ಧರ್ಮ ಜಾಗೃತಿಯಲ್ಲಿ ರೇಣುಕಾಚಾರ್ಯರ ಮಹತ್ವ ಅತಿ ಹೆಚ್ಚಿನದಾಗಿದೆ

???????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಸೈದಾಪುರ:ಮಾ.6:ಮಾನವೀಯ ಮೌಲ್ಯಗಳನ್ನು ಒಳಗೊಂಡ ಅರ್ಥವತ್ತಾದ ಧಾರ್ಮಿಕ ಆಚರಣೆಗಳ ಧರ್ಮ ಜಾಗೃತಿಯಲ್ಲಿ ಪ್ರಯತ್ನಿಸಿದ ಜಗದ್ಗುರು ರೇಣುಕಾಚಾರ್ಯರ ಮಹತ್ವ ಅತಿ ಹೆಚ್ಚನದಾಗಿದೆ ಎಂದು ಕಡೇಚೂರು ಸಂಸ್ಥಾನ ಮಠದ ಗುರುಮೂರ್ತಿ ಶಿವಾಚಾರ್ಯರರು ಅಭಿಪ್ರಾಯಪಟ್ಟರು.
ಇಲ್ಲಿನ ವಲಯ ಶ್ರೀ ವೀರಮಹೇಶ್ವರ ಜಂಗಮ ಕ್ಷೇಮಭೀವೃದ್ಧಿ ಸಂಘದ ವತಿಯಿಂದ ಪಟ್ಟಣದ ವಿಶ್ವನಾಥ ಮಂದಿರದಲ್ಲಿ ಹಮ್ಮಿಕೊಂಡ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವವಹಿಸಿ ಮಾತನಾಡಿದರು. ತಮ್ಮದೆಯಾದ ತಪ್ಪಸ್ಸಿನ ಸಾಧನೆಗಳೊಂದಿಗೆ ಧಾರ್ಮಿಕ ಕೇಂದ್ರಗಳನ್ನು ಅಸ್ಥಿತ್ವಕ್ಕೆ ತಂದು ನೊಂದವರ ಪಾಲಿಗೆ ಆಸರೆಯಾಗಿ ಜಗದ್ಗುರು ರೇಣುಕಾಚಾರ್ಯರರು ಕಾರ್ಯ ನಿರ್ವಹಿಸಿದರು. ಅವರ ತತ್ವಗಳ ಸಾರವನ್ನು ತಿಳಿದು ಸೇವಾ ಮನೋಭಾವನೆಯೊಂದಿಗೆ ಸಮಾಜದ ಅಭಿವೃದ್ದಿಗೆ ಪ್ರಯತ್ನಿಸಿದಾಗ ಜಯಂತಿಯ ಮಹತ್ವ ಹೆಚ್ಚಾಗುತ್ತದೆ ಎಂದು ಕಿವಿ ಮಾತುಗಳನ್ನು ಹೇಳಿದರು.

ವಲಯ ಅಧ್ಯಕ್ಷ ಶರಣಯ್ಯ ಸ್ವಾಮಿ ಪಂಚಕಂತಿಮಠ ಕೊಂಡಾಪುರ, ಸಮಾಜದ ಹಿರಿಯ ಮುಖಂಡರಾದ ಬಸವರಾಜಯ್ಯ ಸ್ವಾಮಿ ಬದೇಪಲ್ಲಿ, ಬಸ್ಸಯ್ಯ ಸ್ವಾಮಿ ಬೆಳಗುಂದಿ ಸೇರಿದಂತೆ ಇತರರಿದ್ದರು.

ಜಗದ್ಗುರು ರೇಣುಕಾಚಾರ್ಯರರು ಪೀಠವನ್ನು ಸ್ಥಾಪನೆ ಮಾಡಿ ಆ ಮೂಲಕ ಧರ್ಮ ಪ್ರಚಾರ ಕೈಗೊಂಡು ಸಮಾಜದ ಅಭಿವೃದ್ಧಿಗೆ ಸಾಕಷ್ಟು ಪ್ರಯತ್ನ ಮಾಡಿದರು. ಜಯಂತಿ ದಿನದಂದು ಅವರ ವಿಚಾರಧಾರೆಗಳನ್ನು ತಿಳಿದು ಬದಕನ್ನು ನಾವು ಕಂಡುಕೊಂಡಾಗ ಮಾತ್ರ ಅವರ ಮಹತ್ವ ಹೆಚ್ಚಾಗುತ್ತದೆ.
ಜಿ.ಎಂ.ಗುರುಪ್ರಸಾದ ಪ್ರಾಂಶುಪಾಲರು ಸೈದಾಪುರ