ಜೆಸ್ಕಾಂ ಅಧಿಕಾರಿಗಳಿಗೆ ಕೆಆರ್‍ಇಡಿಎಲ್ ಕಾರ್ಯಾಗಾರ

ಕಲಬುರಗಿ,ಮಾ 13: ಜೆಸ್ಕಾಂ ಅಧಿಕಾರಿಗಳಿಗೆ ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ ಪ್ರಾಯೋಜಕತ್ವದಲ್ಲಿ ನಗರದ ಖಾಸಗಿ ಹೋಟೇಲ್‍ನಲ್ಲಿ ಕೆಆರ್‍ಇಡಿಎಲ್‍ನಿಂದ ಆಯೋಜಿಸಿದ ಒಂದು ದಿನದ ಡಿಮ್ಯಾಂಡ್ ಸೈಡ್ ಮ್ಯಾನೇಜ್‍ಮೆಂಟ್ ಕಾರ್ಯಾಗಾರವನ್ನು ಜೆಸ್ಕಾಂ ಮುಖ್ಯ ಎಂಜಿನಿಯರ್ ಆರ್.ಡಿ.ಚಂದ್ರಶೇಖರ್ ಅವರು ಉದ್ಘಾಟಿಸಿದರು, ಅಧೀಕ್ಷಕ ಎಂಜಿನಿಯರ್ ಸತೀಶ್ ಚಂದ್ರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಹೈದರಾಬಾದ್ ಸಿಐಐ ಅಧಿಕಾರಿಗಳಾದ ಸೌಗತ ಸರ್ಕಾರ ಹಾಗೂ ದಿನೇಶ್ ಕುಮಾರ್ ಅವರು ಕಾರ್ಯಾಗಾರದ ಉಪನ್ಯಾಸನೀಡಿದರು.ಕೆಆರ್‍ಇಡಿಎಲ್‍ತಾಂತ್ರಿಕ ಅಧಿಕಾರಿ ಮಾಲಿನಿ ಸ್ವಾಮಿ,
ಜೆಸ್ಕಾಂ ನ ಅನೇಕ ಅಧಿಕಾರಿಗಳು ಹಾಗೂ ಕೆಆರ್‍ಇಡಿಎಲ್ ಸಿಬ್ಬಂದಿ ಉಪಸ್ಥಿತರಿದ್ದರು.ಬಿಇಇ ಯ ಮಾರ್ಗಸೂಚಿಗಳ ಪ್ರಕಾರ ಇಂಧನ ಸಂರಕ್ಷಣೆ ಮತ್ತು ಇಂಧನ ದಕ್ಷತೆಯ ದೃಷ್ಟಿಯಿಂದ ಕಾರ್ಯಾಗಾರವನ್ನು ನಡೆಸಲಾಯಿತು.