
ತಿರುಪತಿ,ಅ.೧೨-ತಿರುಮಲ ಪಾದಚಾರಿ ಮಾರ್ಗದಲ್ಲಿ ಚಿರತೆ, ಕರಡಿಗಳ ಓಡಾಟ ಹೆಚ್ಚಾಗಿದೆ.
ಇತ್ತೀಚೆಗಷ್ಟೇ ಅಲಿಪಿರಿ ಮಾರ್ಗದಲ್ಲಿ ಬಾಲಕಿಯೊಬ್ಬಳ ಮೇಲೆ ಚಿರತೆಯೊಂದು ದಾಳಿ ನಡೆಸಿ ಕೊಂದು ಹಾಕಿದ ಹಿನ್ನೆಲೆಯಲ್ಲಿ ಹಾಕಲಾಗಿದ್ದ ಟ್ರ್ಯಾಪ್ ಸಿಸಿ ಕ್ಯಾಮೆರಾದಲ್ಲಿ ಅವುಗಳ ಚಲನವಲನ ದಾಖಲಾಗಿದೆ.
ವಾಕ್ವೇ ಏಳನೇ ಮೈಲಿಗಲ್ಲಿನಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾಗಳಲ್ಲಿ ಮಧ್ಯರಾತ್ರಿ ಕರಡಿ ಮತ್ತು ಎರಡು ಚಿರತೆಗಳು ಓಡಾಡುತ್ತಿರುವುದು ಕಂಡುಬಂದಿದೆ.
ನಿನ್ನೆ ಸಂಜೆ ನರಸಿಂಹಸ್ವಾಮಿ ದೇವಸ್ಥಾನದ ಬಳಿ ಕರಡಿಯೊಂದು ಓಡಾಡಿದೆ. ಇದರಿಂದ ಎಚ್ಚೆತ್ತ ಟಿಟಿಡಿ ಅಧಿಕಾರಿಗಳು ಪಾದಯಾತ್ರೆಯಲ್ಲಿ ಭಕ್ತರಿಗೆ ತೊಂದರೆಯಾಗದಂತೆ ಕ್ರಮಕೈಗೊಂಡಿದ್ದಾರೆ.