ಗ್ರಾಮಗಳ ನೈರ್ಮಲ್ಯ ಕಾಪಾಡುವಲ್ಲಿ ಗ್ರಾ. ಪಂಗಳು ಶ್ರಮವಹಿಸಬೇಕು

ಹುಮನಾಬಾದ:ಆ.21: ಕನಕಟ್ಟಾ ಗ್ರಾಮ ಪಂಚಾಯತನಲ್ಲಿ ನೈರ್ಮಲ್ಯ ಕುರಿತು ಕೇಂದ್ರಿಕೃತ ಗುಂಪು ಚರ್ಚೆ ಹಾಗೂ ಗ್ರಾಮ ಪಂಚಾಯತಿಯ ಸಭೆ ಜರುಗಿತು. ಗ್ರಾಮಗಳು ಸ್ವಚ್ಚ ಹಾಗೂ ಸುಚಿಯಾಗಿಡಲು ಗ್ರಾಮ ಪಂಚಾಯತನ ಎಲ್ಲ ಸದಸ್ಯರು ಶ್ರಮವಹಿಸಬೇಕೆಂದು ಸಮೂಚ್ಛಯ ಮೆಲ್ವೀಚಾರಕಿ ಆರತಿ ತಿಳಿಸಿದರು. ಸ್ವಚ್ಚ ಬೀದರ ಬಯಲು ಬರ್ಹಿದರ್ಸೆ ಮುಕ್ತ ಅಭಿಯಾನ ಅಂಗವಾಗಿ ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೇವತಿಯಿಂದ ಜರುಗಿದ ಸಭೆಯಲ್ಲಿ ತಿಳಿಸಿದರು. ಸ್ವಚ್ಚ ಗ್ರಾಮ ಕಾಪಾಡುವಲ್ಲಿ ಗ್ರಾಮ ಪಂಚಾಯಿತಿಯೊಂದಿಗೆ ಸ್ವ-ಸಹಾಯ ಸಂಘದ ಸದಸ್ಯರು, ಆಶಾ, ಅಂಗನವಾಡಿ ಕಾರ್ಯಕರ್ತೆರು ಸಂಜೀವಿನಿ ಜಿ.ಪಿ.ಎಲ್,ಎಫ್ ಒಕ್ಕೂಟದ ಸದಸ್ಯರು ಕೈಜೊಡಿಸಬೇಕೆಂದು ಕರೆ ನೀಡಿದರು.

ಕೇಂದ್ರಿಕೃತ ಗುಂಪು ಚರ್ಚೆಯ ಮೂಲಕ ಹಾಗೂ ನೈರ್ಮಲ್ಯ ಕುರಿತು ಗ್ರಾಮ ಪಂಚಾಯಿತಿಯೊಂದಿಗೆ ಸಭೆಯ ಮೂಲಕ ಸ್ವಚ್ಚ ಗ್ರಾಮ ಸಾಕಾರಗೊಳಿಸಬಹುದಾಗಿದೆಯೆಂದು ಸಂಜೀವಿನಿ ಮುಖ್ಯ ಪುಸ್ತಕ ಬರಹಗಾರರಾದ ಸಂತೋಷಿರವರು ತಿಳಿಸಿದರು. ಇದರ ಅಂಗವಾಗಿ ಗ್ರಾಮದಲ್ಲಿ ಸ್ವಚ್ಚತೆಯ ಬಗ್ಗೆ ಜಾಗ್ರತಿ ಜಾಥಾ ನಡೆಸಲಾಯಿತು. ಗ್ರಾಮ ಪಂಚಾಯತ ಸದಸ್ಯರಾದ ದೀಪರಾಜ, ಸುನೀತಾ ರಾಮ, ಅನುರಾಧ ರೇಷ್ಮಾ ದಯಾನಂದ, ದಶರಥ ಹಾಗೂ ಜಿ,ಪಿ.ಎಲ್.ಎಫ್ ಒಕ್ಕೂಟದ ಅಧ್ಯಕ್ಷರಾದ ಲಕ್ಷ್ಮೀಬಾಯಿ ಕಾರ್ಯದರ್ಶಿ ಝರಣಮ್ಮಾ, ಸುಧಾರಾಣಿ, ಆಶಾ ಕಾರ್ಯಕರ್ತರಾದ ರೇಣುಕಾ, ಸಂಗೀತಾ, ಸುನಿತಾ ಅಂಗನವಾಡಿ ಕಾರ್ಯಕರ್ತೆಯರಾದ ಲಕ್ಷೀ, ಭಾಗ್ಯಲಕ್ಷೀ, ಅಂಜನಾ ಮತ್ತು ಮಂಜುಳಾ ಉಪಸ್ಥಿತರಿದ್ದರು.