
ರಾಯಚೂರು,ಮಾ.೦೫- ಮಾನ್ವಿ ತಾಲೂಕಿನ ಅರೋಲಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿಂದು ವೀರಶೈವ ಧರ್ಮ ಸಂಸ್ಥಾಪಕರು ಶ್ರೀ ಜಗದ್ಗುರು ರೇಣುಕಾಚಾರ್ಯರರ ಜಯಂತಿಯನ್ನು ಗ್ರಾಮದ ವೀರಶೈವ ಹಿರಿಯ ಗಣ್ಯರು ಹಾಗೂ ಯುವಕರು ಸೇರಿ ಭಾವಚಿತ್ರಕ್ಕೆ ಪೂಜೆ ಮಾಡಿ ಮಾಲಾರ್ಪಣೆ ಮಾಡುವದರ ಮೂಲಕ ನಮನವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ವೀರಶೈವ ಸಮಾಜದ ಹಿರಿಯರಾದ ಗುರುಪಾದಯ್ಯ ಸ್ವಾಮಿ, ಸಿದ್ದಯ್ಯ ಸ್ವಾಮಿ, ಆಡಿವಯ್ಯ ಸ್ವಾಮಿ, ಸುರೇಶ ಡಾಕ್ಟರ್,ಕೊಟ್ರಯ್ಯ ಸ್ವಾಮಿ, ದೇವರಾಜ್ ಸ್ವಾಮಿ, ಸಮಾಜದ ಯುವ ಮುಖಂಡರು ಇದ್ದರು.