ಜಗತ್ತನ್ನು ಬೆಸೆಯಲು ಸಾಂಸ್ಕøತಿಕ ಮಾರ್ಗವೇ ಸೂಕ್ತ : ಡಾ. ನಾಗರಾಜ

ಇಂಡಿ :ಜು.4: ಜಗತ್ತನ್ನ ಬೆಸೆಯಲು ಸಾಂಸ್ಕೃತಿಕ ಮಾರ್ಗವೇ ಹೆಚ್ಚು ಸೂಕ್ತ ಎಂದು 39ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಮೈಕ್ರಾನ್ ಎಲೆಕ್ಟ್ರಿಕಲ್ಸ್ ನ ಪ್ರಾಜೆಕ್ಟ್ ಡೈರೆಕ್ಟರ್ ಡಾ. ನಾಗರಾಜ್ ವಿ. ಹೇಳಿದರು.
.
ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಪರಿಷತ್ ಇಂಡಿಯಾ ಮತ್ತು ಮಂಜುನಾಥ್ ಎಜುಕೇಶನ್ ಟ್ರಸ್ಟ್ ರಿ. ಸಂಯುಕ್ತವಾಗಿ ಫಿಲಿಪ್ಪೈನ್ಸ್ ನ ಮನಿಲಾದ ಬೆರ್ಜಯ ಬಾಂಕ್ವೆಟ್ ಹಾಲ್ ನಲ್ಲಿ ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಸ್ನೇಹದಿಂದ ಎಲ್ಲವನ್ನು ಗೆಲ್ಲುವ ಪ್ರಯತ್ನ ಮಾಡಬೇಕು. ಅದನ್ನು ಸಾಧ್ಯವಾಗಿಸುವುದು ಸುಲಭವೂ ಹೌದು. ಏಕೆಂದರೆ ಅಂತ ಶಕ್ತಿ ಸ್ನೇಹಕ್ಕೆ ಇದೆ. ಅದರೊಂದಿಗೆ ಕಲೆ ಮತ್ತು ಸಾಹಿತ್ಯಗಳು ಜೊತೆಗೂಡಿದರೆ ಮತ್ತಷ್ಟು ಸಾಮರಸ್ಯವನ್ನು ಸಾಧಿಸಬಹುದು ಎಂದರು.
ಐಸಿಎಸ್‍ಸಿಐ. ಅಧ್ಯಕ್ಷ. ಕೆ ಪಿ ಮಂಜುನಾಥ್ ಸಾಗರ್. ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಸಾಂಸ್ಕೃತಿಕವಾಗಿ ಸೌಹಾರ್ದ ಮೂಡಿಸುವ ಉದ್ದೇಶವುಳ್ಳ. ಯಾವುದೇ ದೇಶದಲ್ಲಿ ನಾವು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಅಂತರಾಷ್ಟ್ರೀಯ ಸಾಮರಸ್ಯಕ್ಕೆ ಕಿರು ಕೊಡುಗೆಯನ್ನು ನೀಡುವ ಪ್ರಯತ್ನ ಮುಂದುವರಿಸಿಕೊಂಡು ಹೋಗಲಿದ್ದೇವೆ ಎಂದರು.
ಗೌರವ ಅತಿಥಿಗಳಾದ ಚಲನಚಿತ್ರ ನಿರ್ಮಾಪಕ ಶಂಕ್ರೇಗೌಡ ಮೈಸೂರು ಅವರು ಮಾತನಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಹಲವಾರು ಆಡೆತಡೆಗಳು ಇರುತ್ತವೆ ಅವುಗಳನ್ನು ನಿಭಾಯಿಸುವುದೇ ದೊಡ್ಡ ಸಾಹಸ ಎಂದರು.
ಮತ್ತೊಬ್ಬ ಗೌರವ ಅತಿಥಿ ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾಕ್ಟರ್ ಸತೀಶ್ ಕುಮಾರ್ ಹೊಸಮನಿ ಅವರು ಮಾತನಾಡಿ, ಜಗತ್ತನ್ನು ಸುತ್ತುವುದರಿಂದ ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳಬಹುದು ಅಲ್ಲದೆ ಅದು ಆಧುನಿಕ ಜಗತ್ತಿಗೆ ಹೊಂದಿಕೊಳ್ಳಲು. ಸಹಾಕಾರಿಯಾಗುತ್ತದೆ ಎಂದರು.
