ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ. ಎಲ್ಲಾರಿಗೂ ಸರಕಾರದ ಯೋಜನೆ ತಲುಪುತ್ತಿವೆ ‌- ರಾಜಾ ವೆಂಕಟಪ್ಪ ನಾಯಕ

 ಸಿರವಾರ: ಮಾ೧೮-  ಸಾರ್ವಜನಿಕರು ಜಿಲ್ಲಾ, ತಾಲೂಕ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಸರ್ಕಾರ ಜಿಲ್ಲಾಧಿಕಾರಿಗಳ ನಡೆ ಹಳಿ ಕಡೆ ಕಾರ್ಯಕ್ರಮ ಜಾರಿಗೆ ತಂದಿದೆ, ಸಾರ್ವಜನಿಕರು ತಮ್ಮ ಅಗತ್ಯ ದಾಖಲೆ ಪತ್ರ ಅದಿಕಾರಿಗಳಿಗೆ ನೀಡಿ ಇದರ ಪ್ರಯೋಜನ ಪಡೆದುಕೊಳ್ಳಿ, ಈ ಕಾರ್ಯಕ್ರಮದಿಂದ ಅನೇಕ ಸಮಸ್ಯೆಗಳು ಸ್ಥಳದಲಿಯೆ  ಪರಿಹಾರ ಸಿಕಿವೆ ಎಂದು ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.

 ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಇಂದು  ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ  ಉದ್ಘಾಟಿಸಿ ಮಾತನಾಡಿ ನೀವು ನಿತ್ಯ ತಾಲ್ಲೂಕ ಕೇಂದ್ರಗಳಿಗೆ ಅಲೆದರೂ ಕೆಲಸಗಳು ಆಗಿರುವುದಿಲ, ಆದರೆ ಇಂದು  ಅಧಿಕಾರಿಗಳು ನಿಮ್ಮ ಗ್ರಾಮಕ್ಕೆ ಆಗಮಿಸಿದ್ದು, ಸೂಕ್ತ ದಾಖಲಾತಿಗಳನ್ನು ನೀಡಿ

