ವಿಜಯಪುರ :ಮೇ.27: ಗೋವಾ ಇಂಟನ್ರ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಎಂಟರ್ಟೇನಮೆಂಟ್ ಸೊಸೈಟಿ ಆಫ್ ಗೋವಾದಲ್ಲಿ ಹಮ್ಮಿಕೊಂಡ ಫೆಸ್ಟಿವಲ್ “ಸತ್ಯಶೋಧಕ” ಡಾಕ್ಯುಮೆಂಟರಿ ಚಿತ್ರಕ್ಕೆ” ಬೆಸ್ಟ್ ಡೈರೆಕ್ಟರ್” ಅವಾರ್ಡನ್ನು ವಿಜಯಪುರ ನಿವಾಸಿಯಾದ ದೇವು ಕೆ ಅಂಬಿಗ ಅವರಿಗೆ ಯೂನಿವರ್ಸಲ್ ಪಿಲ್ಮ್ ಮೇಕರ್ ಕೌನ್ಸಿಲ್ ಹಾಗೂ ನವ ಕರ್ನಾಟಕ ಪಿಲ್ಮ್ ಅಕಾಡೆಮಿ ವತಿಯಿಂದ ಅವಾರ್ಡ್ನ್ನು ನೀಡಲಾಯಿತು.
ಜಿಲ್ಲೆಯ ಯುವ ಪ್ರತಿಭೆ ದೇವು ಕೆ ಅಂಬಿಗ ಈ ಹಿಂದೆ ಸತ್ಯಶೋಧಕ ಎಂಬ ಡಾಕ್ಯುಮೆಂಟರಿ ಚಿತ್ರಕ್ಕೆ ಮಾಡಿ ರಾಜ್ಯಾದ್ಯಂತ ಎಲ್ಲಾ ಶಾಲಾ ಮಕ್ಕಳಿಗೆ ಈ ಚಿತ್ರವನ್ನು ತೋರಿಸಿ ಜಯ ಸಾಧಿಸಿದರು. 1827 ರಲ್ಲಿ ನಡೆದ ನೈಜ ಘಟನೆಯಾಧರಿತ ಮಹಾತ್ಮಜ್ಯೋತಿರಾವ್ ಫುಲೆ ಹಾಗೂ ಸಾವಿತ್ರಿಬಾಯಿ ಫುಲೆಯವರ ಜೀವನಾಧರಿತ ಚಿತ್ರ ಇದಾಗಿತ್ತು. ಡಾ|| ಜೆ.ಪಿ ದೊಡಮನಿಯವರು ಬರೆದಂತ ಮಹಾತ್ಮ ಜ್ಯೋತಿರಾವ್ ಫುಲೆ ಎಂಬ ನ್ಯಾಷನಲ್ ಅವಾರ್ಡ್ ಪಡೆದ ಗ್ರಂಥಾಧರಿತ ಚಿತ್ರವೇ ಈ ಸತ್ಯಶೋಧಕ ಚಿತ್ರವಾಗಿದೆ. ಈ ಚಿತ್ರಕ್ಕೆ ದೇವು ಕೆ ಅಂಬಿಗ ಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿ ದಿನಾಂಕ 20, 21ಮೇ 2023 ರಂದು ನಡೆದ ಗೋವಾ ಇಂಟನ್ರ್ಯಾಷನಲ್ ಫಿಲ್ಮ್ ಫೆಸ್ಟಿವಲ್ನಲ್ಲಿ ಬೆಸ್ಟ್ ಡೈರೆಕ್ಟರ್ ಅವಾರ್ಡನ್ನು ಪಡೆದಿದ್ದು ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ.
