ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 20 ಕೃತಿಗಳ ಲೋಕಾರ್ಪಣೆ

ಬೀದರ :ಮಾ.16:ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಗರದ ಜಿಲ್ಲಾ ರಂಗಮಂದಿರದಲ್ಲಿ ಮಾರ್ಚ್ 15ರಂದು ಜರುಗಿದ 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷರೂ ಆದ ಪಶು ಸಂಗೋಪನೆ ಸಚಿವರಾದ ಪ್ರಭು ಚವ್ಹಾಣ ಅವರು ಜಿಲ್ಲೆಯ ವಿವಿಧ ಸಾಹಿತಿಗಳ 20 ಕೃತಿಗಳನ್ನು ಬಿಡುಗಡೆಗೊಳಿಸಿದರು.

ಹಿರಿಯ ಸಾಹಿತಿ ಶಿವಕುಮಾರ ಕಟ್ಟೆ ಅವರ ‘ಗುಂಪಾ ರೋಡ್’, ವಿಜಯಲಕ್ಷ್ಮೀ ಕೌಟಗೆ ಅವರ ‘ಸಾವಿತ್ರಿಬಾಯಿ ಫೂಲೆ’, ಶಿವಶಂಕರ ಟೋಕರೆ ಅವರ ‘ಕೌಶಲ್ಯ ಸಿರಿ’, ಡಾ.ರಘುಶಂಖ ಭಾತಂಬ್ರಾ ಅವರ ‘ಕೊನೆ ಎಂದು?’, ವಿಜಯಕುಮಾರ ಗೌರೆ ಅವರ ‘ಅಪ್ಪನ ಹೊಳಹು’, ಡಾ.ಈಶ್ವರಯ್ಯಾ ಕೋಡಂಬಲ್ ಅವರ ‘ತತ್ವ ಪದಗಳು’, ಡಾ.ಗೌತಮ ಬಕ್ಕಪ್ಪ ಅವರ ‘ಬಾಡದ ಹೂಗಳು’, ಹಂಸಕವಿಯ ‘ಚತುರ್ಥದತ್ತಾವತಾರಿ ಶ್ರೀ ಮಾಣಿಕ ಪ್ರಭು’, ಡಾ.ರಾಮಚಂದ್ರ ಗಣಾಪೂರ ಅವರ ‘ಅನುಸಂಧಾನ’, ರೇವರೆಂಡ್ ದೇವದಾನ ಆನಂದಪ್ಪ ಅವರ ‘ಚೌಪದಿಗಳಲ್ಲಿ ಸಾಮರಸ್ಯದ ಸಂದೇಶಗಳು’, ವಿಶ್ವನಾಥ ಬಿರಾದಾರ ಅವರ ‘ವಿಠಲ ವಿಜಯ’, ಡಾ,ಮಲ್ಲಿಕಾರ್ಜುನ ನಿಂಗದಳ್ಳಿ ಅವರ ‘ಕುಂಚ ಕಲೆಯ ಸಂತ ಚ.ಭೀ ಸೋಮಶೆಟ್ಟಿ’, ಪ್ರೊ.ಮಾಣಿಕರಾವ ಬಿರಾದಾರ ಅವರ ‘ಮಹಾರಾಷ್ಟ್ರ ಗಡಿಯ ಗೀತೆಗಳು’, ಐ.ಎಸ್ ಶಕೀಲ ಅವರ ‘ಬೀದರ ಜಿಲ್ಲೆ ಇತಿಹಾಸ ಸಂಪುಟ-2’, ರಮೇಶ ವಾಘಮಾರೆ ಅವರ ‘ರೈತನ ಗೋಳು’, ಎಸ್.ಎಸ್ ಹೊಡಮನಿ ಅವರ ‘ಕಥಾ ಸಂಕಲನ’, ಸೂರ್ಯಕಲಾ ಎಸ್ ಹೊಡಮನಿ ಅವರ ‘ತವರೂರ ಮಡಿಲು’, ಶಂಭುಲಿಂಗ ವಾಲ್ದೊಡ್ಡಿ ಅವರ ‘ಹೆಂಗರುಳಿನ ಹಾಯಿಕುಗಳು, ಮತ್ತು ‘ಸೃಷ್ಟಿಯ ಹಾಯಿಕುಗಳು’, ಓಂಪ್ರಕಾಶ ದಡ್ಡೆ ಅವರ ‘ಕಲ್ಯಾಣ ಪ್ರೇಮಿ’,

ಎಂಬ ಕೃತಿಗಳು ಲೋಕಾರ್ಪಣೆಯಾದವು.