
ಚಾಮರಾಜನಗರ, ಫೆ.24:- ಚಾಮರಾಜನಗರ ಜಿಲ್ಲೆಯ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ನಡೆದ ಬಳಿಕ ಚಾಮರಾಜನಗರಕ್ಕೆ ರಾಜಕೀಯ ಚಾಣಕ್ಯ ಬಿ.ಎಲ್.ಸಂತೋμï ಭೇಟಿ ಕೊಟ್ಟು ಪಕ್ಷದ ಪ್ರಮುಖರ ಜೊತೆ ಸಭೆ ನಡೆಸಿದ್ದಾರೆ.
ಚಾಮರಾಜನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋμï ಅವರು ಮಾಧ್ಯಮದವರನ್ನು ಹೊರಗಿಟ್ಟು ಸಭೆ ನಡೆಸಿದ್ದು ಇದರಲ್ಲಿ ಸಂಸದ ವಿ.ಶ್ರೀನಿವಾಸಪ್ರಸಾದ್, ಬಿಜೆಪಿ ಶಾಸಕರಾದಎನ್.ಮಹೇಶ್, ನಿರಂಜನಕುಮಾರ್, ಟಿಕೆಟ್ ಆಕಾಂಕ್ಷಿಗಳಾದ ಎಂ.ರಾಮಚಂದ್ರು, ನಿಶಾಂತ್, ವೆಂಕಟೇಶ್, ಡಾ.ಪ್ರೀತಂ ಹಾಗೂ ಮಂಡಲ ಪ್ರಮುಖರು, ಪಕ್ಷದ ಇತರೆ ಪದಾಧಿಕಾರಿಗಳು ಭಾಗಿಯಾಗಿದ್ದರು.
ಇಂದು ನಡೆದ ಸಭೆಯಲ್ಲಿ ಭಾಗಿಯಾಗಿದ್ದ ಬಿಜೆಪಿ ಪ್ರಮುಖರೊಬ್ಬರು ನೀಡಿದ ಮಾಹಿತಿಯ ಪೂರ್ಣಪಾಠ ಇಲ್ಲಿದೆ. ಶಕ್ತಿ ಪ್ರಮುಖರ ಸಭೆಯಲ್ಲಿ ಸಂತೋμï ಮಾತನಾಡಿ, ಬಿಜೆಪಿ ಕಾರ್ಯಕರ್ತರ ಪಕ್ಷ, ಇಲ್ಲಿರಥವನ್ನು ಬೇರೆ ಪಕ್ಷಗಳಂತೆ ಒಬ್ಬರು-ಇಬ್ಬರು ಎಳೆಯುವುದಿಲ್ಲ, ಕಾರ್ಯಕರ್ತ ರೇತೊಡಗಿ ಗೆಲುವನ್ನು ತರುತ್ತಾರೆ, ನಮ್ಮದು ಪುರಿಜಗನ್ನಾಥನರೀತಿರಥ ಲಕ್ಷಾಂತರ ಮಂದಿ ಎಳೆಯುತ್ತಾರೆ, ಚಾಮರಾಜನಗರದ 4 ಕ್ಷೇತ್ರಗಳಲ್ಲೂ ಈ ಬಾರಿ ಕಮಲ ಅರಳಿಸಬೇಕು ಎಂದು ಪ್ರಮುಖರಿಗೆ ಕರೆ ಕೊಟ್ಟಿದ್ದಾರೆ.
ಓರ್ವಅಭ್ಯರ್ಥಿ ಮೇಲೆ ಎಲ್ಲರದ್ದೂ ಒಂದೊಂದು ಅಭಿಪ್ರಾಯ ಇರಲಿದೆ, 4 ಸಾವಿರ ಆಕಾಂಕ್ಷಿಗಳಿದ್ದಾರೆ 4 ಸಾವಿರ ಅಭಿಪ್ರಾಯ ಇರುತ್ತದೆ, ಪಕ್ಷಯಾರನ್ನೂಆಯ್ಕೆ ಮಾಡುತ್ತದೆಯೋ ಅವರಿಗೆ ನಮ್ಮ ಬೆಂಬಲ ಇರಬೇಕು, ಎಲ್ಲರೂಒಗ್ಗಟ್ಟಾಗಿ ಕೆಲಸ ಮಾಡಬೇಕು, ಬೂತ್ ಮಟ್ಟಎಂದರೆ ಭಾಷಣ ಮಾಡುವ ಹಂತವಲ್ಲ, ಕೆಲಸ ಮಾಡುವ ಹಂತಎಂಬುದನ್ನು ಮರೆಯ ಬಾರದು ಎಂದು ಕಿವಿಮಾತು ಹೇಳಿದ್ದಾರೆ.
