
ದಾವಣಗೆರೆ. ಏ.೧; ನಗರದ ಜಿ.ಎಂ.ಐ.ಟಿ. ತಾಂತ್ರಿಕ ಮಹಾವಿದ್ಯಾಲಯದ ಗಣಕಯಂತ್ರ ವಿಭಾಗದ 6ನೇ ಸೆಮಿಸ್ಟರ್ ವಿದ್ಯಾರ್ಥಿಗಳ ತಂಡ ಕಾರ್ಪೂಲ್ ಪ್ರಣವ್ ವಿ, ಪೂಜಾ ಎಚ್ ಪಿ, ವನಮಾಲಿ ಸೆಡಿಂಬಿ ಮತ್ತು ನವಪ್ರಿತಮ್ ಎನ್ ಇವರು 24 ಮತ್ತು 25ನೇ ಮಾರ್ಚ 2023 ರಂದು ಗದಗ ಜಿಲ್ಲೆ ತೊಂಟದಾರ್ಯ ಕಾಲೇಜ್ ಆಫ್ ಇಂಜಿನಿಯರಿAಗ್ ಮತ್ತು ಡಿಲಿತ್ ಪ್ರೆöÊ. ಲಿಮಿಟೆಡ್ ಅವರ ಸಹಯೊಗದಲ್ಲಿ ಅಯೋಜಿಸಿದ್ದ ಟಿ.ಸಿ.ಇ ಹ್ಯಾಕಥಾನ್ 2023 ರಲ್ಲಿ ಭಾಗವಹಿಸಿ ಎರಡನೇ ಬಹುಮಾನ (20,000 ನಗದು) ಗೆದ್ದಿದ್ದಾರೆ. ಇವರಿಗೆ ಕಾಲೇಜಿನ ಆಢಳಿತಾಧಿಕಾರಿ ವೈ.ಯು. ಸುಭಾಷ್ಚಂದ್ರ, ಪ್ರಾಂಶುಪಾಲರಾದ ಡಾ. ಸಂಜಯ್ ಪಾಂಡೆ ಎಂ.ಬಿ., ಗಣಕಯಂತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಸಂತೋಷ್ಕುಮಾರ್ ಎಂ, ಕಾಲೇಜಿನ್ ಹ್ಯಾಕಥಾನ್ ಅಯೋಜಕರಾದ ಪ್ರೊ. ಮಾರುತಿ ಎಸ್.ಟಿ, ಅಧ್ಯಾಪಕರುಗಳು, ಸಿಬ್ಭಂಧಿ ವರ್ಗದವರು ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.