ದೇಗಲಮಡಿ: ಮದ್ಯಪಾನ ವಿರೋಧಿ ಜಾಗೃತಿ

ಚಿಂಚೋಳಿ,ಜೂ.27- ತಾಲೂಕಿನ ದೇಗಲಮಡಿ ಗ್ರಾಮದಲ್ಲಿ ಧರ್ಮಸ್ಥಳ ಸಂಸ್ಥೆಯವರು ಸರ್ಕಾರಿ ಪ್ರೌಡ ಶಾಲೆಯಲ್ಲಿ ಹಮ್ಮಿಕೊಂಡ ಮದ್ಯಪಾನ ದುಷ್ಪರಿಣಾದ ಜಾಗೃತಿ ಕಾರ್ಯಕ್ರಮದಲ್ಲಿ ಸಾಮಾಜಿಕ ಚಿಂತಕ ಹೋರಾಟಗಾರ ಮಾರುತಿ ಗಂಜಗಿರಿ ಮಾತನಾಡಿದರು.
ಮನುಷ್ಯನನ್ನು ಸರ್ವನಾಶ ಮಾಡುವ ಕೆಟ್ಟ ಚಟಗಳಲ್ಲಿ ಮದ್ಯಪಾನ-ದೂಮಪಾನ ಅತ್ಯಂತ ಅಪಾಯ ಕಾರಿಯಾಗಿದೆ ಎಂದರು.
ಒಮ್ಮೆ ಕುಡಿತದ ಚಟಕ್ಕೆ ಬಿದ್ದಲ್ಲಿ ಅದರಿಂದ ಹೋರಬರುವುದು ಬಲು ಕಷ್ಟ ಕುಡಿತದ ಚಟಕ್ಕೆ ಬಲಿಯಾದ ವ್ಯಕ್ತಿಯನ್ನೆ ಅಲ್ಲದೆ ಅವನನ್ನು ಅವಲಂಬಿಸಿದ ಹೆಂಡತಿ ಮಕ್ಕಳನ್ನು ನಿರ್ಗತಿಕರನ್ನಾಗಿ ಮಾಡುವುದಲ್ಲದೆ ಮನೆ ಹೊಲಗಳನ್ನು ಒಡವೆ ವಸ್ತುಗಳನ್ನು ಮಾರುವಂತೆ ಮಾಡುತ್ತದೆ.
ಕುಡಿದ ಅಮಲಿನಲ್ಲಿ ಮಡದಿ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೆಪಿಸುತ್ತದೆ ಸಮಾಜ ಘಾತುಕ ಕೆಲಸ ಮಾಡಲು ಕೊಂಡೊಯ್ಯುತ್ತದೆ ವಿಶೇಷವಾಗಿ ಇತ್ತಿಚಿನ ದಿನಗಳಲ್ಲಿ ಸಮಾಜ ಬದಲಾವಣೆ ಮಾಡುವ ಶಕ್ತಿ ಹೊಂದಿರುವಂತ ಯುವ ಜನತೆ ಹೆಚ್ಚು ಹೆಚ್ಚು ಮದ್ಯವ್ಯಸನಕ್ಕೆ ಅವಲಂಬನೆ ಯಾಗುತ್ತಿರುವುದರಿಂದ ಮನೆಯಲ್ಲಿ ಸಮಾಜದಲ್ಲಿ ಶಾಂತಿಗೆ ನೆಮ್ಮದಿಗೆ ಭಂಗವಾಗುತ್ತಿದೆ ಇದರಿಂದ ಹೊರ ಬರಬೇಕಾದರೆ ಸಂತರ ಶರಣರ ಮಾಹತ್ಮರ ವಿಚಾರಗಳು ಅರಿಯುವುದರಿಂದ ಮಾತ್ರ ಸಾದ್ಯ ಎಂದರು.
ತಮ್ಮ ಮನೆಯಲ್ಲಿ ಯಾರಾದರು ಕುಡಿತದ ಚಟಕ್ಕೆ ಬಿದ್ದಲ್ಲಿ ತಾವುಗಳು ಅವರಿಗೆ ಕೈ ಮುಗಿದು ಕಾಲಿಗೆ ಬಿದ್ದು ನಾವು ಕುಡಿಯುವುದನದನನ್ನು ಬಿಡುತ್ತೇವೆ ಎಂದು ಹೇಳಿದರು ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು ಮತ್ತು ಶಾಲೆಯ ಮಕ್ಕಳು ಇದ್ದರು.