
ಗೌರಿಬಿದನೂರು,ಮೇ.೩-ತಾಲ್ಲೂಕಿನ ಅಲೀಪುರದಲ್ಲಿ ಮಂಗಳವಾರ ಜೆಡಿಎಸ್ ಪಕ್ಷದ ಅಭ್ಯರ್ಥಿ ಸಿ.ಆರ್.ನರಸಿಂಹಮೂರ್ತಿ ರವರ ಪರವಾಗಿ ಚುನಾವಣಾ ಪ್ರಚಾರ ಸಭೆಯನ್ನು ಏರ್ಪಡಿಸಿದ್ದರು.
ಈ ವೇಳೆ ಮಾತನಾಡಿದ ರಾಜ್ಯ ಜೆಡಿಎಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಡಾ.ರೋಷನ್ ಅಬ್ಬಾಸ್, ರಾಜ್ಯದಲ್ಲಿ ಕುಮಾರಣ್ಣ ನವರು ಮಾಡಿರುವ ಜನಪರವಾದ ಕಾರ್ಯಗಳೇ ನಮ್ಮೆಲ್ಲರಿಗೆ ವರದಾನವಾಗಿವೆ. ಹಿಂದುಳಿದ ವರ್ಗ, ಕೂಲಿ ಕಾರ್ಮಿಕರು ಹಾಗೂ ಶೋಷಿತ ವರ್ಗದವರ ಅಭಿವೃದ್ದಿಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಅತ್ಯಧಿಕ ೬೦ ಸಾವಿರ ಮತಗಳನ್ನು ಪಡೆದು ಕಡಿಮೆ ಅಂತರದಲ್ಲಿ ಸೋತಿದ್ದ ಸಿ.ಆರ್.ನರಸಿಂಹಮೂರ್ತಿ ರವರಿಗೆ ಈ ಬಾರಿ ನಿಮ್ಮೆಲ್ಲರ ಆಶೀರ್ವಾದದಿಂದ ಹೆಚ್ಚಿನ ಮತಗಳನ್ನು ನೀಡಬೇಕಾಗಿದೆ. ಅಲೀಪುರವು ದಶಕಗಳಿಂದಲೂ ಜೆಡಿಎಸ್ ಗೆ ಭದ್ರಕೋಟೆಯಾಗಿದೆ. ಕ್ಷೇತ್ರದಲ್ಲಿ ನರಸಿಂಹಮೂರ್ತಿ ಯವರನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಮತ್ತೆ ಕುಮಾರಣ್ಣ ರವರನ್ನು ಮುಖ್ಯಮಂತ್ರಿಯನ್ನಾಗಿ ಕಾಣುವುದೇ ನಮ್ಮೆಲ್ಲರ ಕನಸಾಗಿದೆ. ಅದನ್ನು ನನಸು ಮಾಡುವ ಜವಾಬ್ದಾರಿ ಕ್ಷೇತ್ರದಲ್ಲಿನ ಪ್ರತಿಯೊಬ್ಬ ಮತದಾರರ ಮೇಲಿದೆ ಎಂದು ಹೇಳಿದರು.
ಇದೇ ವೇಳೆ ಜೆಡಿಎಸ್ ಅಭ್ಯರ್ಥಿ ಸಿ.ಆರ್.ನರಸಿಂಹಮೂರ್ತಿ ಸೇರಿದಂತೆ ಪಕ್ಷದ ಮುಖಂಡರು ತೆರೆದ ವಾಹನದಲ್ಲಿ ಮುಸ್ತಾಪಾ ಹುಸೇನ್ ವೃತ್ತದಿಂದ ಐಕೆ ಮುಖ್ಯ ರಸ್ತೆಯ ಮೂಲಕ ಸಾಗಿ ದಾರು ಜೆಹರಾ ಮಸೀದಿಯ ಮುಂಭಾಗದಿಂದ ಸಂತೆ ಮೈದಾನದವರೆಗೆ ರೋಡ್ ಮೂಲಕ ಸಾಗಿ ನಂತರ ಜನತೆಯನ್ನು ಉದ್ಧೇಶಿಸಿ ಮಾತನಾಡಿದರು.
ಇದೇ ವೇಳೆ ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷರಾದ ಸಿ.ಮಂಜುನಾಥರೆಡ್ಡಿ, ಖಜಾಂಚಿ ಕೋಟೆ ಬಾಸ್ಕರ್, ಮುಖಂಡರಾದ ಮೆಹದಿ ಹುಸೇನ್, ಸಲ್ಮಾನ್ ರಜಾ, ಅಲಿ ಅಬ್ಬಾಸ್, ದಬೀರ್ ಅಲೀ, ಅಬ್ಬಾಸ್ ರಜಾ, ಪ್ರಭಾಕರ್ ಸೇರಿದಂತೆ ಇತರರು ಭಾಗವಹಿಸಿದ್ದರು.