ತಾಯಿ ಆಶೀರ್ವಾದ ಪಡೆದ ಸಚಿವ ಎಂಬಿ ಪಾಟೀಲ

ವಿಜಯಪುರ: ಜೂ.5:ಮೂರನೇ ಬಾರಿ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆತವರುಜಿಲ್ಲೆ ವಿಜಯಪುರಕ್ಕೆ ಆಗಮಿಸಿರುವ ಬೃಹತ್ ಮತ್ತು ಮಧ್ಯಮಕೈಗಾರಿಕೆ ಹಾಗೂ ಮೂಲಭೂತ ಸೌಕರ್ಯಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಅವರುತಮ್ಮತಾಯಿ ಕಮಲಾಬಾಯಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.
ಈ ಕುರಿತುಟ್ವೀಟ್ ಮಾಡಿರುವ ಅವರು, ತಾಯಿಗಿಂತಲೂ ಮಿಗಿಲಾದದೇವರಿಲ್ಲ. ಮಮತೆ, ಪ್ರೀತಿ-ವಾತ್ಸಲ್ಯತ್ಯಾಗ, ಅನುಕಂಪ ಹೀಗೆ ಎಲ್ಲ ಪದಗಳ ಮೂರ್ತರೂಪವೇತಾಯಿ. ನನ್ನ ಬೆಳವಣಿಗೆ, ಏಳಿಗೆ, ಶ್ರೇಯಸ್ಸು-ಯಶಸ್ಸುಎಲ್ಲಕ್ಕೂ ನನ್ನತಾಯಿಯೇಕಾರಣ. ತಾಯಿಯ ಆಶೀರ್ವಾದ ಪಡೆದ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ರಾಜಕೀಯ ಮತ್ತು ಸಾಮಾಜಿಕವಾಗಿಎಷ್ಟೇಉನ್ನತ ಸ್ಥಾನಕ್ಕೇರಿದರೂ ಎಂ. ಬಿ. ಪಾಟೀಲರುತಮ್ಮ ಈ ಸಾಧನೆಗಳಿಗೆ ಕಾರಣರಾದವರನ್ನು ಸದಾ ಸ್ಮರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ತಾವುಆಯ್ಕೆಯಾಗಲುಕಾರಣರಾದ ಮತದಾರರು, ಜಲಸಂಪನ್ಮೂಲ ಸಚಿವರಾಗಿಜನಮೆಚ್ಚುವ ಕೆಲಸ ಮಾಡಲು ಮಾರ್ಗದರ್ಶನ ನೀಡಿ ಆಶೀರ್ವದಿಸಿದ ನಡೆದಾಡುವದೇವರುಎಂದೇ ಹೆಸರಾಗಿರುವ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಹಾಗೂ ಉತ್ತಮ ಸಂಸ್ಕಾರ ಪಡೆಯಲು ಹಾಗೂ ರಾಜಕೀಯವಾಗಿ ಸಾಧನೆ ಮಾಡಲು ಸ್ಪೂರ್ತಿಯಾಗಿರುವತಮ್ಮತಂದೆ ಬಿ. ಎಂ. ಪಾಟೀಲ ಅವರ ಬಗ್ಗೆ ಎಂ. ಬಿ. ಪಾಟೀಲರು ಸಮಯ ಸಿಕ್ಕಾಗಲೆಲ್ಲ ಉಪಕಾರ ಸ್ಮರಣೆ ಮಾಡುತ್ತಿರುತ್ತಾರೆ.
ಈಗಲೂ ಅಷ್ಟೇ, ಸಚಿವರಾದ ನಂತರ ವಿಜಯಪುರಕ್ಕೆ ಮೊದಲ ಬಾರಿಗೆ ಆಗಮಿಸಿದ ಅವರು, ನಾನಾ ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದಾರೆ. ಅಲ್ಲದೇ, ತಮ್ಮತಾಯಿಯನ್ನು ಭೇಟಿಯಾಗಿ ಸಂತಸ ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿಅವರ ಸಹೋದರ ಮತ್ತು ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಮತ್ತುಕುಟುಂಬ ಸದಸ್ಯರುಕೂಡ ಉಪಸ್ಥಿತರಿದ್ದರು.
