ಗ್ರಾಮೀಣ ಕಾಂಗ್ರೆಸ್ ಅಭ್ಯರ್ಥಿ ನಾಗೇಂದ್ರ ಹಳ್ಳಿಗಳಲ್ಲಿ ಭರ್ಜರಿ  ಪ್ರಚಾರ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.04: ಇಲ್ಲಿನ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಬಿ.ನಾಗೇಂದ್ರ ಅವರು ಇಂದು ಕೆಪಿಸಿಸಿ ಪ್ರಚಾರ  ಸಮಿತಿ ಸಂಯೋಜಕ ಅಲ್ಲಂ ಪ್ರಶಾಂತ್, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮೊದಲಾದವರು  ತಾಲೂಕಿನ ಕಮ್ಮರಚೇಡು,  ಹಲಕುಂದಿ, ಮಿಂಚೇರಿ, ಸಂಜೀವರಾಯನಕೋಟೆ, ಚರಕುಂಟೆ ಮೊದಲಾದ ಗ್ರಾಮಗಳಲ್ಲಿ ರೋಡ್ ಶೋ ನಡೆಸಿದ್ದಲ್ಲದೆ  ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.
ಕಳೆದ ಬಾರಿಯಂತೆ ಈ ಬಾರಿಯೂ ಶಾಸಕ ನಾಗೇಂದ್ರ ಅವರಿಗೆ ಮತ ನೀಡಿ ಮತ್ತೊಮ್ಮೆ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಲು ಅಲ್ಲಂ ಪ್ರಶಾಂತ್ ಅವರು  ಮನವಿ ಮಾಡಿದರು.
ಅಭ್ಯರ್ಥಿ ನಾಗೇಂದ್ರ ಮಾತನಾಡಿ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ.ಅಭಿವೃದ್ಧಿಯನ್ನುದೃಷ್ಟಿಯಲ್ಲಿಟ್ಟುಕೊಂಡು   ಹಲವು   ಗ್ಯಾರಂಟಿಯೋಜನೆಗಳನ್ನು   ಘೋಷಿಸಿದೆ.   ಪ್ರತಿ   ಕುಟುಂಬದಯಜಮಾನಿಗೆ  ಮಾಸಿಕ  2  ಸಾವಿರ  ರೂ.ಗಳು,  ಪ್ರತಿಕುಟುಂಬಕ್ಕೆ   200   ಯೂನಿಟ್   ಉಚಿತ   ವಿದ್ಯುತ್,   ಬಿಪಿಎಲ್   ಚೀಟಿಇರುವ  ಕುಟುಂಬದ  ಪ್ರತಿ  ಸದಸ್ಯನಿಗೆ  10 ಕೆಜಿ ಅಕ್ಕಿ,ನಿರುದ್ಯೋಗಿ   ಪದವೀಧರರಿಗೆ   ಯುವನಿಧಿ   ಅಡಿ   ಭತ್ಯೆ,ರಾಜ್ಯದ  25 ಸಾವಿರ  ಪೌರ ಕಾರ್ಮಿಕರ ನೇಮಕಾತಿ  ಹಾಗೂರಾಜ್ಯದ ಎಲ್ಲ ಮಹಿಳೆಯರಿಗೆ ಸರ್ಕಾರಿ ಸಾರಿಗೆ ಬಸ್‍ನಲ್ಲಿ ಉಚಿತಪ್ರಯಾಣಕ್ಕೆ   ಅವಕಾಶ   ಮಾಡಿ   ಕೊಡಲಾಗುವುದು   ಎಂದ ಅವರು  ಇಂತಹ ಜನಪರ  ಯೋಜನೆಗಳನ್ನು  ನಮ್ಮಸರ್ಕಾರ ಬಂದ ಮೇಲೆ ಕೊಟ್ಟ ಮಾತಿನಂತೆ ಜಾರಿಗೆ ತರಲಿದೆ ಎಂದು ತಿಳಿಸಿದರು.
ಉಗ್ರಪ್ಪ ಅವರು ಮಾತನಾಡಿ ದೇಶದಲ್ಲಿ ದ್ವೇಷದ ರಾಜಕಾರಣ ಮಾಡುತ್ತಿರುವ ಬಿಜೆಪಿಯನ್ನು ಸೋಲಿಸಿ ಎಂದು ಕರೆ ಕೊಟ್ಟರು.
ಮುಖಂಡರುಗಳಾದ ಅಸುಂಡಿ ವನ್ನೂರಪ್ಪ,ಎಲ್.ಮಾರೆಣ್ಣ, ಅಕ್ಕಿ ಶಿವು, ಲಿಂಗನಗೌಡ, ಶಿವರಾಜ್ ಮೊದಲಾದವರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.