ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೨; ಮಹಾನಗರ ಪಾಲಿಕೆ, ದಾವಣಗೆರೆ., ಚಾರ್ಲಿಎಜುಕೇಷನ್ & ವೆಲ್ ಫೇರ್ ಫೌಂಡೇಷನ್ ಮತ್ತು ದಾವಣಗೆರೆ ಜಿಲ್ಲಾ ಹಲಾಲ್ ಕೋಳಿ ಮಾರಾಟ ಅಂಗಡಿದಾರರು ಸಂಘ ಹಾಗೂ ಇಟಾಚ್ವೆಂಚ ವತಿಯಿಂದ ಚಿಕನ್ ತ್ಯಾಜ್ಯ ಸಂಗ್ರಹಣಾ ವಾಹನಕ್ಕೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪನವರು ಚಾಲನೆ ನೀಡಿದರು.
ದಾವಣಗೆರೆ ಮಹಾನಗರ ಪಾಲಿಕೆ ಆವರಣದಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಚಿಕನ್ ತ್ಯಾಜ್ಯ ಸಂಗ್ರಹಣಾ ವಾಹನಕ್ಕೆ ನೀಡಿ ಮಾತನಾಡಿದ ಶಾಸಕರು,ದಾವಣಗೆರೆಯ ಎಲ್ಲಾ ಚಿಕನ್ ತ್ಯಾಜ್ಯ ಸಂಗ್ರಹಣೆಯನ್ನು ವಾಹನದ ಮೂಲಕ ವಿಲೇವಾರಿ ಪಡಿಸಲು ಮಾರಾಟಗಾರರ ಸಂಘ ಮತ್ತು ಎನ್ ಜಿ ಓ ಮುಂದಾಗಿರುವುದು ಸ್ವಾಗತಾರ್ಹವಾಗಿದೆ ಎಂದು ತಿಳಿಸಿ ಸಾರ್ವಜನಿಕರು ಸಹ ತ್ಯಾಜ್ಯ ಸಂಗ್ರಹಿಸುವವರ ಜೊತೆ ಸಹಕರಿಸಬೇಕೆಂದು ಕರೆ ನೀಡಿದರು.ಮಹಾಪೌರರಾದ ವಿನಾಯಕ ಪೈಲ್ವಾನ್, ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ, ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಸಯೀದ್ ಚಾರ್ಲಿ ಫೈಲ್ವಾನ್, ಜಾಕೀರ್ ಅಲಿ, ಉದಯಕುಮಾರ್, ಕೋಳಿ ಸಂಘದ ಅಧ್ಯಕ್ಷರಾದ ಶಂಸು ತಬ್ರೇಜ್, ಕಾರ್ಯದರ್ಶಿ, ನಿಸ್ಸಾ, ಗೌರವ ಅಧ್ಯಕ್ಷರಾದ ಇಬ್ರಾಹೀಂ ಕೋಳಿ, ವಸೀಂ ಚಾರ್ಲಿ ಮತ್ತಿತರರಿದ್ದರು.