ಮಾಜಿ ಸಚಿವ ದಿ. ಬಿ. ಎಂ. ಪಾಟೀಲರ ಪತ್ನಿಯಾಗಿದ್ದರೂ ಮೊದಲಿನಿಂದಲೂ ಕಮಲಾಬಾಯಿ ಪಾಟೀಲ ಅವರುಜನಸಾಮಾನ್ಯರೊಂದಿಗೆ ಸರಳವಾಗಿ ಬೆರೆಯುತ್ತ ಮನೆಗೆ ಬಂದವರನ್ನು ಅತಿಥಿಗಳೆಂದು ಪ್ರೀತಿ ಮತ್ತುಆದರದಿಂದಅತಿಥಿ ಸತ್ಕಾರ ಮಾಡುತ್ತಗೌರವತೋರಿಸುತ್ತಿದ್ದಾರೆ. ಈಗಲೂ ಕೂಡಅದೇರೀತಿ ಸರಳ ಜೀವನ ನಡೆಸುವ ಮೂಲಕ ಅವರುಜನರ ಪ್ರೀತಿಗೆ ಪಾತ್ರರಾಗಿದ್ದಾರೆ.
ಈ ಮಧ್ಯೆ, ಕೆಲಸ ಕಾರ್ಯಗಳ ಒತ್ತಡದ ನಡುವೆಯೂ ವಿಜಯಪುರಕ್ಕೆ ಬಂದಾಗ ಎಂ. ಬಿ. ಪಾಟೀಲ ಅವರುತಮ್ಮತಾಯಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುತ್ತಾರೆ. ತಾವು ಮಾಡುತ್ತಿರುವಜನಪರ ಕೆಲಸ ಕಾರ್ಯಗಳು, ಜನರಕಲ್ಯಾಣಕ್ಕಾಗಿ ಹೊಂದಿರುವ ಕನಸುಗಳ ಕುರಿತು ಮಾಹಿತಿ ನೀಡಿತಾಯಿಯಿಂದ ಸಲಹೆಯನ್ನು ಪಡೆಯುವುದು ವಾಡಿಕೆಯಾಗಿದೆ. ಹೀಗಾಗಿಯೇತಮ್ಮ ಕೆಲಸ ಕಾರ್ಯಗಳ ಕುರಿತುಯಾರೇ ಕೇಳಿದರೂ ತಮಗೆಉತ್ತಮ ಸಂಸ್ಕಾರ ನೀಡಿ ಆಶೀರ್ವದಿಸುತ್ತಿರುವತಾಯಿ ಕಮಲಾಬಾಯಿ, ತಮ್ಮನ್ನು ಏಳಿಗೆಗೆ ಕಾರಣರಾದತಂದೆ ದಿ. ಬಿ. ಎಂ. ಪಾಟೀಲ, ಜನಸೇವೆಗೆ ಸ್ಪೂರ್ತಿಯಾದ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳನ್ನು ಸಚಿವರು ಸ್ಮರಿಸುತ್ತಿರುವುದುಗಮನಾರ್ಹವಾಗಿದೆ. ಅಷ್ಟೇಅಲ್ಲ, ವಿಜಯಪುರದಿಂದ ಹೊರಗಿದ್ದರೂ ಪ್ರತಿನಿತ್ಯದೂರವಾಣಿ ಮೂಲಕ ತಾಯಿಯಜೊತೆ ಸಂಪರ್ಕದಲ್ಲಿರುತ್ತಾರೆ.
ಈಗ ವಿಜಯಪುರಕ್ಕೆ ಬಂದ ನಂತರ ಸಚಿವರುತಾಯಿಯದರ್ಶನದ ಬಳಿಕ ಬಿ. ಎಲ್. ಡಿ. ಇ ಸಂಸ್ಥೆಯಆವರಣದಲ್ಲಿರುವ ದಿ. ಬಿ. ಎಂ. ಪಾಟೀಲ ಅವರಗದ್ದುಗೆಗೆ ತೆರಳಿ ನಮನ ಸಲ್ಲಿಸಿದರು. ಅಲ್ಲದೇ, ವಚನಪಿತಾಮಹಡಾ. ಫ. ಗು. ಹಳಕಟ್ಟಿ ಹಾಗೂ ಬಂಥನಾಳ ಶಿವಯೋಗಿಗಳ ದೇವಸ್ಥಾನಕ್ಕೆ ತೆರಳಿ ನಮಸ್ಕರಿಸಿದರು. ನಂತರಜ್ಞಾನಯೋಗಾಶ್ರಮಕ್ಕೆ ತೆರಳಿ ನಮಸ್ಕರಿಸಿ ಆಶೀರ್ವಾದ ಪಡೆದರು.