ಮುಂಬೈ,ಜೂ.೧-ದೇಶದಲ್ಲಿ ದೇಶೀಯ ವಿಮಾನಯಾನ ಬೇಡಿಕೆ ಹೆಚ್ಚಾಗಿದೆ. ಇದರಿಂದ ಸಹಜವಾಗಿ ವಿಮಾನ ಪ್ರಯಾಣ ದುಬಾರಿಯಾಗಿಸಿದೆ.
ಗೋ ಫಸ್ಟ್ ವಿಮಾನ ದೆಹಲಿಯಿಂದ ದೇಶದ ವಿವಿಧ ನಗರಗಳಿಗೆ ತಾತ್ಕಾಲಿಕವಾಗಿ ವಿಮಾನ ಸಂಚಾರ ಸ್ಥಗಿತ ಮಾಡಿದೆ. ಇದರ ಪರಿಣಾಮ ಮುಂಬೈ ಸೇರಿದಂತೆ ಇನ್ನಿತರೆ ನಗರಗಳ ಪ್ರಯಾಣಕ್ಕೆ ಬೇಡಿಕೆ ಹೆಚ್ಚಿದೆ.
ದೆಹಲಿಯಿಂದ ದೇಶದ ವಿವಿಧ ನಗರಳಿಗೆ ತೆರಳಲು ೨೪-ಗಂಟೆಗಳ ಮುಂಗಡ ಟಿಕೆಟ್ ಖರೀದಿ ದೇಶೀಯ ವಿಮಾನ ದರಗಳು ಗಗನಕ್ಕೇರಿವೆ.
ಮುಂಬೈನಿಂದ ಲೇಹ್ಗೆ ೨೪ ಗಂಟೆಗಳ ಮುಂಗಡ ಖರೀದಿ ಟಿಕೆಟ್ ೨೨,೫೦೦ ರೂ. ಮತ್ತು ಕೊಚ್ಚಿಗೆ ೨೦,೦೦೦ ರೂ.ದರ ಏರಿಕೆಯಾಗಿದೆ.
ಸಾಂಪ್ರದಾಯಿಕವಾಗಿ ದುಬಾರಿಯಾದ ಪೂರ್ವ ಮತ್ತು ಈಶಾನ್ಯ ಸ್ಥಳಗಳು ಅಗ್ಗವಾಗಿದ್ದು, ಮುಂಬೈ-ಕೋಲ್ಕತ್ತಾ ರೂ ೭,೨೦೦, ಬಾಗ್ಡೋಗ್ರಾ ರೂ ೮,೩೦೦, ಇತ್ಯಾದಿ. ಮುಂಬೈನಿಂದ ದೆಹಲಿಗೆ ಪ್ರಯಾಣ ದರ ನಂಬಲಾಗದಷ್ಟು ಕಡಿಮೆ ರೂ. ೪,೭೦೦ ಆಗಿದೆ. ಆದರೂ, ಒಂದು ದಿನದ ಮುಂಗಡ ದರ ಗಣನೀಯವಾಗಿ ಏರಿಕೆಯಾಗಿದೆ.
ಮೇ ಆರಂಭದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ ಗೋ ಫಸ್ಟ್ ವಿಮಾನಯಾನ ಸಂಸ್ಥೆ ಏಪ್ರಿಲ್ ಮತ್ತು ಅಕ್ಟೋಬರ್ ಅಂತ್ಯದ ನಡುವೆ ೧,೫೩೮ ಸಾಪ್ತಾಹಿಕ ವಿಮಾನ ಸಂಚಾರ ನಿರ್ವಹಿಸಲು ಅನುಮತಿ ನೀಡಿತು. ಮೇ-ಅಂತ್ಯ ಮತ್ತು ಜೂನ್ ಆರಂಭದಲ್ಲಿ ರಜಾದಿನಗಳು ಶಾಲೆ ಪುನರಾರಂಭವಾಗಿರುವ ಹಿನ್ನೆಲೆಯಲ್ಲಿ ದೇಶೀಯ ವಿಮಾನಯಾನ ಬೇಡಿಕೆ ಏರಿಕೆಯಾಗಿದೆ.
ಏರ್ ಇಂಡಿಯಾದ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಜಿತೇಂದರ್ ಭಾರ್ಗವ ಪ್ರತಿಕ್ರಿಯೆ ನೀಡಿ, ಕಡಿಮೆ ವಿಮಾನಗಳು ಹೆಚ್ಚಿನ ಹೊರೆಯಾಗಿ ಪರಿಣಮಿಸಿದೆ.ಹೀಗಾಗಿ ವಿಮಾನಯಾನ ಸಂಸ್ಥೆಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದಿದ್ದಾರೆ.
ವಿಮಾನಯಾನ ಸಂಸ್ಥೆಗಳ ಸಾಮರ್ಥ್ಯದ ನಿಯೋಜನೆ ಗರಿಷ್ಠ ಗೊಳಿಸಲು ಡಿಜಿಸಿಎ ಮುಂದಾಗಬೇಕು, ಬೇಸಿಗೆ ವೇಳಾಪಟ್ಟಿಯಲ್ಲಿ ಸಾಮರ್ಥ್ಯ ಕಡಿತಗೊಳಿಸಿದ ನಾಲ್ಕು ವಿಮಾನಯಾನ ಸಂಸ್ಥೆಗಳನ್ನು ಉಲ್ಲೇಖಿಸಿ. ಮಾರುಕಟ್ಟೆಯು ಬೆಳವಣಿಗೆಯ ಕ್ರಮದಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಪ್ರಸ್ತುತ, ಏಳು-ದಿನದ ಮುಂಗಡ ಖರೀದಿ ದರ ಮತ್ತು ೩೦-ದಿನಗಳ ಮುಂಗಡ ಖರೀದಿ ದರದ ನಡುವಿನ ವ್ಯತ್ಯಾಸ ಫಾರ್ವರ್ಡ್ ಬುಕಿಂಗ್ಗಳನ್ನು ಉತ್ತೇಜಿಸಲು ಸಾಕಷ್ಟು ಬೇಡಿಕೆ ಇಲ್ಲ. ಜೂನ್ ೮ ರಿಂದ ೧೧ ರ ಆಸುಪಾಸಿನ ಪ್ರಯಾಣಕ್ಕಾಗಿ, ತಡೆರಹಿತ ವಿಮಾನದಲ್ಲಿ ಅಗ್ಗದ ಮುಂಬೈ-ದೆಹಲಿ ರಿಟರ್ನ್ ದರ ರೂ. ೧೧,೫೦೦ ಆಗಿದ್ದರೆ, ಜುಲೈ ೬-೯ಕ್ಕೆ ರೂ. ೧೦,೦೦೦ ರೂ ಆಗಿದೆ ಎಂದು ಮೂಲಗಳು ತಿಳಿಸಿವೆ.