ಜಾಹೀರಾತಿಲ್ಲದೆ ಪತ್ರಿಕೆಯನ್ನು ಹೊರತಂದವರು ಪಿ.ಲಂಕೇಶ್

ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.24:- ಜಾಹೀರಾತಿಲ್ಲದೆ ಪತ್ರಿಕೆಯನ್ನು ಹೊರತಂದ ಪಿ.ಲಂಕೇಶ್ ಅವರ ಸಾಧನೆ ಮರೆಯಲಾಗದು ಎಂದು ಬರಹಗಾರ ಎಸ್. ಲಕ್ಷ್ಮಿ ನರಸಿಂಹ ತಿಳಿಸಿದರು.
ಅವರುತಾಲೂಕುಕನ್ನಡ ಸಾಹಿತ್ಯ ಪರಿಷತ್, ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕೋದ್ಯಮಿ ಪಿ. ಲಂಕೇಶ್‍ರವರ ಪತ್ರಿಕೋದ್ಯಮ ಮತ್ತು ಬರಹಗಳಬಗ್ಗೆ ಮಾತನಾಡುತ್ತಾ, ಲಂಕೇಶ್ ಪತ್ರಿಕೆ ಸಾವಿರಾರು ಓದುಗರನ್ನು ಹಾಗೂ ಹತ್ತಾರು ಲೇಖಕರನ್ನು ಸೃಷ್ಟಿ ಮಾಡಿದ್ದು, ಅವರ ಕನ್ನಡ ಬರವಣಿಗೆಯ ಶೈಲಿ ವಿಶೇಷವಾಗಿತ್ತು.ರಾಮಕೃಷ್ಣ ಹೆಗಡೆ, ಬಂಗಾರಪ್ಪ, ಗುಂಡೂರಾವ್, ವಾಟಾಳ್ ನಾಗರಾಜ್ ರವರಂತಹ ದಿಗ್ಗಜರನ್ನು ಕಟು ಶಬ್ದಗಳಿಂದಲೇ ಟೀಕಿಸುತ್ತಿದ್ದ ಲಂಕೇಶ್‍ರವರ ಬರವಣಿಗೆ ಕನ್ನಡಿಗರು ಮರೆಯಲಾಗದು.
ವಿಧಾನ ಮಂಡಲದಲ್ಲಿ ಹಕ್ಕು ಚ್ಯುತಿ ಮಂಡನೆಗೆ ಒಳಗಾದಾಗ ಲಂಕೇಶ್‍ಅವರನ್ನು ರಕ್ಷಿಸಿದ್ದು ಕನ್ನಡ ಚಳುವಳಿಗಾರ ಶಾಸಕರಾಗಿದ್ದ ವಾಟಳ್ ನಾಗರಾಜ್‍ಎಂದು ತಿಳಿಸಿದರು.
ಕನ್ನಡ ಹೋರಾಟಗಾರ ಶ್ರೀನಿವಾಸ್‍ಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡ ಪತ್ರಿಕೋದ್ಯಮದಲ್ಲಿಕಿಡಿ ಶೇಷಪ್ಪ, ಲಂಕೇಶ್, ರವಿ ಬೆಳಗೆರೆರವರನ್ನು ಮರೆಯಲಾಗದು.
ಲಂಕೇಶ್‍ರವರ ಪತ್ರಿಕೆಯಲ್ಲಿ ವಿಮರ್ಶೆ, ಅಂಕಣ, ರಾಜಕೀಯ ಸುದ್ದಿಯ ವಿಶ್ಲೇಷಣೆಗಳು, ಗಾಂಧೀಜಿ ಕುರಿತು ಬರೆಯುತ್ತಿದ್ದವರ ಲೇಖನಗಳು ತುಂಬಾ ಪ್ರಭಾವ ಬೀರಿತು. ಕಥೆಗಾರರು, ಕಾದಂಬರಿಕಾರರುಆಗಿದ್ದ ಲಂಕೇಶ್‍ರವರು ನಿರ್ದೇಶನ ಹಾಗೂ ನಟರಾಗಿಯುಕೂಡ ಮಿಂಚಿದವರುಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕಮಂಜುನಾಥಆರಾಧ್ಯರವರು ಮಾತನಾಡಿ, ಲಂಕೇಶ್‍ರವರ ಪತ್ರಿಕೆ ಪ್ರಾರಂಭದಲ್ಲಿಚಾಮರಾಜನಗರಕ್ಕೆ ಪತ್ರಿಕೆಗಳು ಬರುತ್ತಿದ್ದು, ಅದನ್ನು ಹಂಚುವ ಮತ್ತುಓದಿದ ನಂತರ ಮತ್ತೆ ಓದುಗರಿಗೆ ನೀಡುವಕಾರ್ಯ ಮಾಡುತ್ತಿದ್ದನ್ನು ಸ್ಮರಿಸಿದರು.
