ತಗಡೂರು ರಾಮಚಂದ್ರರಾಯರು ಮೈಸೂರು ಭಾಗದ ಮಹಾನ್ ಶಿಕ್ಷಣ ಪ್ರೇಮಿ: ಚಂದ್ರಕಲಾ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಅ.10:- ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ತಗಡೂರು ರಾಮಚಂದ್ರರಾಯರು ಮೈಸೂರು ಭಾಗದ ಮಹಾನ್ ಶಿಕ್ಷಣ ಪ್ರೇಮಿ ಹಾಗೂ ಸಾಮಾಜಿಕ ವ್ಯಕ್ತಿಯಾಗಿದ್ದವರು ಎಂದು ನಿವೃತ್ತ ಶಿಕ್ಷಕರಾದ ಚಂದ್ರಕಲಾ ಎಂದು ಬಣ್ಣಿಸಿದರು.
ನಗರದ ಜೈಹಿಂದ್ ಕಟ್ಟೆಯಲ್ಲಿ ಜೈಹಿಂದ್ ಪ್ರತಿμÁ್ಠನ ಮತ್ತುಋಗ್ವೇದಿ ಯೂತ್ ಕ್ಲಬ್ ವತಿಯಿಂದ ಮೈಸೂರು ಗಾಂಧಿ ತಗಡೂರು ರಾಮಚಂದ್ರರಾವ್‍ರವರ ಜನ್ಮದಿನವನ್ನು ಆಚರಿಸಲಾಯಿತು.
ಈ ಸಮಯದಲಿ ್ಲತಗಡೂರು ರಾಮಚಂದ್ರರಾವ್ ಭಾವಚಿತ್ರಕ್ಕೆ ಪುಷ್ಪ ಹಾಗೂ ನೂಲಿನ ಹಾರ ಅರ್ಪಿಸಿ ಮಾತನಾಡಿದ ಅವರು ತಗಡೂರು ರಾಮಚಂದ್ರರಾವ್ ಅವರ ಪ್ರಭಾವದಿಂದ ನೂರಾರು ಜನ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ, ಭಾರತದ ಸೇವೆ ಸಲ್ಲಿಸಿದರು ಎಂದರು.
ಜೈ ಹಿಂದ್ ಪ್ರತಿμÁ್ಠನದ ಅಧ್ಯಕ್ಷರಾದ ಸುರೇಶ್‍ಎನ್‍ಋಗ್ವೇದಿ ಮಾತನಾಡಿ ತಗಡೂರು ರಾಮಚಂದ್ರರಾಯರು ತಮ್ಮ ಬಾಲ್ಯದಲ್ಲೇ ಮಹಾತ್ಮಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿ ಸೈಮನ್ ಆಯೋಗದ ವಿರುದ್ಧ ಹೋರಾಟ ನಡೆಸಿ ಮೈಸೂರು ಭಾಗದ ಮೊದಲ ರಾಜಕೀಯ ಕೈದಿಯಾದವರು.
ತಗಡೂರು ರಾಮಚಂದ್ರರಾಯರು ಮಹಾತ್ಮ ಗಾಂಧೀಜಿಯವರನ್ನು ಮೈಸೂರು ತಗಡೂರು ಬದನವಾಳು ಗ್ರಾಮಗಳಿಗೆ ಕರೆ ತಂದವರು. ಇಡೀ ಜೀವನವನ್ನು ಭಾರತದ ಸ್ವಾತಂತ್ರ್ಯ ಚಳುವಳಿ ಹಾಗೂ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಲಕ್ಷಾಂತರ ಜನರಿಗೆ ಶಿಕ್ಷಣ ನೀಡಿದ ಸರಳ ಜೀವಿ ಎಂದರು.
ಈ ಕಾರ್ಯಕ್ರಮದಲ್ಲಿ ಜೈಹಿಂದ್ ಪ್ರತಿμÁ್ಠನದ ಕುಸುಮ, ಶ್ರಾವ್ಯ ಇದ್ದರು.