ಮತ್ತೂರ್ವ ಗೌರವ ಅತಿಥಿ ಬೆರ್ಜಯ ಗ್ರೂಪ್ ಮಲೇಶಿಯಾ ನಿರ್ದೇಶಕ ಡಿಜೆ ಕ್ಯಾಸ್ಟಿಲೊ ಮಾತನಾಡಿ, ನನ್ನ ಅಜ್ಜ ಅಜ್ಜಿ ಭಾರತೀಯ ಮೂಲದವರು ಎಂದು ಹೇಳಿಕೊಳ್ಳಲು ಸಂತೋಷವಾಗುತ್ತದೆ. ಭಾರತೀಯರು ಶಾಂತಿ ಸೌಹಾರ್ದತೆಗೆ ಹೆಸರುವಾಸಿಯಾದವರು. ಅವರೊಂದಿಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ನನಗೆ ಹೆಮ್ಮೆ ಅನಿಸಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಜಾಪುರದ ನಾಗೂರ್ ಎಜುಕೇಶನ್ ಟ್ರಸ್ಟ್ ಮತ್ತು ಇಂಡಿಯಾ ಮಾಸ್ಟರ್ ಅತ್ಲೇಟ್ಸ್ ಫೆಡೆರೇಶನ್ ಅಧ್ಯಕ್ಷ. ಡಾ. ಕೆ. ಬಿ. ನಾಗೂರ್ ಅವರು ಮಾತನಾಡಿ, ನಾವು ವಿಶ್ವ ಸೌಹಾರ್ದ ಪ್ರಿಯರು ಎಂಬ ಪರಿಕಲ್ಪನೆ ಅನನ್ಯ ಮತ್ತು ಅರ್ಥಗರ್ಭಿತ ಇದರ ಅನುಷ್ಠಾನಕ್ಕೆ ಮಾನವೀಯ ಮೌಲ್ಯವನ್ನು ಗೌರವಿಸುವ ಪ್ರತಿಯೊಬ್ಬರು ಶ್ರಮಿಸಬೇಕು ಎಂದರು.
ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ, ನಿವೃತ್ತ ಐಎಎಸ್ ಅಧಿಕಾರಿ ಡಾ. ಡಿ.ಎಸ್. ವಿಶ್ವನಾಥ್, ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ. ಸತೀಶ್ ಕುಮಾರ್ ಹೊಸಮನಿ, ಜಾನಪದ ಗಾಯಕ ಗೋನಾಸ್ವಾಮಿ. ಭರತನಾಟ್ಯ ಕಲಾವಿದೆ ಕು. ಅನು ಆನಂದ್ ಇವರಿಗೆ ಇಂಡೊ ಫಿಲಿಪೈನ್ಸ್ ಫ್ರೆಂಡ್ಶಿಪ್ ಅವಾರ್ಡ್ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ವಿಶೇಷ ಆಮಂತ್ರಿತರಾಗಿ ಸ್ವಾಮಿ ಎಂಟಪ್ರ್ರೈಸಸ್ ನ ಎಂಡಿ ಗೋನಾಸ್ವಾಮಿ ಮತ್ತು ಬೆಂಗಳೂರಿನ ಭಾರತ್ ಪಾಲಿಕ್ಲಿನಿಕ್ ಅಂಡ್ ನಸಿರ್ಂಗ್ ಹೋಮ್ ನ ನಿರ್ದೇಶಕರಾದ ಡಾ. ಶಿವಪುತ್ರ ಎಸ್. ಭಾವಿ. ಉಪಸ್ಥಿತರಿದ್ದರು.
ಗಾಯಕರಾದ ವೆಂಕಟೇಶ್ ಮೂರ್ತಿ ಶಿರೂರು, ಶಿವು ಪಾಂಡೇಶ್ವರ ಮತ್ತು ಪ್ರಶಾಂತ್ ರೆಡ್ಡಿ. ಅವರ ಹಾಡುಗಳು ಇಂಪಾಗಿ ಮೂಡಿಬಂದವು.
ಕು. ಅನು ಆನಂದ್ ಅವರ ಭರತನಾಟ್ಯ ಪ್ರದರ್ಶನ ನೃತ್ಯಪ್ರಿಯರ ಗಮನ ಸೆಳೆಯಿತು.
ಪೆÇ್ರ. ಬಿಂಡಿಗನವಿಲೆ ಭಗವಾನ್ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ
ಜರುಗಿತು. ಪ್ರಶಾಂತ್ ಮೈಸೂರ್, ಚಂದ್ರ ಮೌಳಿ ಮತ್ತು ಮೃದುಲಾ ಅವರಿಂದ ಚಿತ್ರಕಲಾ ಪ್ರದರ್ಶನ ನಡೆಯಿತು. ಡಾ. ಅಶೋಕ್ ನರೋಡೆ ವಿಶ್ವ ಸೌಹಾರ್ದತೆ ಕುರಿತು ಉಪನ್ಯಾಸ ನೀಡಿದರು. ಪ್ರಭಾ ಸುವರ್ಣ ಮುಂಬೈ ಅವರು ದೇಶಭಕ್ತಿ ಗೀತೆಗೆ ನೀಡಿದ ನೃತ್ಯ ಪ್ರದರ್ಶನ ರಂಜನೀಯವಾಗಿತ್ತು.