಸ್ಟ್ ತಿಂಗಳ ಭಾಗವಾಗಿ ಅಶ್ವಘೋಷ ನಾಟಕ ಪ್ರದರ್ಶಿಸಿತು.
ನಾಟಕವನ್ನು ಅಧ್ಯಾಪಕಬಿ.ಎಸ್. ವಿನಯ್ ರಚಿಸಿದ್ದು, ಶಾಂತಲಾ ಕಲಾವಿದರು ತಂಡದ ಚಿತ್ರಾ ವೆಂಕಟರಾಜು ನಿರ್ದೇಶನ ಮಾಡಿದ್ದಾರೆ. ಅಶ್ವಘೋಷ ಕ್ರಿ.ಶ.1 ನೇ ಶತಮಾನದಲ್ಲಿ ಜೀವಿಸಿದ್ದ ಮಹಾಕವಿ, ನಾಟಕಕಾರ, ದಾರ್ಶನಿಕನಾಗಿದ್ದು, ಈತ ರಚಿಸಿದ ಬುದ್ಧಚರಿತಕೃತಿಯು ಬುದ್ಧನ ಕುರಿತು ರಚಿತವಾದ ಮೊದಲ ಪುಸ್ತಕ. ಇದಲ್ಲದೆ ಸಾರೀಪುತ್ರ ಪ್ರಕರಣ, ಊರ್ವಶೀ ವಿಯೋಗ ಮೊದಲಾದ ಹಲವು ಕೃತಿಗಳು ಅಶ್ವಘೋಷನಿಂದ ರಚಿತವಾಗಿವೆ.
ಇಂತಹ ವ್ಯಕ್ತಿಯ ಬದುಕಿನ ಕುರಿತು ಅಧ್ಯಾಪಕ ಬಿ.ಎಸ್. ವಿನಯ್ ರಚಿಸಿದ ನಾಟಕ ಅಶ್ವಘೋಷ. ಕವಿಯಾಗಿ ಹೆಸರು ಪಡೆದಿದ್ದ ಅಶ್ವಘೋಷನಿಗೆ ಚಂದ್ರಪ್ರಭಾ ಎಂಬ ಪ್ರೇಯಸಿ ಇದ್ದು, ಇಬ್ಬರಧರ್ಮವೂ ಬೇರೆ ಬೇರೆ. ಇಬ್ಬರ ಪ್ರೇಮಕ್ಕೆ ಮನೆಯವರಿಂದ ವಿರೋಧ. ಅಂದಿನ ಸಾಮಾಜಿಕ ಸಂದರ್ಭದಲ್ಲಿ ಬೇರೆ ಬೇರೆಧರ್ಮದ ಹೆಣ್ಣುಗಂಡಿನ ಮದುವೆಎಂಬುದುಅಸಾಧ್ಯ ಎಂಬ ಪರಿಸ್ಥಿತಿ. ಒಬ್ಬರನ್ನೊಬ್ಬರು ಬಿಟ್ಟಿರಲಾರದಅಮರ ಪ್ರೇಮಿಗಳಾದ ಅಶ್ವಘೋಷ ಮತ್ತು ಚಂದ್ರಪ್ರಭಾ ಇಂಥ ಸಂಧಿಗ್ಧ ಪರಿಸ್ಥಿತಿಯಲ್ಲಿ ಏನು ನಿರ್ಧಾರ ಕೈಗೊಳ್ಳುತ್ತಾರೆ? ಅವರ ಪ್ರೇಮಲಗ ಸಫಲವಾಗುತ್ತದೋ? ವಿಫಲವಾಗುತ್ತದೋ? ಎಂಬುದನ್ನುಅತ್ಯಂತಕುತೂಹಲಕಾರಿಯಾಗಿ ನಾಟಕದಲ್ಲಿ ಹಿಡಿದಿಟ್ಟಿದ್ದಾರೆ ನಾಟಕಕಾರ ವಿನಯ್.
ಇದನ್ನುರಂಗದ ಮೇಲೆ ಸಮರ್ಥವಾಗಿತಂದಿದ್ದಾರೆ ನಿರ್ದೇಶಕಿ ಚಿತ್ರಾ ವೆಂಕಟರಾಜು. ಇದು ನಾಟಕದ ಮೊದಲ ಪ್ರಯೋಗ. ಚಾಮರಾಜನಗರದಂಥ ಮೂರನೇ ಹಂತದ ಪಟ್ಟಣಗಳಲ್ಲಿ ಅಭಿನಯದ ತರಬೇತಿ ಇಲ್ಲದ ಹವ್ಯಾಸಿಗಳನ್ನು ಹುಡುಕಿ ಅವರಿಂದ ಅಭಿನಯ ಹೊರತೆಗೆಯುವುದು ಸಾಹಸದ ಕೆಲಸವೇ ಸರಿ. ಇದರಲ್ಲಿಚಿತ್ರಾ ಬಹುತೇಕ ಯಶಸ್ಸು ಗಳಿಸಿದ್ದಾರೆ. ಚಂದ್ರ ಪ್ರಭಾಳಾಗಿ ಚಿತ್ರಾ ಅಭಿನಯಸಿದ್ದು, ನಟನೆಯಲ್ಲಿ ಪೂಣಾರ್ಂಕ ಗಳಿಸುತ್ತಾರೆ. ಅಶ್ವಘೋಷನಾಗಿ ಹರೀಶ್‍ಕುಮಾರ್ ಗಮನ ಸೆಳೆಯುತ್ತಾರೆ.