 ಸ್ಥಳದಲ್ಲಿ ಪರಿಹಾರ ಕಲ್ಪಿಸುತ್ತಾರೆ, ಗ್ರಾಮದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾರ್ಯವಾಗಲಿದೆ. ನಾನು ಶಾಸಕರಾದ ನಂತರ ಈ ಗ್ರಾಮಕ್ಕೆ ಸಿಸಿ ರಸ್ತೆ, ಸಮುದಾಯ ಭವನ ನಿರ್ಮಾಣ, ಶುದ್ದ ಕುಡಿಯುವ ನೀರಿನ ಘಟಕ,  ಎಲ್ಲರೂ ಶಿಕ್ಷಣವಂತರಾಗಬೇಕೆಂದ ತರಗತಿ ಕೊಠಡಿಗಳ ನಿರ್ಮಾಣ, ರೈತರ ‌ಕಾಲುವೆ ನೀರು ಸಮರ್ಪಕವಾಗಿ ಹರಿಸಲಾಗಿದೆ. ನಿಮ್ಮ ಸಮಸ್ಯೆಗಳಿಗೆ  ನಾನು  ಸದಾ ಸ್ಪಂದಿಸುವೆ. ದೇವರ ಆಶಿರ್ವಾದ ಇದರೆ ಇನೂ ಅಭಿವೃದ್ದಿ ಕೆಲಸ ಮಾಡುವೆ   ಎಂದರು.     ಸಿರವಾರ ತಹಸೀಲ್ದಾರ ಸುರೇಶ ವರ್ಮ ಅಧ್ಯಕ್ಷತೆವಹಿಸಿ ಮಾತನಾಡಿ ಅಧಿಕಾರಿಗಳು  ಸ್ಥಳಕ್ಕೆ ಆಗಮಿಸಿ ಸೌಲಭ್ಯದ ಬಗ್ಗೆ ತಿಳಿಸಿಕೊಡುತ್ತಿದ್ದಾರೆ.  ಪ್ರಮಾಣ ಪತ್ರ ನೀಡುತ್ತಾರೆ,  ಕೇಲವು ಕಡೆ ಅರ್ಜಿಗಳು ತಿರಸ್ಕೃತವಾಗಿದರೆ ಅದನ್ನು ಗಮನಕ್ಕೆ ತನ್ನಿ. ವಿವಿಧ ಇಲಾಖೆ ಸೌಲಭ್ಯಗಳನ್ನು ತಿಳಿಸಿ ಕೊಡುವುದಕ್ಕಾಗಿ ಕೇಂದ್ರಗಳನ್ನು ತೆರೆಯಲಾಗಿದೆ. ಅದರ ಸದುಪಯೋಗ ಪಡೆದುಕೊಳಿ. ಸರ್ಕಾರದ ಎಲ್ಲಾ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ಮುಟ್ಟಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳಲಾಗಿದೆ. ಇದರಿಂದ ಸಾರ್ವಜನಿಕರ ಹಣ, ಸಮಯ ಉಳಿತಾಯವಾಗುತ್ತದೆ. ಅನೇಕ ಕಾರ್ಯಕ್ರಮಗಳು ಜನರಿಗೆ ತಲುಪಿಸುವ ಕೆಲಸಗಳು ಮಾಡಲಾಗುತ್ತದೆ. ವಿವಿಧ ಇಲಾಖೆಯ ಅಧಿಕಾರಿಗಳು ತಿಳಿಸಿರುವ ಮಾಹಿತಿಯ ಸದುಪಯೋಗ ಪಡೆದುಕೊಳಬೇಕು.  ಸಾರ್ವಜನಿಕರಿಗೆ ಯಾವ ಇಲಾಖೆಯಲ್ಲಿ ಕೆಲಸ ಕಾರ್ಯಗಳು ತಿಳಿಸಿ ಅಧಿಕಾರಿಗಳಿಂದ ಮಾಹಿತಿ ನೀಡುತ್ತಾರೆ. ನಿಮಗೆ ಉತ್ತರ ಸಮಂಜಸ ಆಗದಿದ್ದರೆ ಉನ್ನತ ಅಧಿಕಾರಿಗಳಿಂದ  ಉತ್ತರ ಕೊಡಿಸುತ್ತೆನೆ. ಸಂಜೆಯ ವರೆಗೆ ಇದ್ದು ತಮ್ಮ ಸಮಸ್ಯೆಗಳನ್ನು ಆಲಿಸಿ, ಸಾಧ್ಯವಾದಷ್ಟು ಸಮಸ್ಯೆಗಳನ್ನು ಪರಿಹರಿಸುತ್ತೆವೆ ಎಂದರು.     ನಂತರ ಶಾಸಕರು ಅಂಗವಿಕಲರಿಗೆ, ವೃದ್ಧರಿಗೆ, ವಿಧವಯರಿಗೆ ಮಾಸಾಸನದ ವೇತನ ಪ್ರಮಾಣ ಪತ್ರದ ಆದೇಶ ಪ್ರತಿ ವಿತರಣೆ ಮಾಡಿದರು. 

ಈ ಸಂದರ್ಭದಲ್ಲಿ    ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾದ್ಯಕ್ಷ ಜಂಬುನಾಥ ಯಾದವ್, ಕಾರ್ಮಿಕ ಶರಣು ಕಡ್ಲಿ,  ಉಪ ತಹಸೀಲ್ದಾರ, ಸಿದ್ದನಗೌಡ, ರಾಜಕುಮಾರ,ಶ್ರೀನಿವಾಸರೆಡ್ಡಿ,ಎಎಸ್ಐ ಭಿಮನಗೌಡ, ಶಿವಕುಮಾರ್,ಗ್ರಾ.ಪಂ ಅದ್ಯಕ್ಷೆ ವಿಶಾಲಕ್ಷಿ, ಉಪಾದ್ಯಕ್ಷ ಶಿವಕುಮಾರ . ಗ್ರಾ.ಪಂ ಸದಸ್ಯರು.ತೊಟಗಾರಿಕೆ ಇಲಾಖೆ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿಗಳು ಇದರು.