ಸಂಜೆವಾಣಿ ವಾರ್ತೆ
ಹೊನ್ನಾಳಿ.ಅ.೨೧: ವಿದ್ಯೆ ಸಾಧಕನ ಸ್ವತ್ತು ವಿನಹ ಸೋಮಾರಿಯ ಸ್ವತ್ತು ಅಲ್ಲ ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ತಿಳಿಸಿದರುಅವರು ಹೊನ್ನಾಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಎಸ್ ಎಸ್ ಎಲ್ ಸಿ. ಪರೀಕ್ಷೆಯಲ್ಲಿ 125ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳಿಗೆ ಕನ್ನಡ ಕುವರ. ಕನ್ನಡ ಕುವರಿ . ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಖಾಸಗಿ ಶಾಲೆಗಳ ಶಿಕ್ಷಣಗಿಂತ ಗುಣಾತ್ಮಕ ಶಿಕ್ಷಣ ಉತ್ತಮವಾಗಿದೆ ವಿದ್ಯಾರ್ಥಿಗಳು ಆಸಕ್ತಿಯಿಂದ ಕಲಿಕೆಯನ್ನ ಮುಂದುವರೆಸಿ ಉಳಿದ ವಿದ್ಯಾರ್ಥಿಗಳಿಗಿಂತ ಹೆಚ್ಚು ಅಂಕ ಪಡೆದಾಗ ಮಾತ್ರ ಉಳಿದ ವಿದ್ಯಾರ್ಥಿಗಳಿಗೆ ಮಾದರಿಯಾಗುತ್ತೀರಿ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಶಿಕ್ಷಕರು ಶಾಲೆಯಲ್ಲಿ ಅವಕಾಶ ನೀಡಿದಾಗ ಮತ್ತು ಮನೆಯಲ್ಲಿ ಪೋಷಕರು ಮಕ್ಕಳ ಆಸಕ್ತಿಯನ್ನು ಕಲಿಕೆಯಲ್ಲಿ ಹೆಚ್ಚು ಆಗುವಂತೆ ನೋಡಿಕೊಳ್ಳುತ್ತಿರುವ ಪೋಷಕರು ಯಾವಾಗಲೂ ಜೀವನದಲ್ಲಿ ಉಳಿಯುತ್ತಾರೆ ದೇಶ ಅಭಿವೃದ್ಧಿಯಾಗಬೇಕಾದರೆ ವಿದ್ಯಾವಂತರ ಸಂಖ್ಯೆ ಹೆಚ್ಚಾಗಬೇಕು ಎಂದರು.ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ ಮೂರು ತಿಂಗಳಿಂದ ರಾಜ್ಯದಲ್ಲಿಬರಬೇಕಾದ ಮಳೆ ಬಂದಿಲ್ಲ ಇದರಿಂದ ರಾಜ್ಯದ ಶಾಸಕರಿಗೆ ಬಿಪಿ. ಶುಗರ್.ಹೆಚ್ಚಾಗಿದೆ ಮಳೆ ಬಾರದೆ ಬೆಳೆಗಳು ಒಣಗಿವೆ ಅಧಿಕಾರಿಗಳೊಂದಿಗೆ ಜನರೊಂದಿಗೆ ಸಚಿವರೊಂದಿಗೆ ಫೋನ್ ಮುಖಾಂತರ ಮಾತನಾಡಿ ಬಿಪಿ ಶುಗರ್ ಹೆಚ್ಚಾಗಿದೆ ಎಂದು ಹಾಸ್ಯ ಚಟಾಕಿ ಆರಿಸಿ ಮಾತು ಮುಗಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ನಂಜುರಾಜ್ ಮಾತನಾಡಿ ಪ್ರತಿಭಾವಂತ ಮಕ್ಕಳನ್ನ ಗುರುತಿಸಿ ಪುರಸ್ಕಾರ ನೀಡಿದಾಗ ಅವರಿಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಎಂದರು.ಕಾರ್ಯಕ್ರಮದಲ್ಲಿ ತಾಲೂಕಿನಲ್ಲಿ ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಯಾದ 44 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತುಈ ಸಂದರ್ಭದಲ್ಲಿ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರು.ವಾಮದೇವಪ್ಪ.ಜಿಲ್ಲಾ ಸಂಘಟನಾ ಕಾರ್ಯದರ್ಶಿ. ಜಿಗಳಿ ಪ್ರಕಾಶ್ ಜಿಲ್ಲಾ ಗೌರವ ಕಾರ್ಯದರ್ಶಿಗಳು ರೇವಣಸಿದ್ದಪ್ಪ ಅಂಗಡಿ. ತಾಲೂಕ್ ಅಧ್ಯಕ್ಷರು. ಮುರಿಗಪ್ಪ ಗೌಡ. ಪ್ರಿನ್ಸಿಪಾಲ್ ಧನಂಜಯ್. ತಾಲೂಕು ಪದಾಧಿಕಾರಿಗಳಾದ. ಪದಾಧಿಕಾರಿಗಳಾದ ಗೋವಿಂದಪ್ಪ ಶೇಖರಪ್ಪ. ಎನ್ ಕೆ ಆಂಜನೇಯ ಹಾಗೂ ಹೋಬಳಿ ಘಟಕದ ಅಧ್ಯಕ್ಷರಾದ ಬಸವರಾಜಪ್ಪ. ಜಗನ್ನಾಥ್. ಕೆ. ಪಿ… ಎ ಕೆ.ಹಾಲೇ ಶಪ್ಪ ರಾಂಪುರ ಇತರರು ಪಾಲ್ಗೊಂಡಿದ್ದರು.