ನಾಟಕ ಸುಮಾರು 1 ಗಂಟೆ 40 ನಿಮಿಷಗಳ ಕಾಲ ಇದ್ದು, ಅಷ್ಟು ಹೊತ್ತು ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ನಾಟಕ ಯಶಸ್ವಿಯಾಗುತ್ತದೆ. ಮಧ್ಯಂತರದ ನಂತರ ಬರುವ ಬೌದ್ಧ ಧರ್ಮಗುರುಗಳ ಪ್ರಸಂಗಆಸಕ್ತಿಕರವಾಗಿದ್ದು ಎಂ. ಲಿಂಗಪ್ಪ ಬೌದ್ದಗುರುವಾಗಿ ಗಮನ ಸೆಳೆಯುತ್ತಾರೆ. ಬುದ್ಧ ಪ್ರತಿಪಾದಿಸಿದ ಅನಾತ್ಮವಾದ, ಧರ್ಮದ ವ್ಯಾಖ್ಯಾನಚಿಂತನೆಗೆ ಹಚ್ಚುತ್ತದೆ.
ನಾಟಕದ ಏಕತಾನತೆಯನ್ನು ಮರೆಸುವುದಕ್ಕಾಗಿ ಬದನೆಕಾಯಿ ಪ್ರಸಂಗದ ಮೂಲಕ ಆಹಾರ ಸ್ವಾತಂತ್ರ್ಯಇತ್ಯಾದಿ ಪ್ರಸ್ತುತ ಸನ್ನಿವೇಶಗಳನ್ನು ಅಂದಿನ ರಾಜಪ್ರಭುತ್ವಕ್ಕೆ ಸಮೀಕರಿಸಿ ನಡೆಯುವ ಪ್ರಸಂಗಗಳು ಹಾಸ್ಯಮಯವಾಗಿದ್ದು, ನೋಡುಗರನ್ನು ನಗಿಸುತ್ತವೆ. ಈ ಸನ್ನಿವೇಶಗಳಲ್ಲಿ ಅಬ್ರಹಾಂ ಡಿಸಿಲ್ವ, ನಾಗೇಶು, ಗೌತಮ್‍ರಾಜ್ ಪ್ರೇಕ್ಷಕರನ್ನು ರಂಜಿಸುತ್ತಾರೆ.
ಇದು ನಾಟಕದ ಮೊದಲ ಪ್ರಯೋಗ. ಕೆಲವು ನಟರು ಹವ್ಯಾಸಿಗಳಾಗಿರುವುದರಿಂದ ಅಭಿನಯದ ವಿಷಯದಲ್ಲಿ ಅರೆಕೊರೆಗಳಿದ್ದರೂ, ಅದನ್ನು ನಾಟಕದ ವಿನ್ಯಾಸ, ಬೆಳಕು, ರಂಗಸಜ್ಜಿಕೆ, ಸಂಗೀತ, ವೇಷಭೂಷಣ ಮರೆಸುತ್ತದೆ. ಭಿನ್ನಷಡ್ಜ ಸಂಗೀತ, ವಿ. ಡಿ. ಮಧುಸೂದನ್ ಬೆಳಕು, ಸೃಷ್ಟಿ ಹ್ಯಾಂಡ್‍ಲೂಮ್ಸ್ ವಸ್ತ್ರವಿನ್ಯಾಸ, ಮಂಜುನಾಥ್ ಕಾಚಕ್ಕಿ ಪ್ರಸಾದನ ನಾಟಕದರಂಗು ಹೆಚ್ಚಿಸಲು ಸಹಕಾರಿಯಾಗಿದೆ.
ಒಟ್ಟಾರೆ ಸಿನಿಮಾದಿಂದ ನಾಟಕದತ್ತ ಜನರನ್ನು ಸೆಳೆಯಲು ಶಾಂತಲಾ ಕಲಾವಿದರು ಯಶಸ್ವಿಯಾಗಿದ್ದಾರೆ.