ತಾಲೂಕುಕನ್ನಡ ಸಾಹಿತ್ಯ ಪರಿಷತ್ತಿನಅಧ್ಯಕ್ಷಸುರೇಶ್ ಎನ್‍ಋಗ್ವೇದಿ ವಹಿಸಿ ಮಾತನಾಡಿ, ಪಿ. ಲಂಕೇಶ್‍ರವರ ಸಾಹಿತ್ಯದಎಲ್ಲಾರಂಗದಲ್ಲಿ ಆಳವಾಗಿ ಇಳಿದ ಮಹಾಲೇಖಕ, ಬಹುಮುಖ ಪ್ರತಿಭೆಯಾಗಿದ್ದರು. ಬದುಕನ್ನುತನ್ನಿಷ್ಟದಂತೆ, ಬದುಕಿದಅಪರೂಪದ ವ್ಯಕ್ತಿ. ಜಾಹೀರಾತಿಲ್ಲದೆ ಪತ್ರಿಕೆಯನ್ನು ನಡೆಸಿದ ಹೊಸ ಪರಂಪರೆಗೆ ನಾಂದಿ ಹಾಕಿದ ಲಂಕೇಶ್‍ರವರುಕನ್ನಡ ಪತ್ರಿಕೋದ್ಯಮದ ಮಹಾಸಾಹಸಿಗರು. ಇಂದು ಪತ್ರಿಕಾ ಕ್ಷೇತ್ರ ಬಹಳ ಸಮಸ್ಯೆಗಳಲ್ಲಿ ಸಿಲುಕಿದೆ. ಪತ್ರಿಕೆಯನ್ನು ನಡೆಸುವುದು ಬಹು ಕಷ್ಟದ ವಿಚಾರವೆಂದರು.
ಲಂಕೇಶ್ ರವರ ಬರವಣಿಗೆಯು ಪ್ರಜ್ಞಾವಂತ ಮನಸ್ಸುಗಳನ್ನು ಸೃಷ್ಟಿಸಿತು. ವಾರಪತ್ರಿಕೆಗಳನ್ನು ಜನ ಕಾದು ಖರೀದಿಸಿ ಓದುವ ಹಾಗೆ ಮಾಡಿದವರು. ಅಧ್ಯಾಪಕರಾಗಿ, ವಿಮರ್ಶಕರಾಗಿ, ಕಾದಂಬರಿಕಾರರಾಗಿ, ನಟರಾಗಿ, ಹುಳಿಮಾವಿನ ಮರದಂತಹ ಅಪರೂಪದ ಆತ್ಮಕಥೆಯನ್ನು ತಂದವರು. ಗ್ರೀಕ್ ನಾಟಕಗಳನ್ನು ಭಾμÁಂತರ ಮಾಡಿದ್ದು ನಾಟಕ ಸಾಹಿತ್ಯದ ಮೈಲಿಗಲ್ಲು ಲಂಕೇಶ್ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸರಸ್ವತಿ, ನಾಗಲಕ್ಷ್ಮಿ, ಸುರೇಶ್‍ನಾಗ್ ಹರದನಹಳ್ಳಿ, ಜಯಕುಮಾರ್, ಬೊಮ್ಮಾಯಿ, ಮೋಹನ್ ಗೌಡ, ಕನ್ನಡ ಹೋರಾಟಗಾರ ಪುಟ್ಟಸ್ವಾಮಿ, ಗೋವಿಂದರಾಜು, ಡಾ. ಮಂಜುನಾಥ್ ಇದ್ದರು.