
ದಾವಣಗೆರೆ.ಏ.೨; ಜಿಲ್ಲೆಯ ಸಹಕಾರಿಬ್ಯಾಂಕುಗಳಲ್ಲೊಂದಾದ ದಿ ದಾವಣಗೆರೆ-ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ಇದರ ಮುಕ್ತಾಯಗೊಂಡ ಆರ್ಥಿಕ ವರ್ಷ 2022-2023ನೇ ಸಾಲಿನಲ್ಲಿ ರೂ. 10.50 ಕೋಟಿ ಲಾಭಗಳಿಸಿದೆ, ಆದಾಯ ತೆರಿಗೆ ರೂ.1.90 ಕೋಟಿ ಮತ್ತು ಇತರೆ ಅವಕಾಶಗಳನ್ನು ಕಲ್ಪಿಸಿದ ನಂತರ ನಿವ್ವಳ ಲಾಭ. ರೂ.5.52 ಕೋಟಿ ಗಳಿಸಿದೆ. ಬ್ಯಾಂಕು ಕಳೆದ ಸಾಲಿಗೆ ಹೋಲಿಸಿದಲ್ಲಿ ಗಣನೀಯವಾಗಿ ಅಭಿವೃದ್ಧಿ ಪಥದಲ್ಲಿ ಮುಂದುವರೆದಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಎನ್.ಎ. ಮುರುಗೇಶ್ ತಿಳಿಸಿದರು. ಬ್ಯಾಂಕಿನ ಷೇರು ಬಂಡವಾಳ ರೂ.5.53 ಕೋಟಿ, ಕಾಯ್ದಿಟ್ಟ ಮತ್ತು ಇತರೆ ನಿಧಿಗಳು ರೂ.55.71 ಕೋಟಿ, ಒಟ್ಟು ಠೇವಣಿ ರೂ.320.59 ಕೋಟಿ ಸಂಗ್ರಹಿಸಿದ್ದು, ಸಾಲ ಮತ್ತು ಮುಂಗಡಗಳು ರೂ.262.09 ಕೋಟಿ ನೀಡಲಾಗಿದೆ. ಬ್ಯಾಂಕಿನ ಈ ಸಾಧನೆಗೆ ಗ್ರಾಹಕರ / ಸದಸ್ಯರ ಮತ್ತು ಕಾರ್ಯಕಾರಿ ಮಂಡಲಿ ಸದಸ್ಯರ ಸಲಹೆ ಸಹಕಾರ ಮತ್ತು ಸಿಬ್ಬಂದಿ ವರ್ಗದವರ ಹೆಚ್ಚಿನ ಪರಿಶ್ರಮದಿಂದ ಎಂದು ಹರ್ಷ ವ್ಯಕ್ತಪಡಿಸಿದರು. ಅಲ್ಲದೇ ಬ್ಯಾಂಕಿನ ಸದಸ್ಯರುಗಳಿಗೆ ಆರಾಧ್ಯ ಆಯುಷ್ಮಾನ್ ನಿಧಿ ಸ್ಥಾಪಿಸಿದ್ದು, ಈ ನಿಧಿಯಿಂದ ಸದಸ್ಯರಿಗೆ ಚಿಕಿತ್ಸಾ ವೆಚ್ಚ ನೀಡಲಾಗುತ್ತಿದ್ದು, ಸದರಿ ಸಾಲಿನಲ್ಲಿ 98 ಸದಸ್ಯ ಪಲಾನುಭವಿಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ವೆಚ್ಚ ಒಟ್ಟು ರೂ.12,27,560/- ಗಳನ್ನು ಸಂಬAಧಪಟ್ಟ ಆಸ್ಪತ್ರೆಗಳಿಗೆ ನೇರವಾಗಿ ಪಾವತಿಸಲಾಗಿದೆ. ಮೃತಪಟ್ಟ 115 ಸದಸ್ಯರ ವಾರಸುದಾರರಿಗೆ ಮರಣೋತ್ತರ ನಿಧಿ ರೂ.11,37,000/- ಪಾವತಿಸಲಾಗಿದೆ. ಬ್ಯಾಂಕಿನ ಸಿಬ್ಬಂದಿ ಮತ್ತು ಅವರ ಕುಟುಂಬ ವರ್ಗದವರಿಗೆ ಗ್ರೂಪ್ ಹೆಲ್ತ್ ಇನ್ಸೂರೆನ್ಸ್ ಮಾಡಿಸಲಾಗಿದೆ. ನಮ್ಮ ಬ್ಯಾಂಕಿನ ಸದಸ್ಯರ, ಗ್ರಾಹಕರ ಅನುಕೂಲಕ್ಕಾಗಿ ಈಗಾಗಲೇ ಎ.ಟಿ.ಎಂ. ಕಾರ್ಡ್ಗಳನ್ನು ವಿತರಿಸಲಾಗುತ್ತಿದೆ. ಆಡಳಿತ ಕಛೇರಿಯ ಮುಂಭಾಗದಲ್ಲಿ ಮತ್ತು ಹರಿಹರ ಶಾಖೆಯ ಮುಂಭಾಗದಲ್ಲಿ ಎ.ಟಿ.