
ಸಿರುಗುಪ್ಪ ಜೂ 06 : ನಗರದ ತಹಶೀಲ್ದಾರ್ ಕಛೇರಿಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ತಹಶೀಲ್ದಾರ್ ಎನ್.ಆರ್.ಮಂಜುನಾಥ ಸ್ವಾಮಿ ಸಸಿ ನೆಟ್ಟು ನೀರು ಹಾಕುವ ಮೂಲಕ ಪರಿಸರ ದಿನಾಚರಣೆ ಆಚರಿಸಿದರು.
ನಂತರ ಮಾತನಾಡಿ ಪ್ರತಿಯೊಬ್ಬ ವ್ಯಕ್ತಿ ತಮ್ಮ ವೈಕ್ತಿಕವಾಗಿ ಜೀವಿತಾವಧಿಯಲ್ಲಿ ತಮ್ಮ ಕೈಲದಾಷ್ಟು ಸಸಿಗಳನ್ನು ಬೆಳೆಸಿ ಉಳಿಸಿದರೆ ಮುಂದಿನ ತಮ್ಮ ಪೀಳಿಗೆಗೆ ವರವಾಗುತ್ತದೆಂದು ತಿಳಿಸಿದರು.
ಪುರಸಭೆ ಮಾಜಿ ಅಧ್ಯಕ್ಷರಾದ ಬಿ.ಎಂ.ಸತೀಶ, ಕೆ.ವೆಂಕಟರಾಮರೆಡ್ಡಿ, ಆಮ್ಮ ಆದ್ಮಿ ಪಕ್ಷದ ಮುಖಂಡ ಟಿ.ಧರಪ್ಪ ನಾಯಕ, ನೈಸರ್ಗಿಕ ಸಂಪತ್ತು ಹಾಗೂ ಪರಿಸರ ಸಂರಕ್ಷಣೆ ಸೇವಾ ಟ್ರಸ್ಟ್ ತಾಲೂಕು ಅಧ್ಯಕ್ಷ ಸಿರಿಗೇರಿ ಮಂಜುನಾಥ, ಕಾರ್ಯದರ್ಶಿ ರವಿಕುಮಾರ, ಮುಖಂಡರಾದ ಕಂಬಳಿ ಮಲ್ಲಿಕಾರ್ಜುನ, ಎಂ.ಸಿದ್ದಪ್ಪ, ಶಿವಕುಮಾರ, ವೆಂಕಟೇಶ, ದೇವ, ನಾಗಪ್ಪ ಹಾಗೂ ತಾಲೂಕು ಆಡಳಿತ ಸಿಬ್ಬಂದಿ ಇದ್ದರು.