
ದಾವಣಗೆರೆ.ಏ.೧೧; ನಗರದ ಪಿಸಾಳೆ ಕಾಂಪೌಂಡ್ ನಲ್ಲಿರುವ ಗುಳ್ಳಮ್ಮನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಡಾ. ಪ್ರಭಾ ಮಲ್ಲಿಕಾರ್ಜುನ ರವರು ಪಕ್ಷದ ಅಭ್ಯರ್ಥಿ ಎಸ್ ಎಸ್ ಮಲ್ಲಿಕಾರ್ಜುನ್ ರವರ ಪರವಾಗಿ ರೈತರ ಬೀದಿ , ಪಿಸಾಳೆ ಕಾಂಪೌಂಡ್ ಪಿಜಿ ಬಡಾವಣೆ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಮನೆ ಮನೆ ಪ್ರಚಾರ ಮಾಡಿದರು. ಈ ಸಂದರ್ಭದಲ್ಲಿ ವಾರ್ಡಿನ ಮಾಜಿ ಪಾಲಿಕೆ ಸದಸ್ಯ ದಿನೇಶ್ ಕೆ ಶೆಟ್ಟಿ , ಲತೀಕ ದಿನೇಶ್ ಕೆ ಶೆಟ್ಟಿ, ಮಾಜಿ ಮೇಯರ್ ಅನಿತ ಬಾಯಿ, ಡಾ. ಶಾಂತಲಾ, ವಿನುತಾ ,ಉತ್ತರ ವಲಯ ಪ್ರಧಾನ ಕಾರ್ಯದರ್ಶಿ ಎಂ. ಮನು, ಉತ್ತರ ವಲಯ ಮಹಿಳಾ ಅಧ್ಯಕ್ಷ ರಾಜೇಶ್ವರಿ, ದ್ರಾಕ್ಷಣಮ್ಮ , ವಾರ್ಡ್ ಅಧ್ಯಕ್ಷ ಮಧು, ವಾರ್ಡಿನ ಮುಖಂಡರಾದ ವೆಂಕಟೇಶ್ , ಯುವರಾಜ್ , ಪರಶುರಾಮ್ , ಪಂಚಪ್ಪ , ಸರಳ, ಸಹನಾ , ಗಿರಿಜಮ್ಮ , ಸವಿತಾ, ಆಶಾ,ರಾಗಿಣಿ , ಗೀತಾ , ಸುನಂದಮ್ಮ, ಅಂಕಿತ, ದೀಪ , ಅಂಬಿಕಾ ಪದ್ಮ, ಹಾಗೂ ಜಿಲ್ಲಾ ಸಾಮಾಜಿಕ ಜಾಲತಾಣ ಹರೀಶ್ ಬಸಾಪುರ ಕಾರ್ಯಕರ್ತರು ಹಾಗೂ ಎಸ್ ಎಸ್ ಹಾಗೂ ಎಸ್ಎಸ್ಎಂ ಅಭಿಮಾನಿಗಳು, ವಾರ್ಡಿನ ಮುಖಂಡರು ಕಾರ್ಯಕರ್ತರು ಉಪಸಿತರಿದ್ದರು.