ಜೆ.ಇ.ಇ. ಆಲ್ ಇಂಡಿಯಾ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ

ಬೀದರ:ಮೇ.4: ಶ್ರೀ ವೆಂಕಟೇಶ್ವರ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಸಪ್ತಗಿರಿ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಜೆ.ಇ.ಇ. ಆಲ್ ಇಂಡಿಯಾ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಇಂದು ದಿನಾಂಕ: 01-05-2023 ರಂದು ಸಂಸ್ಥೆಯ ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು. ಅದರಲ್ಲಿ ಅಭಿಜೀತ ರವಿ ಆಲ್ ಇಂಡಿಯಾ ರ್ಯಾಂಕ್ 306, ಚಾಮುಂಡೇಶ್ವರಿ ಮಲ್ಲಿಕಾರ್ಜುನ ಆಲ್ ಇಂಡಿಯಾ ರ್ಯಾಂಕ್ 525, ರಕ್ಷಿತಾ ತಂದೆ ಗಣಪತಿ ಆಲ್ ಇಂಡಿಯಾ ರ್ಯಾಂಕ್ 607, ರಾಜಶೇಖರ ಬಂಡೆಪ್ಪಾ ಆಲ್ ಇಂಡಿಯಾ ರ್ಯಾಂಕ್ 962, ಅಕ್ಷತಾ ತಂದೆ ಭೀಮಗೊಂಡ ಆಲ್ ಇಂಡಿಯಾ ರ್ಯಾಂಕ್ 981, ಪಲ್ಲವಿ ತಂದೆ ವಿಠಲ ಆಲ್ ಇಂಡಿಯಾ ರ್ಯಾಂಕ್ 1021, ಅಶ್ವಿನಿ ತಂದೆ ಮಾಣಿಕ ಆಲ್ ಇಂಡಿಯಾ ರ್ಯಾಂಕ್ 13571, ಕೃಷ್ಣಾ ತಂದೆ ಅಂಬಾದಾಸ ಆಲ್ ಇಂಡಿಯಾ ರ್ಯಾಂಕ್ 14211, ಶಿವಾರೆಡ್ಡಿ ತಂದೆ ಗೋಪಾಲರೆಡ್ಡಿ ಆಲ್ ಇಂಡಿಯಾ ರ್ಯಾಂಕ್ 15047, ನಿತಿಶ ತಂದೆ ಚಂದ್ರಕಾಂತ ಆಲ್ ಇಂಡಿಯಾ ರ್ಯಾಂಕ್ 15461 ಇವರೆಲ್ಲರೂ ಜೆ.ಇ.ಇ. ಒಚಿiಟಿs ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಉತ್ತಮ ರ್ಯಾಂಕ್ ಪಡೆದು, ಕಾಲೇಜಿಗೆ ಕೀರ್ತಿ ತಂದಿರುತ್ತಾರೆ ಹಾಗೂ ಸಂಗಮೇಶ ತಂದೆ ರಾಜಕುಮಾರ, ಭಾಗ್ಯಶ್ರೀ ತಂದೆ ದಶರಥ, ಐಶ್ವರ್ಯ ತಂದೆ ರಮೇಶ, ವೈಷ್ಣವಿ ತಂದೆ ರಮೇಶ, ಬಸವಆದಿತ್ಯ ತಂದೆ ಗಣಪತಿ, ವಿಜ್ಞೇಶ ತಂದೆ ಅಮರೇಶ, ಸಹನಾ ತಂದೆ ಶಿವರಾಜ, ಶ್ವೇತಾ ತಂದೆ ಭೀಮಶಾ, ಸೈಯದ ಸೊಹೇಲ್ ತಂದೆ ಸೈಯದ ಇಸ್ಮಾಯಿಲ, ದಿಕ್ಷಿತಾ ತಂದೆ ಶಿವರಾಜ, ಮನಿಷ ತಂದೆ ಶೇಷಪ್ಪಾ, ಸ್ನೇಹಾ ತಂದೆ ದೇವೆಂದ್ರಪ್ಪಾ ಮೇಲಿನ ವಿದ್ಯಾರ್ಥಿಗಳು ಜೆ.ಇ.ಇ. ಒಚಿiಟಿs ನಲ್ಲಿ ಅರ್ಹತೆಯನ್ನು ಹೊಂದಿರುತ್ತಾರೆ.

2022-23ನೇ ಸಾಲಿನ ಏಪ್ರೀಲ್‍ನಲ್ಲಿ ನಡೆದ ಪ್ರವೇಶ ಪರೀಕ್ಷೆಗೆ ಐ.ಐ.ಟಿ./ ಎನ್.ಐ.ಟಿ.ಗೆ ಪ್ರವೇಶ ಪಡೆಯಲು ಕೇಂದ್ರ ಸರ್ಕಾರದ ಪ್ರವೇಶ ಪರೀಕ್ಷೆಯಲ್ಲಿ 8 ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆದಿದ್ದು, ಅದರಲ್ಲಿ ನಮ್ಮ ಕಾಲೇಜಿನಲ್ಲಿ 22 ವಿದ್ಯಾರ್ಥಿಗಳು ಆಯ್ಕೆಯಾಗಿ ಉತ್ತಮ ಸಾಧನೆ ಮಾಡಿ, ಕಾಲೇಜು ಹಾಗೂ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ.

ವಿದ್ಯಾರ್ಥಿಗಳ ಸಾಧನೆಗೆ ಶ್ರೀ ವೆಂಕಟೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀನಿವಾಸ ಡಿ. ತಾಂದಳೆ, ಸಂಸ್ಥೆಯ ಕಾರ್ಯದರ್ಶಿಗಳಾದ ಗೋಪಾಲ ಡಿ. ತಾಂದಳೆ ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ ಹಾಗೂ ಸಪ್ತಗಿರಿ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಗೋವಿಂದ ಡಿ. ತಾಂದಳೆ ಹಾಗೂ ಕಾಲೇಜಿನ ಎಲ್ಲಾ ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಹರ್ಷವ್ಯಕ್ತಪಡಿಸಿ, ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಕಾಲೇಜಿನ ಪರವಾಗಿ ಅಭಿನಂದನೆಗಳು ಸಲ್ಲಿಸಿದ್ದಾರೆ.