
ಭಾಲ್ಕಿ: ಮೇ.7:ತಾಲೂಕಿನ ಲಖನಗಾಂವ್ ಗ್ರಾಮದಲ್ಲಿ ಶ್ರೀ ಮಹಾಯೋಗಿಣಿ ಚಕ್ರಕೋಟಿ ಬಾಯಮ್ಮ ಜಾತ್ರಾ ಮಹೋತ್ಸವ ಇತ್ತೀಚೆಗೆ ಅದ್ದೂರಿಯಾಗಿ ಜರುಗಿತು.
ಜಾತ್ರೆ ನಿಮಿತ್ತ ಚಕ್ರಕೋಟಿ ಬಾಯಮ್ಮ ಅವರ ಜೀವನ ಚರಿತ್ರೆಯ ಕುರಿತು ಸಂಗೀತ ಹಾಡುಗಳ ಸಿಡಿ ಬಿಡುಗಡೆ ಕಾರ್ಯಕ್ರಮ ಜರುಗಿತು. ಸಿಡಿ ಬಿಡುಗಡೆ ಮಾಡಿ ಮಾತನಾಡಿದ ಹುಲಸೂರಿನ ಶ್ರೀ ಶಿವಾನಂದ ಸ್ವಾಮೀಜಿ ಮಾತನಾಡಿ, ಬಾಯಮ್ಮ ಅವರ ಅಧ್ಯಾತ್ಮಕ ಸಾಧನೆ ಅಪಾರ. ಅವರ ತತ್ವ, ಆದರ್ಶಗಳನ್ನು ಎಲ್ಲರು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಗಾಯಕಿ ಪವಿತ್ರ ಮಾಡಗೂಳೆ ಮಾತನಾಡಿ, ಅಧ್ಯಾತ್ಮ ಶಕ್ತಿ ಹೊಂದಿದ ಚಕ್ರಕೋಟಿ ಬಾಯಮ್ಮ ಅವರ ಮಹಿಮೆ ಅಪಾರ. ಸಾಹಿತ್ಯ, ಸಂಗೀತ ಜತೆಯಲ್ಲಿ ಅಧ್ಯಾತ್ಮ ಕ್ಷೇತ್ರದಲ್ಲಿ ಪ್ರತಿಯೊಬ್ಬರು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಸಂಗೀತ ನಿರ್ದೇಶಕ, ಗಾಯಕ ಶಿವಕುಮಾರ ಪಾಂಚಾಳ ಮಾತನಾಡಿದರು. ಬಾಯಮ್ಮ ಮಠದ ಅಧ್ಯಕ್ಷ ದಿಲೀಪ ಬೋಗೆ, ಪ್ರಮುಖರಾದ ಮಹಾದೇವ ಮಹಾರಾಜ, ಸೋಮನಾಥ ಸ್ವಾಮಿ, ವಿಶ್ವನಾಥ ಮಾಡಗೂಳ, ಮಹಾದೇವ ಮಹಾರಾಜ, ನಂದಾ ಬಿಡವೆ, ಗುರುನಾಥ ವಡ್ಡೆ, ಪತ್ರಿ ಸ್ವಾಮಿ, ನೆಹರು ಬಿರಾದಾರ್, ನಂದಾ ಬಿಡವೆ, ಜ್ಯೋತಿ ಶೆಟಕಾರ, ಬಸವ ಶೆಟಕಾರ, ವಿಜಯಕುಮಾರ ಬಿರಾದಾರ್ ಇತರರಿದ್ದರು. ಸಿದ್ರಾಮ ಶೆಟಕಾರ ನಿರೂಪಣೆ ಮಾಡಿದರು.