ಚುನಾವಣೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ: ಡಿ.ಸಿ ಗೋವಿಂದರೆಡ್ಡಿ

ಬೀದರ್: ಮಾ.30:ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಬೀದರ ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಹೇಳಿದರು.

ಬುಧುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ಕುರಿತು ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.ಕಟ್-ಔಟ್, ಪೋಸ್ಟರ್, ಬಂಟಿಂಗ್, ಧ್ವಜ, ಗೋಡೆ ಬರಹ ಮತ್ತು ಬ್ಯಾನರಗಳನ್ನು ಕೂಡಲೇ ತೆರೆವುಗೊಳಿಸಲಾಗುವುದು. ಚಾಲ್ತಿಯಲ್ಲಿರುವ ಕಾಮಗಾರಿಗಳು ಮುಂದುವರಿಯುವುದು. ಚಾಲ್ತಿ ಕಾಮಗಾರಿಗಳ ಪಟ್ಟಿಯನ್ನು ಕೂಡಲೇ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುವುದು.ಅಭ್ಯರ್ಥಿಯು ನಾಮಪತ್ರ ಹಾಕುವವರೆಗೂ ರಾಜಕೀಯ ಪಕ್ಷಕ್ಕೆ ಖರ್ಚು ಹಾಕಲಾಗುವುದು. ರಾಷ್ಟ್ರೀಯ ಮತ್ತು ರಾಜ್ಯ ಪಕ್ಷಗಳಿಗೆ ಜಿಲ್ಲೆಯಾದ್ಯಂತ ಪ್ರಯಾಣಿಸಲು ಪಕ್ಷ ಒಂದಕ್ಕೆ ಮೂರು ವಾಹನಗಳಿಗೆ ಅನುಮತಿಸಲಾಗುವುದು. ನಾಮಪತ್ರ ದಿನದಿಂದ ಅಭ್ಯರ್ಥಿಯು ಮತಕ್ಷೇತ್ರದಲ್ಲಿ ಸಂಚಾರಿಸಲು ಆರ್.ಓ. ಅವರಿಂದ ಅನುಮತಿ ಪಡೆಯಬೇಕು. ಅನುಮತಿ ಇಲ್ಲದ ವಾಹನಗಳಿಗೆ ಧ್ವಜ, ಪೋಸ್ಟರ್ ಹಾಗೂ ಬ್ಯಾನರ ಅಂಟಿಸಿದಲ್ಲಿ ಅಂಥವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ರಾಜಕೀಯ ಪಕ್ಷಗಳು ಸಭೆ-ಸಮಾರಂಭ ಮತ್ತು ಮೆರವಣಿಗಳಿಗೆ ಆರ್.ಓ. ಅವರಿಂದ ಸುವಿಧ ಆನ್‍ಲೈನ್ ಪೋಟಲ್ ಮೂಲಕ ಅನುಮತಿ ಪಡೆಯಬೇಕು. ಕಾರ್ಯಕ್ರಮದ ಸ್ಥಳದಲ್ಲಿ ಒಂದು ತಾಸು ಮೊದಲು ಮತ್ತು ಒಂದು ತಾಸು ನಂತರದ ವರೆಗೆ ಮಾತ್ರ ಬ್ಯಾನರ ಮತ್ತು ಪೋಸ್ಟರ್‍ಗಳನ್ನು ಅಳವಡಿಸಬೇಕು.ಹೆಲಿಕ್ಯಾಪ್ಟರ್ ಅನುಮತಿಯನ್ನು ಅನುಮತಿ ಪಡೆಯಬೇಕು. ಸರ್ಕಾರಿ ಅತಿಥಿ ಗೃಹಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಮತ್ತು ಸರ್ಕಾರಿ ವಾಹನಗಳನ್ನು ಹಿಂಪಡೆಯಲಾಗಿದೆ. ಆಯುಧಗಳನ್ನು ಹಿಂತಿರುಗಿಸಲು ಆದೇಶಿಸಲಾಗಿದೆ.

ಸೀರೆ, ಕುಕ್ಕರ, ಗಡಿಯಾರ ಇತ್ಯಾಧಿಗಳ ಮೇಲೆ ಭಾವಚಿತ್ರ ಅಥವಾ ಹೆಸರಿರುವರ ಮೇಲೆ ಮೊಕ್ಕದ್ದಮೆಯನ್ನು ದಾಖಲಿಸಲಾಗುವುದು. ಸಾರ್ವಜನಿಕರು ಛಿ-ಗಿIಉIಐ ಂಠಿಠಿ ಮೂಲಕ ದೂರುಗಳನ್ನು ದಾಖಲಿಸಬಹುದಾಗಿದೆ. ಆರ್.ಓ. ಕಂಟ್ರೋಲ್ ರೂಂ ಮತ್ತು ಡಿ.ಸಿ ಕಂಟ್ರೋಲ್ ರೂಂ. ಗೆ ದೂರಗಳನ್ನು ದಾಖಲಿಸಬಹುದು. ಎಫ್.ಎಸ್.ಟಿ ಮತ್ತು ಎಸ್.ಎಸ್.ಟಿ ತಂಡಗಳು ಸಕ್ರೀಯವಾಗಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.

