ರಾಯಚೂರು,ಜು.೨೧-
ಸಿಟಿ ಘಿI ಕ್ರಿಕೆಟ್ ಕ್ಲಬ್,ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಾಯಚೂರು ಎಸ್.ಸಿ.ಎ.ಬಿ.ಕಾನೂನು ಮಹಾ ವಿದ್ಯಾಲಯ ಮತ್ತು ವೀರ್ ಸಾವರ್ಕರ್ ಯೋತ್ ಅಸೋಸಿಷನ್ ರಾಯಚೂರು ಇವರ ಸಹಯೋಗದಲ್ಲಿ ದಿ.ವಿಜಯರೆಡ್ಡಿ ಅವರ ದ್ವಿತೀಯ ಪುಣ್ಯ ದಿನದ ಸ್ಮರರ್ಣರ್ಥ ಅಂಗವಾಗಿ ರಕ್ತದಾನ ಶಿಬಿರವನ್ನು ಜುಲೈ ೨೩ ರಂದು ನಗರದ ಎಸ್.ಸಿ.ಎ.ಬಿ.ಕಾನೂನು ಮಹಾ ವಿದ್ಯಾಲಯ ಆವರಣದಲ್ಲಿ ಬೆಳಿಗ್ಗೆ ೮-೩೦ ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಸಿಟಿ ಘಿI ಕ್ರಿಕೆಟ್ ಕ್ಲಬ್ ಅಧ್ಯಕ್ಷ ಕೆ.ಶರಣರೆಡ್ಡಿ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ರಕ್ತದಾನ ಶಿಬಿರವನ್ನು ನಗರ ಶಾಸಕ ಡಾ.ಶಿವರಾಜ ಪಾಟೀಲ್ ಅವರು ಉದ್ಘಾಟಿಸಲಿದ್ದಾರೆ.ಮುಖ್ಯ ಅಥಿತಿಗಳಾಗಿ ತಾರಾನಾಥ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪಾರಸಮಲ್ ಸುಖಾನಿ,ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷ ವಿಜಯಕುಮಾರ ಪಾಟೀಲ್,ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜ, ಆರ್.ಡಿ.ಎ ಮಾಜಿ ಅಧ್ಯಕ್ಷ ಕಡಗೋಲು ಅಂಜನೆಯ,ಅಂಭಾಪತಿ ಪಾಟೀಲ್,ಎಸ್.ಸಿ. ಎ. ಬಿ ಕಾನೂನು ಕಾಲೇಜು ಅಧ್ಯಕ್ಷ ವೈ. ಶ್ರೀಕಾಂತ ಅವರು ಭಾಗವಹಿಸಲಿದ್ದಾರೆ.ಅಧ್ಯಕ್ಷತೆಯನ್ನು ಸಿಟಿ ಘಿI ಕ್ರಿಕೆಟ್ ಕ್ಲಬ್ ಅಧ್ಯಕ್ಷ ಕೆ. ಶರಣರೆಡ್ಡಿ ವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಂಜೀವ್ ನಾಯಕ,ವಿಜಯಕುಮಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.