ಎಂ. ಯಂತ್ರಗಳನ್ನು ಅಳವಡಿಸಿ, ಚಾಲನೆಗೊಳಿಸಲಾಗಿದೆ. ಬ್ಯಾಂಕಿಂಗ್ ವ್ಯವಹಾರವನ್ನು ಡಿಜಿಟಲೈಜ್ ಮಾಡುವ ಉದ್ದೇಶಹೊಂದಿ, ಮೊಬೈಲ್ ಬ್ಯಾಂಕಿಂಗ್, ಎನ್.ಎ.ಸಿ.ಹೆಚ್., ಐ.ಎಂ.ಪಿ.ಎಸ್., ಮತ್ತು ಯು.ಪಿ.ಐ. ಸೌಲಭ್ಯಗಳ ಪ್ರಾಯೋಗಿಕ ಹಂತ ಮುಗಿದಿದ್ದು, ಅತೀ ಶೀಘ್ರದಲ್ಲಿ ನಮ್ಮ ಗ್ರಾಹಕರುಗಳಿಗೆ ಸೇವೆಗೆ ಅವಕಾಶ ಕಲ್ಪಿಸಲಾಗುವುದು. ಆಡಳಿತ ಕಛೇರಿ, ಸಿ.ಒ.ಎಂ. ಶಾಖೆ, ಎಂ.ಸಿ.ಸಿ. ‘ಬಿ’ ಬ್ಲಾಕ್ ಮತ್ತು ಹರಿಹರ ಶಾಖೆಗಳ ಒಳಾಂಗಣವನ್ನು ಇತ್ತೀಚಿನ ಆಧುನಿಕತೆಗೆ ತಕ್ಕಂತೆ ನವೀಕರಿಸಲಾಗಿದೆ. ಬ್ಯಾಂಕಿನ ಆಡಳಿತ ಕಛೇರಿಯ ಮೇಲ್ಬಾಗದಲ್ಲಿ ಸೌರ ವಿದ್ಯುತ್ ಘಟಕ ಸ್ಥಾಪಿಸಲಾಗಿದೆ. ಇದರಿಂದ ಬ್ಯಾಂಕು ತನ್ನದೇ ಆದ ವಿದ್ಯುತ್ ಉತ್ಪಾದನಾ ಘಟಕದಿಂದಾಗಿ ವಿದ್ಯುತ್ಚ್ಛಕ್ತಿ ವೆಚ್ಚವನ್ನು ಕಡಿತಗೊಳಿಸಿದಂತಾಗಿದೆ. ಇದೇ ರೀತಿಯಲ್ಲಿ ನಮ್ಮ ಹರಿಹರ ಶಾಖೆಯ ಕಟ್ಟಡದ ಮೇಲ್ಬಾಗದಲ್ಲಿಯೂ ಸಹ ಸೌರ ವಿದ್ಯುತ್ ಉತ್ಪಾದನಾ ಘಟಕದ ಸ್ಥಾಪನೆಯ ಕೆಲಸ ಪ್ರಗತಿಯಲ್ಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ವೀರಣ್ಣ ಎಸ್.ಕೆ., ವ್ಯವಸ್ಥಾಪನಾ ಮಂಡಲಿಯ ಅಧ್ಯಕ್ಷರು ಮತ್ತು ಹಾಲಿ ನಿರ್ದೇಶಕರಾದ ಲ ಕುಬೇರಪ್ಪ ಎ.ಹೆಚ್., ನಿರ್ದೇಶಕರುಗಳಾದ, ರಮಣ್ಲಾಲ್ .ಪಿ. ಸಂಘವಿ, ಕಿರುವಾಡಿ .ವಿ. ಸೋಮಶೇಖರ್, ಶ್ರೀ ಕುಬೇರಪ್ಪ ಎ.ಹೆಚ್, ಶ್ರೀಮತಿ ಜಯಮ್ಮ ಪರಶುರಾಮಪ್ಪ, ಶಂಕರ್ ಖಟಾವ್ಕರ್, ಪ್ರಭು ಪ್ರಸಾದ್ ಎಸ್.ಕೆ., ಶ್ರೀಮತಿ ಶಶಿಕಲಾ ರುದ್ರಯ್ಯ, ಜ್ಯೋತಿ ಪ್ರಕಾಶ್ ಕೆ.ಎಂ., ವೆಂಕಪ್ಪ ಪಿ.ಹೆಚ್., ನಾಗೇಂದ್ರಚಾರಿ ಬಿ., ಶ್ರೀಮತಿ ಅನಿಲಾ ಇಂಧುದರ್ ನಿಶಾನಿಮಠ್., ಶ್ರೀಮತಿ ಉಮಾ ವಾಗೀಶ್ ಶಿರಸಾಲಿಮಠ್ ಆರ್.ವಿ., ಕಿರಣ್ ಶೆಟ್ಟಿ ವಿಶೇಷ ಆಹ್ವಾನಿತರಾದ ವೀರಣ್ಣ ಜಿ.ಕೆ., ಶಿವಯೋಗಪ್ಪ ಕೆ.ಹೆಚ್., ಮತ್ತು., ವ್ಯವಸ್ಥಾಪನಾ ಮಂಡಲಿಯ ಸದಸ್ಯರಾದ ಬಸವರಾಜ್ ಕೆ.ಎಂ., ಶ್ರೀಮತಿ ವಸುಂದರ ಜೆ.ಸಿ., ಮತ್ತು ಶ್ರೀಮತಿ ಶೈಲಾ ಕೆ.ಎಂ. ಹಾಗೂ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಶಿವಲಿಂಗಸ್ವಾಮಿ ಎಂ., ಉಪಸ್ಥಿತರಿದ್ದರು.