ಜಾಗತಿಕ ತಲ್ಲಣಗಳಿಗೆ ಬುದ್ಧನ ಶಾಂತಿ ತತ್ವ ಸಾರ್ವಕಾಲಿಕ

ಕಲಬುರಗಿ:ಮೇ.5: ಹಿಂಸೆ, ಅನ್ಯಾಯ, ಅಶಾಂತಿ, ಶೋಷಣೆ, ಜಾತೀಯತೆ, ಭಯೋತ್ಪಾದನೆಯಂತಹ ಜಾಗತಿಕ ತಲ್ಲಣಗಳಿಂದ ಬಳಲುತ್ತಿರುವ ಸಮಾಜಕ್ಕೆ ಮಹಾತ್ಮ ಗೌತಮ ಬುದ್ಧ ಅವರು ಸಾವಿರಾರು ವರ್ಷಗಳ ಹಿಂದೆಯೇ ನೀಡಿರುವ ಹಾಗೂ ಅವುಗಳನ್ನು ಆಚರಿಸಿ ತೋರಿಸಿರುವ ತತ್ವಗಳು ಸಾರ್ವಕಾಲಿಕವಾಗಿದ್ದು, ಅವುಗಳು ಚಿಕಿತ್ಸಕನಾಗಿ ಕಾರ್ಯಮಾಡುತ್ತವೆ ಎಂದು ಸಮಾಜ ಸೇವಕ ಡಾ.ಸುನೀಲಕುಮಾರ ಎಚ್.ವಂಟಿ ಹೇಳಿದರು.
ನಗರದ ಜಗತ್ ವೃತ್ತದಲ್ಲಿರುವ ಮಹಾತ್ಮ ಗೌತಮ ಬುದ್ದ ಪುತ್ತಳಿ ಆವರಣದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ ಮತ್ತು ‘ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ’ ಇವುಗಳ ವತಿಯಿಂದ ಶುಕ್ರವಾರ ಜರುಗಿದ ‘ಬುದ್ಧ ಪೂರ್ಣಿಮೆ’ಯಲ್ಲಿ ಪುತ್ತಳಿಗೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡುತ್ತಿದ್ದರು.
ಬಸವೇಶ್ವರ ಸಮಾಜ ಸೇವಾ ಬಳಗದ ಉಪಾಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ ಮಾತನಾಡಿ, ಬುದ್ಧ ಮಹಾಜ್ಞಾನಿ, ಸಮಾಜ ಸುಧಾರಕರು, ಮಹಾ ಬೆಳಕು. ಆ ಬೆಳಕಿನಲ್ಲಿ ಸಾಗಿದರೆ ಬದುಕು ಸುಂದರವಾಗುತ್ತದೆ. ‘ಬುದ’್ಧ ಎಂದರೆ ವ್ಯಕ್ತಿಯಲ್ಲ. ಬದಲಿಗೆ ಅದ್ಭುತವಾದ ಶಕ್ತಿಯಾಗಿದ್ದಾರೆ. ಅವರ ಸಂದೇಶ ಪಾಲಿಸುವುದು ತುಂಬಾ ಅಗತ್ಯವಾಗಿದೆ ಎಂದು ನುಡಿದರು.
ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ ಅವರು ಬುದ್ದ ವಂದನೆ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್.ಬಿ.ಪಾಟೀಲ,ಶಿವಯೋಗಪ್ಪ ಬಿರಾದಾರ, ನೀಲಕಂಠಯ್ಯ ಹಿರೇಮಠ, ದೇವೇಂದ್ರಪ್ಪ ಗಣಮುಖಿ, ಅಣ್ಣಾರಾಯ.ಎಚ್.ಮಂಗಾಣೆ, ಪರಮೇಶ್ವರ ಬಿ.ದೇಸಾಯಿ, ಬಸವರಾಜ ಎಸ್.ಪುರಾಣೆ, ಸಂತೋಷ ರಾಯ್ಕೋಡೆ, ಅನೀಲಕುಮಾರ ಡಬರಾಬಾರ್, ರುಕ್ಕಪ್ಪ ಕಾಂಬಳೆ, ಸುರೇಶ ಡಿ.ವಳಕೇರಿ, ಗಜೇಂದ್ರ ವಳಕೇರಿ, ಪ್ರಕಾಶ ವಗ್ಗೆ ಸೇರಿದಂತೆ ಮತ್ತಿತರರಿದ್ದರು.