ಚೆಕ್ ಪೋಸ್ಟ್‍ಗಳಲ್ಲಿ ದಾಖಲೆಗಳಿಲ್ಲದೆ ಸಿಗುವ ಹಣದ ಕುರಿತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ತಂಡ ಕ್ರ ವಹಿಸಲಿದೆ. ಒರ್ವ ವ್ಯಕ್ತಿಯು 50,000/- ರೂಪಾಯಿಗಳ ವರೆಗೆ ಹಣ ಇಟ್ಟು ಕೊಳ್ಳಬಹುದಾಗಿದೆ. ಸ್ಟಾರ್ ಪ್ರಚಾರಕರ ಖರ್ಚಿನ ಮಿತಿ 1 ಲಕ್ಷದ ವರೆಗೆ ಇದ್ದು, ಅಭ್ಯರ್ಥಿಯು 40 ಲಕ್ಷದ ವರೆಗೆ ಚುನಾವಣೆ ಖರ್ಚು-ವೆಚ್ಚವನ್ನು ಮಾಡಬಹುದಾಗಿದೆ.

ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ಕೋಶ, ಮಾಧ್ಯಮ ಮೇಲ್ವಿಚಾರಣಾ ಕೋಶ ಮತ್ತು ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಫಾರಂ-6 ಅರ್ಜಿಯನ್ನು ದಿನಾಂಕ 10-04-2023ರ ವರೆಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಆರ್.ಓ ಕಚೇರಿಯಲ್ಲಿ ಸಿಂಗಲ್ ವಿಂಡೋ ಸಿಸ್ಟಮ್ ಅನ್ನು ಜಾರಿಗೊಳಿಸಲಾಗಿದೆ. ದಿವ್ಯಾಂಗರಿಗೆ ಮತ್ತು 80 ವರ್ಷ ಮೇಲ್ಪಟ್ಟವರಿಗೆ ಮತದಾನ ಕೇಂದ್ರಕ್ಕೆ ಕರೆ ತರಲು ಅಟೋ ವ್ಯವಸ್ಥೆ ಮಾಡಲಾಗಿದ್ದು, ಆಟೋದಲ್ಲಿ ಬರಲು ತೊಂದರೆ ಇದ್ದವರಿಗೆ ಪೋಸ್ಟಲ್ ಬ್ಯಾಲೇಟ್ ವ್ಯವಸ್ಥೆ ಮಾಡಲಾಗಿದೆ.

ಮತದಾನ ಕೇಂದ್ರಗಳಿಗೆ ರ್ಯಾಪ್, ಶೌಚಾಲಯ ಮತ್ತು ಕುಡಿಯುವ ನೀರು ಕಲ್ಪಿಸುವ ವ್ಯವಸ್ಥೆ ಮಾಡಲಾಗಿದೆ. ಸರ್ಕಾರಿ ಸಿಬ್ಬಂದಿಗಳಿಗೆ ಕೇಂದ್ರ ಸ್ಥಾನದಲ್ಲಿರಲು ಮತ್ತು ದೀರ್ಘ ರಜೆ ಮೇಲೆ ತೆರಳದಿರಲು ಸೂಚಿಸಲಾಗಿದೆ. ಮತದಾನ ಕೇಂದ್ರಗಳಿಗೆ ನಿಯೋಜಿಸಲು ಬೇಕಾದ ಸಿಬ್ಬಂದಿಯ ಯಾದಿಯು ಸಿದ್ಧಗೊಂಡಿದೆ. ಒಟ್ಟು 8,800 ಸಿಬ್ಬಂದಿಗಳ ಪಟ್ಟಿ ಸಿದ್ಧಗೊಂಡಿದೆ.

ಜಿಲ್ಲೆಯಲ್ಲಿ ಒಟ್ಟು 13,48,019 ಮತದಾರರಿದ್ದು, ಪುರಷ ಮತದಾರರು-6,96,687 ಮತ್ತು ಮಹಿಳಾ ಮತದಾರರು-6,51,332 ಮತದಾರರು ಹಾಗೂ ಅಂಗವಿಕಲ ಮತದಾರರು-22,883 ಹಾಗೂ ತೃತೀಯ ಲಿಂಗದ ಮತದಾರರು-43 ಮತದಾರರು ಇದ್ದು, ಜಿಲ್ಲೆಯಲ್ಲಿ ಒಟ್ಟು 1,504 ಮತಗಟ್ಟೆಗಳು ಇವೆ. ಇದರಲ್ಲಿ 348 ಸುಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ.

ಈ ಬಾರಿ ಒಟ್ಟು 44 ವಿಶೇಷ ಮತಗಟ್ಟೆಗಳು ನಿರ್ಮಿಸಲಾಗುತ್ತಿದೆ. ಫ್ಲೈಯಿಂಗ್ ಸ್ವ್ಕಾಡ್‍ನ 38 ತಂಡಗಳು ಹಗಲು-ರಾತ್ರಿ ಸೇವೆ ಸಲ್ಲಿಸುತ್ತಿವೆ. ಹಾಗೂ ಜಿಲ್ಲೆಯಲ್ಲಿ 30 ಚೆಕ್ ಪೋಸ್ಟ್ ಕಾರ್ಯನಿರ್ವಹಿಸುತ್ತಿವೆ.

