ಚೈತ್ಯಭೂಮಿಗೆ ಹವಾ ಮಲ್ಲಿನಾಥ ಮಹಾರಾಜ ಭೇಟಿ

ಕಲಬುರಗಿ,ಏ 9: ನವದೆಹಲಿಯ ಜೈ ಭಾರತ ಮಾತಾ ಸೇವಾ ಸಮಿತಿ ಯಿಂದ ಏ.14 ರಂದು ಮುಂಬೈನಲ್ಲಿ ಆಯೋಜಿಸಲಾಗಿರುವ ಡಾ. ಬಿ.ಆರ್.ಅಂಬೇಡ್ಕರ ಅವರ ಜಯಂತಿ ಆಚರಣೆ ಸಂಬಂಧ ಪೂರ್ವ ಸಿದ್ಧತೆಗಾಗಿ ಸಮಿತಿಯ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಹವಾ ಮಲ್ಲಿನಾಥ ಮಹಾರಾಜ ಅವರು ಮುಂಬೈನ ದಾದರ ಬಳಿ ಇರುವ ಡಾ. ಅಂಬೇಡ್ಕರ್ ಅವರ ಚೈತ್ಯಭೂಮಿಯಲ್ಲಿರುವ ಸ್ಮಾರಕಕ್ಕೆ ಭೇಟಿ ನೀಡಿ ಡಾ.ಬಿ .ಆರ್ ಅಂಬೇಡ್ಕರ ಅವರಿಗೆ ನಮನ ಸಲ್ಲಿಸಿದರು.ಸ್ಮಾರಕ ಬಳಿ ಕರ್ತವ್ಯ ನಿರತರಾದ ಪೆÇಲೀಸ ಅಧಿಕಾರಿಗಳಿಗೆ ಸತ್ಕರಿಸಿದರು.ನಂತರ ಕಾರ್ಯಕ್ರಮ ಆಯೋಜಿಸಿರುವ ಸ್ಥಳ ಪರಿಶೀಲನೆ ನಡೆಸಿ ಮುಂಬೈನ ವಿರಾರದಲ್ಲಿರುವ ಅವರ ಶಿವ ಮುಂದಿರ ಆಶ್ರಮದಲ್ಲಿ ಸಮಿತಿ ಮುಖಂಡರ ಹಾಗೂ ಕಾರ್ಯಕರ್ತರ ಸಭೆ ಕರೆದು ಕಾರ್ಯಕ್ರಮದ ಯಶಸ್ವಿಗೆ ಸೂಕ್ತ ಮಾರ್ಗದರ್ಶನ ಹಾಗೂ ಸಲಹೆ ನೀಡಿದರು ಎಂದು ಸಮಿತಿಯ ರಾಷ್ಟ್ರೀಯ ವಕ್ತಾರ ವೈಜನಾಥ ಎಸ್ ಝಳಕಿ ಅವರು ತಿಳಿಸಿದ್ದಾರೆ.