
ರಾಯಚೂರು.ಫೆ.೨೮-
ವಿನಾಶದ ಅಂಚಿನಲ್ಲಿ ಸಾಗುತ್ತಿರುವ ಜಾನಪದ ಕಲೆಗಳಾದ ಜನಪದ ಸಂಗೀತ,, ಜನಪದ ಸಾಹಿತ್ಯ, ಜನಪದ ಕ್ರೀಡೆ, ಜನಪದ ಹಾಸ್ಯ ಹೀಗೆ ಹಲವಾರು ವಿಧದ ಜಾನಪದ ಸಂಪತ್ತು ವಿನಾಶದ ಅಂಚಿನಲ್ಲಿ ಸಾಗುತ್ತಿರುವಾಗ ಅದನ್ನು ಉಳಿಸಿ ಬೆಳೆಸುವ ಗುರುತರ ಜವಾಬ್ದಾರಿ ಇಂದಿನ ವಿದ್ಯಾರ್ಥಿ ಸಮುದಾಯದ ಮೇಲಿದೆ ಎಂದು ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ ಖ್ಯಾತ ಜಾನಪದ ವಿದ್ವಾಂಸ ಹಾಗೂ ಕವಿ ಡಾ. ತಿಮ್ಮರಾಯ ಅಪ್ಪುಗೆರೆ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ಎಸ್ಕೆಇ ಪ್ಯಾರಾ ಮೆಡಿಕಲ್ ಮತ್ತು ನರ್ಸಿಂಗ್ ಕಾಲೇಜಿನ ಹಾಗೂ ಆಡಳಿತ ಮಂಡಳಿಯ ಹೃದಯಸ್ಪರ್ಶಿ ಸನ್ಮಾನ ಸ್ವೀಕರಿಸಿ ಮಾತನಾಡಿ ಪ್ರತಿ ಗ್ರಾಮದ ಮನೆ ಮನೆಗಳಲ್ಲಿ ಮನಮನಗಳಲ್ಲಿ ಮಗುವಿನಲ್ಲಿ ಅಡಗಿರುವ ಜನಪದ ಕಲೆಗಳನ್ನು ಹೊರ ತರುವ ಕೆಲಸ ನಿರಂತರವಾಗಿ ಆಗಬೇಕಾಗಿದೆ ಅಲ್ಲದೆ ಪ್ಯಾರಾ ಮೆಡಿಕಲ್ ಮತ್ತು ನರ್ಸಿಂಗ್ ವಿದ್ಯಾರ್ಥಿಗಳು ಜಾನಪದ ಹಾಡುಗಳನ್ನು ಅವುಗಳ ಭಾವಾರ್ಥಗಳನ್ನು ತಿಳಿದುಕೊಂಡು ರೋಗಿಗಳೊಂದಿಗೆ ಸಂವಿಧಾನ ಶಿಲೆಯಿಂದ ಸ್ಪಂದಿಸುವ ಕಾರ್ಯ ನಿರ್ವಹಿಸಿದಾಗ ಅತ್ಯುತ್ತಮ ಆರೋಗ್ಯ ಸೇವೆ ನೀಡಲು ಸಾಧ್ಯವಾಗಬಲ್ಲದು ಎಂದು ವಿದ್ಯಾರ್ಥಿಗಳ ಸಮುದಾಯಕ್ಕೆ ತಿಳಿಸಿ ಹೇಳಿದರು ವಿದ್ಯಾರ್ಥಿಗಳೊಂದಿಗೆ ಸೇರಿ ಹಲವಾರು ಜಾನಪದ ಹಾಡುಗಳನ್ನು ಹಾಡುವ ಮುಖಾಂತರ ಸಮಸ್ತ ವಿದ್ಯಾರ್ಥಿ ಸಮುದಾಯವನ್ನು ಸಂತೋಷದ ಕಡಲಿಗೆ ಕೊಂಡು ಇದ್ದರು. ೨೦೦ ಜಾನಪದ ವಿದ್ವಾಂಸ ಶ್ರೀ ಶರಣಪ್ಪ ಗೋನಾಳ ಅವರು ಮಾತನಾಡಿ ರಾಯಚೂರಿನಲ್ಲಿ ಪ್ರತಿ ತಿಂಗಳು ಜನಸಂಸ್ಥೆಯ ಪ್ರಾಚಾರ್ಯ ಹಾಗೂ ಕಾರ್ಯದರ್ಶಿ ಡಾಕ್ಟರ್ ಬಾಬು ರಾವ್ ಶೇಗುಣಸಿ ಮಾತನಾಡಿ ಈ ಭಾಗದ ಪದ ಕಲೆಗಳನ್ನು ಪ್ರದರ್ಶಿಸುವ ಮೂಲಕ ಈ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಡಗಿರುವ ಅಪಾರ ಜಪ ಜನಪದ ಸಂಪತ್ತನ್ನು ಉಳಿಸಿ ಬೆಳೆಸಿದಾಗ ಈ ಈ ಭಾಗದ ಸಂಸ್ಕೃತಿಗೆ ಮೆರಗು ಬರಬಲ್ಲದು ಎಂದು ಹೇಳಿದರು.
ಎಲ್ಲಾ ರೀತಿಯ ಜನಪದ ಕಲೆ ಸಾಹಿತ್ಯ ಸಂಗೀತ ವಿವಿಧ ಪ್ರಕಾರದ ಜ್ಞಾನದ ಮೂಲಗಳನ್ನು ಹುಡುಕಿ ಉಳಿಸಿ ಬೆಳೆಸುವಲ್ಲಿ ಸಂಸ್ಥೆಯು ಪ್ರಾಮಾಣಿಕ ಪ್ರಯತ್ನ ಮತ್ತು ಪ್ರೋತ್ಸಾಹ ಒದಗಿಸಲಿದೆ ಎಂದು ಹೇಳಿದರು ಸಂಗೀತ ಕಾರ್ಯಕ್ರಮಕ್ಕೆ ಕೇಶವ ಸಾತಿಯನ್ನು ವೀರೇಂದ್ರ ಕುರುಡಿ ಅವರು ವಹಿಸಿಕೊಟ್ಟರೆ ,ತಬಲಾ ಸಹಾಯವನ್ನು ಸೇತು ಮಾಧವ ಒದಗಿಸಿದರು ಕೀಪ್ಯಾಡ್ ಸಹಾಯವನ್ನು ಸುಧಾಕರ್ ಅವರು ವಹಿಸಿಕೊಟ್ಟರು, ಸ್ವಾಗತವನ್ನು ರಶ್ಮಿ ನಾಗೋಲಿಯವರು ನಡೆಸಿಕೊಟ್ಟರೆ ನಿರೂಪಣೆಯನ್ನು ಪ್ರೋ ಸಪ್ನಾ ಫುಲ್ ನಿರ್ವಹಿಸಿದರು.