
ಅಥಣಿ : ಮಾ.3:ಗ್ರಾಮೀಣ ಪ್ರದೇಶದ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿನಮ್ಮ ಬಿಜೆಪಿ ಸರಕಾರ ಒಂದು ಹೆಜ್ಜೆ ಮುಂದೆ ಇದೆ, ಕೇಂದ್ರ ಹಾಗೂ ರಾಜ್ಯ ಎರಡೂ ಕಡೆ ಆಡಳಿತ ನಡೆಸುತ್ತಿರುವ ನಮ್ಮ ಸರಕಾರ ಜನಪರವಾದ ಸರಕಾರ ಎಂದು ಅಥಣಿ ಶಾಸಕ ಮಹೇಶ ಕುಮಠಳ್ಳಿ ಅವರು ಹೇಳಿದರು.
ಅವರು ತಾಲೂಕಿನ ಕರ್ಲಟ್ಟಿ ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ 40 ಲಕ್ಷ ರೂ ವೆಚ್ಚದ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಕಾಮಗಾರಿ ಮತ್ತು 1ಕೋಟಿ 20ಲಕ್ಷ ರೂ ವೆಚ್ಚದ ಕರ್ಲಟ್ಟಿ -ಹುಲಗಬಾಳ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಗುತ್ತಿಗೆದಾರರಾದ ಅಮಗೊಂಡ ಬಲೋಳ, ಊರಿನ ಪ್ರಮುಖರಾದ ಅಪ್ಪಾಸಾಬ ಇಂಚಲಕರಂಜಿ, ಸತ್ಯಪ್ಪ ತಾಂವಸಿ, ಶಿವಪ್ಪ ಮೋಕಾಶಿ, ಸಿದ್ದಪ್ಪ ಹಿಕಡಿ, ಮಲಕಣ್ಣ ಕೆಂಪಿ, ಸಿದ್ದಾರೂಡ ಕೆಂಪಿ, ಮುತ್ತಪ್ಪ ಮೋಕಾಶಿ ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.