ಅನಿವಾಸಿ ಮತದಾರರ ಬಗ್ಗೆ ಇರಲಿ ಮಾಹಿತಿ:
ಮತದಾರರ ಪಟ್ಟಿಯಲ್ಲಿ ವ್ಯಕ್ತಿಯ ಹೆಸರುಇರುತ್ತದೆಆದರೆ ಆ ವ್ಯಕ್ತಿ ಬೇರೆಲ್ಲೋ ಇರುತ್ತಾರೆ ಒಂದೊಂದು ಊರಿನಲ್ಲೂ ಈ ಅನಿವಾಸಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ ಇವರಿಗೂ ಕೂಡ ಬಿಜೆಪಿ ಕಾರ್ಯಕ್ರಮಗಳನ್ನು ತಿಳಿಸಿ ಮತದಾನದಿಂದ ಅವರು ಹೊರಗುಳಿಯದಂತೆ ಮಾಡಿ ಬಿಜೆಪಿ ಮತದಾರರನ್ನಾಗಿಸಬೇಕು. ನಮ್ಮ ಬಿಜೆಪಿಗೆ ಇಂತಿಷ್ಟು ಮತಬ್ಯಾಂಕ್ ಎಂದು ಇದ್ದೇ ಇರಲಿದೆ ಅದಕ್ಕೆ ಜನರನ್ನು ಸೇರ್ಪಡೆ ಮಾಡುತ್ತಾ ಹೋಗಬೇಕೆ ಹೊರತು ಡಿಲಿಟ್ ಮಾಡಬಾರದು, ಬೂತ್ ಮಟ್ಟದಲ್ಲಿ ಭಾಷಣ ಮಾಡಬೇಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದಯೋಜನೆ, ಕೆಲಸ ಹೇಳಿ ಎಂದು ಪ್ರಮುಖರಿಗೆ ಕ್ಲಾಸ್ ತೆಗೆದು ಕೊಂಡಿದ್ದಾರೆ.
ಕಾಂಗ್ರೆಸ್ಗೆ ಮದ್ದು ಅರಿಯುವ ಚುನಾವಣೆ:
ಮುಂಬರುವ ಚುನಾವಣೆ ಕಾಂಗ್ರೆಸ್ಗೆ ಮದ್ದು ಅರಿಯುವಚುನಾವಣೆ ಎಂದು ವ್ಯಾಖ್ಯಾನಿಸಿರುವ ಬಿ.ಎಲ್. ಸಂತೋμï ದೇವನಹಳ್ಳಿ ತಾಲೂಕಿನಲ್ಲೇಟಿಪ್ಪು ಕೂಡ ಹುಟ್ಟಿದ್ದುಕೆಂಪೇಗೌಡರು ಹುಟ್ಟಿದ್ದುಆದರೆಕೆಂಪೇಗೌಡರನ್ನು ಮತ್ತೇ ನೆನಪಿಸಲು ಬಿಜೆಪಿ ಬರಬೇಕಾಯಿತು, ರಾಣಿಅಬ್ಬಕ್ಕ, ನಾಲ್ವಡಿಕೃಷ್ಣರಾಜಒಡೆಯರ್ಅವರನ್ನು ಸ್ಮರಿಸಲು ಬಿಜೆಪಿ ಬರಬೇಕಾಯಿತುಎಂದು ಕೈ ಪಾಳೆಯ ವಿರುದ್ಧಕಿಡಿಕಾರಿದರು.
ಹಳೇ ಮೈಸೂರು ಭಾಗ ವಶಕ್ಕೆ ಪ್ಲಾನ್:
ಹಳೇ ಮೈಸೂರು ಭಾಗವನ್ನುಕಮಲದ ವಶ ಮಾಡಿಕೊಳ್ಳಬೇಕೆಂದು ಈಗಾಗಲೇ ಬಿಜೆಪಿ ಉನ್ನತ ಮಟ್ಟದ ನಾಯಕರು ಪ್ಲಾನ್ ಮಾಡುತ್ತಿದ್ದು ಸಂತೋμï ಅವರ ಈ ಸಭೆ ಮಹತ್ವ ಪಡೆದುಕೊಂಡಿದೆ. ಜೊತೆಗೆ, ಶಾಸಕರು, ಟಿಕೆಟ್ ಆಕಾಂಕ್ಷಿಗಳಿಗೆ, ಶಕ್ತಿ ಪ್ರಮುಖರಿಗೆ ಕೆಲವು ಮಹತ್ವಪೂರ್ಣ ಸಲಹೆಗಳನ್ನು ಸಂತೋμï ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.