ಈ ಸಂದರ್ಭದಲ್ಲಿ ಚಲನ ಚಿತ್ರ ನಟಿಯಾದ ಅನುಪ್ರಭಾಕರ ಮುಖರ್ಜಿ ಮಾತನಾಡಿ, ಸಮಾಜದಲ್ಲಿ ಶೋಷಣೆಗೊಳಗಾದ ಜನರ ಬಾಳಿಗೆ ಬೇಳಕಾಗಿ, ನೋಂದವರ ಜೀವಕ್ಕೆ ಆಶಾಕಿರಣವಾದ ಕೀರ್ತಿ ಈ ಮಹಾತ್ಮ ಜ್ಯೋತಿರಾವ್ ಫುಲೆಯವರಿಗೆ ಸಲ್ಲುತದೆ. ಹೆಣ್ಣು ಮನೆಯ ಹೊರಿಸಲು ದಾಟಿ ಹೊರಗೆ ಹೊಗುವಂತಿರಲ್ಲಿ. ಅಕ್ಷರ ಕಲಿತರೆ ಅವರಿಗೆ ಬಹಿಸ್ಕಾರದ ಘಂಟೆ ಮೊಳಗುತ್ತಿತ್ತು, ಅಂತಹ ಸಮಯದಲ್ಲಿ ಯಾರಿಗೂ ಹೆದರದೆ ಹೆಣ್ಣು ಮಕ್ಕಳಿಗೆ ಅಕ್ಷರವನ್ನು ಕಲಿಸಿ ಹೆಣ್ಣು ಈ ಸಮಾಜದ ಕಣ್ಣು…. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ವಾಕ್ಯದೊಂದಿಗೆ ಸಮಾದಲ್ಲಿ ಜಾಗೃತಿ ಮೂಡಿಸಿದ್ದು ಇತಿಹಾಸವಾಗಿದೆ ಆ ಹಿನ್ನೆಲೆಯನ್ನು ಚಿತ್ರದ ಮುಖಾಂತರ ಸಮಾಜಕ್ಕೆ ತೋರಿರುವುದು ನಿಜಕ್ಕೂ ಶ್ಲ್ಯಾಘನೀಯವೆಂದರು.
ಈ ಸಂದರ್ಭದಲ್ಲಿ ನವಕರ್ನಾಟಕ ಅಕಾಡೆಮಿ ಅಧ್ಯಕ್ಷರಾದ ಡಾ.ಎಂ. ಎ. ಮುಮ್ಮಿಗಟ್ಟಿ, ಸಮಾಜ ಕಲ್ಯಾಣ ಮತ್ತು ಪುರಾತತ್ವ ನದಿ ಮತ್ತು ನ್ಯಾವಿಗೇಷನ್ ಸುಭಾಸಫಾಲ್ ದೇಸಾಯಿ, ಗೋವಾದ ಮಾಜಿ ಮೇಯರ್ ಉದಯ ಮಡಿಕರ್, ಗೋವಾ ಪಂಚಾಯತ್ ಮಹಿಳಾ ದಕ್ಷಿಣ ಗೋವಾ ಜಿಲ್ಲಾಧ್ಯಕ್ಷೆಯಾದ ಅನಿತಾ ಥೋರಟ್, ಸೇವನ್ ಕ್ಲಿಕ್ ಮಿಡಿಯಾ ಸಂಪಾದಕರಾದ ಗುರುದೀಪ್ಸಿಂಗ್, ಜಿಲ್ಲಾ ಗೌವರ್ನರ್ ಲಯನ್ಸ್ ಇಂಟನ್ಯಾಷನಲ್ ಸುಗ್ಗಲ ಯಲ್ಮಿಲಿ, ಸಿ.ಇ.ಓ ಡ್ರೀಮ್ಸ್ ಈವೆಂಟ್ ನವದೆಹಲಿಯ ದೇಬಾಶಿಶ್ ಮೈತ್ರಾ, ಚಲನಚಿತ್ರ ವಿತರಕ, ನಿರ್ದೇಶಕರಾದ ರಾಜೇಶ ರಾಜ, ನಟ ನಿರ್ಮಾಪಕ, ಮುಂಬೈ ಸಿಇಓ ಜೈ ಎಂಟರ್ಟೈನ್ಮೆಂಟ್ ವಲ್ರ್ಡ್ ಜಯಪ್ರಭು ಲಿಂಗಾಯತ ಹಾಗೂ ವಿಜಯಪುರದ ಚಲನಚಿತ್ರ ನಟ ವಿನೋದ ಪಿ ಮುಂತಾದವರು ಇದ್ದರು.