ಏಪ್ರಿಲ್ 13 ರಂದು ಅಧಿಸೂಚನೆ ಪ್ರಕಟವಾಗಲಿದ್ದು, ಏಪ್ರಿಲ್ 20 ರಂದು ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರಲಿದೆ. ಏಪ್ರಿಲ್ 21 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ 24 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಮೇ 10 ರ ಬುಧವಾರ ಮತದಾನ ನಡೆಯಲಿದ್ದು, ಮೇ 13 ರಂದು ಮತ ಏಣಿಕೆ ನಡೆಯಲಿದೆ. ಮೇ 15 ರೊಳಗೆ ಮತದಾನದ ಪ್ರಕ್ರಿಯೆ ಸಂಪೂರ್ಣ ಮುಗಿಯಲಿದೆ.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕ ಅಧಿಕಾರಿಗಳಾದ ಶಿಲ್ಪಾ ಎಂ. ಅವರು ಮಾತನಾಡಿ, ಎಂ.ಸಿ.ಸಿ ನೋಡಲ್ ಅಧಿಕಾರಿಯಾದ ನಾನು ಎಲ್ಲಾ ಚುನಾವಣೆ ನೀತಿ ಸಂಹಿತೆಯನ್ನು ಉಲ್ಲಂಘನೆಯಾಗದಂತೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುತ್ತದೆ. ಯಾವುದೇ ವಸ್ತುಗಳಿಗೆ ಸೂಕ್ತ ದಾಖಲೆಗಳಿದ್ದಾರೆ ಮಾತ್ರ ಬಿಡುತ್ತೇವೆ. ಮತ್ತು ಸ್ವೀಪ್ ನೋಡಲ್ ಅಧಿಕಾರಿ ನಾನೇ ಆಗಿರುವುದರಿಂದ್ದ ಸಾರ್ವಜನಿಕರು ಹೆಚ್ಚಿನ ಮತದಾನ ಮಾಡುವಂತೆ ಜನರಿಗೆ ಜಾಗೃತಿ ಮೂಡಿಸುವದರ ಜೊತೆಗೆ ಕಡಿಮೆ ಮತದಾನವಾಗುವ ತಾಲೂಕುಗಳಲ್ಲಿ ಹೆಚ್ಚಿನ ಪ್ರಚಾರ ಮಾಡಲಾಗುವುದು ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಅವರು ಮಾತನಾಡಿ ಈಗಾಗಲೇ 492 ಜನರ ಮೇಲೆ ಪ್ರೀವೆಂಟಿವ್ ಆಕ್ಸನ್ ಮತ್ತು 617 ಜನರ ಮೇಲೆ ಕ್ರಮ ಜರುಗಿಸಲಾಗಿದೆ. 561 ಜನರಿಗೆ ಬಾಂಡ್ ಮಾಡಲಾಗಿದೆ ಇದರಲ್ಲಿ ರೌಡಿ ಶೀಟರಗಳು, ಇಂಟರ್ ಮೀಡಿಯಟರಗಳು ಇದ್ದಾರೆ. 11 ಜನ ಗಡಿಪಾರಿಗೆ ಪ್ರಪೋಸಲ್ ಕೊಟ್ಟಿದ್ದು, ಇಬ್ಬರಿಗೆ ಈಗಾಗಲೇ ಗಡಿಪಾರು ಮಾಡಲಾಗಿದೆ. ಇನ್ನೂ 9 ಜನರ ಪ್ರಪೋಸಲ್ ಇದೆ.

ಜಿಲ್ಲೆಯಾದ್ಯಂತ ಒಟ್ಟು 30 ಚೆಕ್ ಪ್ಟೋಸ್‍ಗಳಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಲಾಗಿದ್ದು, ಪ್ರತಿ ಚೆಕ್‍ಪೋಸ್ಟಿಗೆ ಆಗಾಗ ಜಿಲ್ಲಾಧಿಕಾರಿಗಳು ಮತ್ತು ನಾನು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದೇವೆ. ಜಿಲ್ಲೆಯಲ್ಲಿ ಶಾಂತಿಯುತವಾಗಿ ಮತದಾನವಾಗುವಂತೆ ಎಲ್ಲಾ ರೀತಿಯ ಮುಂಜಾಗೃತಿ ಕ್ರಮವಹಿಸಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಚುನಾವಣಾ ತಹಶೀಲ್ದಾರ ಗೋಪಲ್ ಕಪೂರ, ಜಿಲ್ಲಾ ವಾತಾಧಿಕಾರಿ ಜಿ. ಸುರೇಶ ಹಾಗೂ ಪತ್ರಕರ್ತರು ಸೇರಿದಂತೆ ಇತರರು ಉಪಸ್ಥಿತರಿದ್ದರು.