
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.26: ನಗರದ ಶ್ರೀಜೈನ ಶ್ವೇತಾಂಬರ ತೇರಪಂತ್ ಸಭಾದ ಸಮಾಜದ ಮುಖಂಡರೊಂದಿಗೆ
ಕೇಂದ್ರ ಸಚಿವ ಕೃಷ್ಣನ್ ಪಾಲ್ ಗುರ್ಜರ್, ಬಿಜೆಪಿ ಅಭ್ಯರ್ಥಿ ಸೋಮಶೇಖರ ರೆಡ್ಡಿ ಜೊತೆ ಬಿಜೆಪಿಗೆ ಬೆಂಬಲ ಸೂಚಿಸುವಂತೆ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಜೈನ ಸಮಾಜದ ಅಧ್ಯಕ್ಷ ಉತ್ಸವ್ ಲಾಲ್ ಜೈನ್, ಮುಖಂಡರಾದ ದುಂಗರ್ ಚಂದ್ ಜೈನ್, ಪುರೋಹಿತ ಸಮಾಜದ ಪ್ರಮುಖರಾದ ಪ್ರತಾಪ್ ಸಿಂಗ್,
ಚೌದ್ರಿ ಸಮಾಜದ ಪ್ರಮುಖರಾದ ದಲಾರಾಂ ಚೌದರಿ, ಭಾಜಪ ಜಿಲ್ಲಾಧ್ಯಕ್ಷ ಮುರಾರಿಗೌಡ ಮೊದಲಾದವರು ಭಾಗಿಯಾಗಿದ್ದರು.