ಜನಪದ ಬೆಳೆಸುವಲ್ಲಿ ಸಂಘ ಸಂಸ್ಥೆಗಳ ಪಾತ್ರ ಪ್ರಮುಖ

ಶಹಾಪುರ :ಎ.13: ಬಾದ್ಯಪುರ ಗ್ರಾಮದಲ್ಲಿ ಸಂಗೀತ ಮತ್ತು ಸಂಸ್ಕøತಿಕ ಕಾರ್ಯಕ್ರಮದಲ್ಲಿ ಮಾತನಾಡಿ ಹಳ್ಳಿ ಪ್ರದೇಶಗಳಲ್ಲಿ ನಮ್ಮ ದೇಶದ ಪರಂಪರೆಯಂತೆ ಡೊಳ್ಳು ಕುಣಿತ ಬಯಲಾಟ ಕಣೆಯಲೆಗೆ ಭಜನೆ ಹಂತಿ ಪದ ಹಲವು ರೀತಿಯ ಜನಪದ ಕಲೆ ಇದ್ದು ಜನಪದ ಕಲಾವಿದರು ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಓದದೆ ಬಾಯಿಂದ ಬಾಯಿಗೆ ಕಲಿತು ನಮ್ಮ ದೇಶದ ಹಿರಿಮೆ ಗಿರಿಮೆಯನ್ನು ಹೆಚ್ಚು ಮಾಡಿದ್ದಾರೆ ಹಲವಾರು ಸಂಸ್ತೆ ಕಾರ್ಯಕ್ರಮಗಳು ಕಲಾವಿದರಿಂದ ಪ್ರದರ್ಶಿಸಲಾಯಿತು ಸಿದ್ದನಗೌಡ ಹೆಬ್ಬಾಳ ಮಾತನಾಡಿ ಜನಪದ ಕಲೆ ನಮ್ಮ ನಾಡನ್ನು ನಮ್ಮ ಪ್ರದೇಶವನ್ನು ಪ್ರತಿನಿಧಿಸುವ ಕಲೆಯಾಗಿದೆ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಜನಪದ ಕಲೆಗಳು ತನ್ನದೇ ಆದ ಹಿರಿಮೆ, ಗರಿಮೆಯನ್ನು ಹೊಂದಿವೆ ಇದೇ ರೀತಿ ನಮ್ಮ ಭಾಗದಲ್ಲಿ ಕೂಡ ಹಲವಾರು ಕಲೆಗಳಿವೆ ಎಂದು ನುಡಿದರು.
ವೆಂಕಟಗಿರಿ ಜನಕಲ್ಯಾಣ ಗ್ರಾಮೀಣ ಅಭಿವೃದ್ಧಿ ಸಂಘ ವನದುರ್ಗ ಅವರು ಹಮ್ಮಿಕೊಂಡಿದ್ದ
ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಕಾಶ ಅಂಗಡಿ ಕನ್ನೆಳ್ಳಿ ಅವರು ಉದ್ಘಾಟಿಸಿದರು.
ಕೃಷ್ಣಪ್ಪ ಕುಂಬಾರಪೇಟೆ ಭೀಮಣ್ಣ ಕೊಡಮ್ಮನಹಳ್ಳಿ ಶಿಕುಂಡಪ್ಪ ಜಾಲಹಳ್ಳಿ ಕೆಂಪಣ್ಣ ಚನ್ನೂರ, ಹನುಮಂತರಾಯಗೌಡ, ಮತ್ತಿತರರು ಇದ್ದರು ಭಜನೆ ಅಂತಿ ಪದ ಕೋಲಾಟ ಮುಂತಾದ ಕಲೆಗಳನ್ನು ಪ್ರದರ್ಶಿಸಿದರು ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಳಶಿವಲಿಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು ಮಲ್ಲು ಬಾದ್ಯಾಪುರ ವಂದಿಸಿದರು.