
ಕೆ.ಆರ್.ಪೇಟೆ. ಏ.22:- ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಮತ್ತೊಮ್ಮೆ ನನ್ನನ್ನು ಗೆಲ್ಲಿಸಿ ನಿಮ್ಮ ಮನೆ ಮಗನಂತೆ ಜನರ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಸಚಿವ ಡಾ.ಕೆ.ಸಿ.ನಾರಾಯಣಗೌಡ ಮನವಿ ಮಾಡಿದರು.
ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ದೊಡ್ಡಕ್ಯಾತನಹಳ್ಳಿ ಗ್ರಾಮದ ಶ್ರೀರಾಮದೇವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ದೊಡ್ಡಕ್ಯಾತನಹಳ್ಳಿ, ಸಂತೇಬಾಚಹಳ್ಳಿ, ರಂಗನಾಥಪುರ-ಹರಪನಹಳ್ಳಿ ಕ್ರಾಸ್ ಗ್ರಾಮ ಪಂಚಾಯಿತಿ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡು ಮತಯಾಚನೆ ಮಾಡಿದರು.
ನಾನು ಈಗಲೂ ಬಾಡಿಗೆ ಮನೆಯಲ್ಲಿ ನೆಮ್ಮದಿಯಾಗಿ ವಾಸ ಮಡುತ್ತಿದ್ದೇನೆ ಕೆ.ಆರ್.ಪೇಟೆಯಲ್ಲಿ ಕಾಂಪ್ಲೆಕ್ಸ್ ಕಟ್ಟುವುದಕ್ಕಾಗಲಿ,ಬೇರೆಯವರ ಜಮೀನು ಹೊಡೆಯುವುದಕ್ಕಾಗಲಿ,ಜಲ್ಲಿ ಕ್ರಷರ್ ಮಾಡುವುದಕ್ಕಾಗಲಿ ಬಂದಿಲ್ಲ ಈ ತಾಲೂಕಿನ ಜನರ ಸೇವೆ ಮಾಡುವುದಕ್ಕಾಗಿ ಬಂದಿದ್ದೇನೆ ನನಗೆ ಹಣ ಬೇಕಾಗಿಲ್ಲ ನಿಮ್ಮ ಸೇವೆ ಮಾಡುವ ಅವಕಾಶ ಬೇಕು ಆದ್ದರಿಂದ ನನಗೆ ಮತ್ತೊಮ್ಮೆ ಅವಕಾಶ ಕೊಡಿ ನಿಮ್ಮ ಋಣ ತೀರಿಸುತ್ತೇನೆ ನಮ್ಮ ತಾಲ್ಲೂಕು ನೆಮ್ಮದಿ ಶಾಂತಿಯುತವಾಗಿರಬೇಕು ಅದೇ ನನ್ನ ಗುರಿ ಎಂದು ನಾರಾಯಣಗೌಡ ಪ್ರಚಾರ ಸಭೆಯಲ್ಲಿ ಮನವಿ ಮಾಡಿದರು.
ನಂತರ ಬಿಲ್ಲೇನಹಳ್ಳಿ ಗ್ರಾಮಕ್ಕೆ ತೆರಳಿ ಜೆಡಿಎಸ್ ಮುಖಂಡ ತಾ.ಪಂ.ಮಾಜಿ ಸದಸ್ಯ ರಾಜಾಹುಲಿ ದಿನೇಶ್ ಮನೆಗೆ ಭೇಟಿ ನೀಡಿ ನೀವು ಬಿಜೆಪಿ ಪಕ್ಷ ಸೇರಿ ತಮ್ಮನ್ನು ಬೆಂಬಲಿಸುವಂತೆ ದಿನೇಶ್ ರವರಲ್ಲಿ ಮನವಿ ಮಾಡಿದರು. ನಾರಾಯಣಗೌಡರ ಮನವಿಗೆ
ಸಕಾರಾತ್ಮಕವಾಗಿ ಸ್ಪಂದಿಸಿ ಶೀಘ್ರದಲ್ಲಿಯೇ ತಮ್ಮ ಬೆಂಬಲಿಗರೊಂದಿಗೆ ಚರ್ಚಿಸಿ ಪಕ್ಷ ಸೇರಿ ನಾರಾಯಣಗೌಡರ ಗೆಲುವಿಗೆ ದುಡಿದು ವಿಜಯಮಾಲೆ ತೊಡಿಸಲು
ಶ್ರಮಿಸಲಾಗುವುದು ಎಂದು ರಾಜಾಹುಲಿ ದಿನೇಶ್ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಅಘಲಯ ಎ.ಎಸ್.ಶ್ರೀಧರ್,ಬಿಲ್ಲೇನಹಳ್ಳಿ ಕುಮಾರ್,ತಾ.ಪಂ.ಮಾಜಿ ಅಧ್ಯಕ್ಷ ಜವರಾಯಿಗೌಡ,ಡಿ.ಪಿ.ಪರಮೇಶ್, ಮಾಳಗೂರು ಚಂದ್ರಶೇಖರ್,ನಾಯಕನಹಳ್ಳಿಮೊಗಣ್ಣಗೌಡ, ಗೊರವಿ ಸಂತೆಬಾಚಹಳ್ಳಿ ಮೋಹನ್, ಕ್ರಾಸ್ ಶಿವಣ್ಣ, ಜಯರಾಮೇಗೌಡ, ಗೊರವಿಶ್ರೀಧರ್, ಹೆತ್ತಗೋನಹಳ್ಳಿ ನಾಗರಾಜು, ನಾಯಕನಹಳ್ಳಿ ಲೋಕೇಶ್, ಮಂಜೇಗೌಡ, ಮರೀಗೌಡ, ಸೋಮಶೇಖರ್, ಚಂದ್ರ ಮೋಹನ್, ಸಚಿವರ ಆಪ್ತ ಸಹಾಯಕ ದಯಾನಂದ್ ಸೇರಿದಂತೆ ಇತರರು ಹಾಜರಿದ್ದರು.