ಜೀವಾತ್ಮ ಭಾವದಿಂದ ಪರಮಾತ್ಮ ಭಾವದೊಂದಿಗೆ ಕೂಡುವುದೇ ಯೋಗ

ದಾವಣಗೆರೆ, ಜೂ.22; ನಮ್ಮ ಸ್ವಭಾವಕ್ಕೆ ತಕ್ಕಂತೆ ನಾವು ಯೋಗ, ಧ್ಯಾನ ಮತ್ತು ಭಕ್ತಿ ಯೋಗ ಮಾರ್ಗವನ್ನು ಅನುಸರಿಸಬಹುದು. ಯೋಗದ ನಿಜವಾದ ಅರ್ಥ ನಮ್ಮ ಜೀವಾತ್ಮ ಭಾವದಿಂದ ಪರಮಾತ್ಮ ಭಾವದೊಂದಿಗೆ ಕೂಡುವುದೇ ಯೋಗ ಮಾರ್ಗವಾಗಿದೆ ಎಂದು ನಗರದ ರಾಮಕೃಷ್ಣ ಮಿಷನ್‌ನ ಪೂಜ್ಯ ಶ್ರೀ ಸ್ವಾಮಿ ತ್ಯಾಗೀಶ್ವರಾನಂದಜೀ ಮಹರಾಜ್ ತಿಳಿಸಿದರು.ಪೂಜ್ಯರು ನಗರದ ದೇವರಾಜ ಅರಸ್ ಬಡಾವಣೆ ‘ಸಿ’ ಬ್ಲಾಕ್‌ನಲ್ಲಿರುವ ಆದರ್ಶ ಯೋಗ ಪ್ರತಿಷ್ಠಾನ (ರಿ) ದಾವಣಗೆರೆ, ಶ್ರೀ ಮಹಮ್ಮಾಯಿ ವಿಶ್ವಯೋಗ ಮಂದಿರ ಹಗೂ ಯೋಗ ಚಿಕಿತ್ಸಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ 9ನೇ ಅಂತಾರಾಷ್ಟಿçÃಯ ವಿಶ್ವ ಯೋಗ ದಿನಾಚರಣೆಯ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ “ನಿತ್ಯ ಜೀವನದಲ್ಲಿ ಯೋಗ ಮತ್ತು ಧ್ಯಾನದ ಅವಶ್ಯಕತೆ” ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು.ಯೋಗ ಎನ್ನುವ ಪದ ತುಂಬಾ ಆಗಾಧವಾಗಿದ್ದು ಹಲವು ಅರ್ಥವನ್ನು ಕೊಡಬಲ್ಲದು. ಇವುಗಳಲ್ಲಿ 4 ಯೋಗ ಮಾರ್ಗಗಳು ನಮ್ಮ ಜೀವನಕ್ಕೆ ಹತ್ತಿರವಾದವುಗಳು, ಜ್ಞಾನ ಯೋಗ, ಭಕ್ತಿಯೋಗ, ರಾಜಯೋಗ, ಕರ್ಮಯೋಗಗಳಿಂದ ನಾವು ಸಾಧನೆಯ ಮಾರ್ಗದಲ್ಲಿ ಸಾಧಿಸಬಹುದು. ನಮ್ಮ ಸ್ವಭಾವಕ್ಕೆ ತಕ್ಕಂತೆ ನಾವು ಯೋಗ, ಧ್ಯಾನ ಮತ್ತು ಭಕ್ತಿ ಯೋಗವನ್ನು ಮಾಡಬೇಕು. ಭಕ್ತಿ ಯೋಗದಿಂದ ಭಗವಂತನೊAದಿಗೆ ಸುಲಭವಾಗಿ ಶರಣಾಗತಿ ಭಾವವನ್ನು ಹೊಂದಬಹುದು. ನಾವು ದೇವರಲ್ಲಿ ನಂಬಿಕೆ ಇಡದಿದ್ದರೂ ಪರವಾಗಿಲ್ಲ. ನಮ್ಮಲ್ಲಿ ನಾವು ನಂಬಿಕೆ ಇಡಬೇಕು. ಈ ಭಾವದಿಂದ ನಾವು ಪರಮಾತ್ಮನಲ್ಲಿ ಸಮರ್ಪಣೆ ಮಾಡಿಕೊಳ್ಳಬಹುದು. ನಾವು ಹೇಗಿರಬೇಕು, ಏನು ಮಾಡಬೇಕು ಎನ್ನುವ ಅರಿವು ನಮಗಿರಬೇಕು. ಆ ಅರಿವೇ ನಮಗೆ ಸರಿಯಾದ ದಾರಿಯನ್ನು ತೋರಿಸಬಲ್ಲದು. ಯೋಗಾಭ್ಯಾಸ ಮಾಡುವವರು ಮೊದಲು ತಮ್ಮನ್ನು ಆವು ಕೃಷಿ ಮಾಡಿಕೊಳ್ಳಬೇಕು. ಆಗ ನಾವು ಎತ್ತರಕ್ಕೆ ಬೆಳೆಯುತ್ತೇವೆ. ನಮ್ಮ ಒಳಗಿರುವ ಬೇಕು-ಬೇಡಗಳನ್ನು ಗಮನಿಸಿ ಶಾಂತ ಮನಸ್ಸಿನಿಂದ ಯೋಚಿಸಿ ಧ್ಯಾನಿಸಿದಾಗ ಮನಸ್ಸು ಹಗುರವಾಗುತ್ತದೆ. ಯಾವಾಗ ನಮ್ಮೊಳಗಿರುವ ಬಹುದೊಡ್ಡದಾದ ‘ಅಹಂ’ ಅನ್ನು ಬಿಟ್ಟು ಯೋಚಿಸಿದಾಗ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಇದು ಧ್ಯಾನದಲ್ಲಿ ಸಾಧ್ಯವಾಗುತ್ತದೆ. ನಮ್ಮನ್ನು ನಾವು ನಿಗ್ರಹಿಸಿಕೊಳ್ಳುವುದೇ ಯೋಗ. ತುಂಬಾ ಶಿಸ್ತಿನ ಆಹಾರ ನಿಯಮವನ್ನು ಪಾಲಿಸಬೇಕು ಎಂದು ಕಿವಿಮಾತು ಹೇಳಿದರು. ಹೀಗೆ ನಿತ್ಯ ಯೋಗಾಭ್ಯಾಸ, ಪ್ರಾಣಾಯಾಮ ಮತ್ತು ಧ್ಯಾನದ ಅವಶ್ಯಕತೆಯ ಬಗ್ಗೆ ಉಪಕತೆಯ ಮೂಲಕ ಮನಮುಟ್ಟುವಂತೆ ಪೂಜ್ಯರು ತಿಳಿಸಿದರು.ಯೋಗಗುರು ಡಾ.ರಾಘವೇಂದ್ರ ಗುರೂಜಿಯವರು ಪೂಜ್ಯರಿಗೆ ಗೌರವಾರ್ಪಣೆ ಸಲ್ಲಿಸಿದರು. ಪ್ರಾರಂಭದಲ್ಲಿ ಅಗ್ನಿಹೋತ್ರ ಹೋಮ ಮಾಡಿದ ನಂತರ ಯೋಗ ದಿನಾಚರಣೆಯ ಶಿಷ್ಟಾಚಾರದಂತೆ ಸಾಮೂಹಿಕ ಯೋಗಾಭ್ಯಾಸವನ್ನು ಭಾಗವಹಿಸಿದ ಯೋಗಾಭ್ಯಾಸಿಗಳು ಪ್ರದರ್ಶನ ಮಾಡಿದರು. ಕಾರ್ಯಕ್ರಮಕ್ಕೆ ಸಹಕರಿಸಿದ ಹಣಕಾಸು ವ್ಯವಹಾರ ಸಲಹೆಗಾರ  ಮಂಜುನಾಥ್ ಹೆಚ್. ಮತ್ತು ಬಾಳೆಎಲೆ ವ್ಯಾಪಾರಿ  ರುದ್ರೇಶ್ ಇವರುಗಳನ್ನು ಸ್ವಾಮೀಜಿಯವರು ಕಿರುಕಾಣಿಕೆ ಕೊಟ್ಟು ಗೌರವಿಸಿದರು. ಅಂದವಾಗಿ ರಂಗೋಲಿಯನು ಬಿಡಿಸಿದ ಶ್ರೀಮತಿ ಭಾಗ್ಯ, ಅಕ್ಷತಾ ಮತ್ತು ಶೋಭಾ ಇವರನ್ನು ಅಭಿನಂದಿಸಿದರು. ಸಹಕರಿಸಿದ ಮುಖೇಶ್ ದೇವ್ ಮತ್ತು ಪ್ರಶಾಂತ್ ಎಂ.ಎA. ಇವರಿಗೆ ಕೃತಜ್ಞತೆ ಸಲ್ಲಿಸಿದರು. ಯೋಗ ಶಿಕ್ಷಕ ವಿ. ಲಲಿತ್‌ಕುಮಾರ್ ಜೈನ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಶಾಂತಿ ಮಂತ್ರದೊಂದಿಗೆ ಕೊನೆಯಲ್ಲಿ ಪ್ರಸಾದ ವಿನಿಯೋಗ ಮಾಡಲಾಯಿತು.