ಲಕ್ಷ್ಮೇಶ್ವರ,ಮಾ.23: ಲಕ್ಷ್ಮೇಶ್ವರ ಪೆÇಲೀಸ್ ಠಾಣಾ ವ್ಯಾಪ್ತಿಯ ರಾಮಗಿರಿ ಚೆಕ್ ಪೆÇೀಸ್ಟ್ ಬಳಿ ಕಾರನ್ನು ತಡೆಗಟ್ಟಿ ಸಿಬ್ಬಂದಿಯವರು ತಪಾಸಣೆ ಮಾಡಿದಾಗ ದಾಖಲೆ ಇಲ್ಲದೆ ಕಾರ್ ನಲ್ಲಿ ಸಾಧಿಸುತ್ತಿದ್ದ 4.55 ಲಕ್ಷ ರೂಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪಿಎಸ್ಐ ಡಿ ಪ್ರಕಾಶ್ ಅವರ ನೇತೃತ್ವದಲ್ಲಿನ ತಂಡ ಸಿಪಿಐ ವಿಕಾಸ್ ಲಮಾಣಿ ಅವರ ಮಾರ್ಗದರ್ಶನದಲ್ಲಿ ರಾಮಗಿರಿ ಕ್ರಾಸ್ ಬಳಿ ಬುಧವಾರ ಲಕ್ಷ್ಮೇಶ್ವರ ಕಡೆ ಹೊರಟಿದ್ದ ಕಾರನ್ನು ತಪಾಸಣೆ ಮಾಡಿದಾಗ ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕುರಿತಂತೆ ಲಕ್ಷ್ಮೇಶ್ವರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.