
ಬೆಂಗಳೂರು,ಮಾ.28- ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ನ 114 ಕೋಟಿ ರೂ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ(ಇಡಿ)ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಠೇವಣಿಯ ದುರುಪಯೋಗದ ಹಿನ್ನೆಲೆಯಲ್ಲಿ
ಪಿಎಂಎಲ್ಎ 2002ರ ಕಾಯಿದೆಯಡಿ ಆಸ್ತಿಯನ್ನು ಇಡಿ ಜಪ್ತಿ ಮಾಡಿದೆ.
ಬ್ಯಾಂಕ್ನಲ್ಲಿ ನಡೆದ ಸಾರ್ವಜನಿಕ ಈ ಕ್ರಮ ಜರುಗಿಸಲಾಗಿದೆ ಇಡಿ ಅಧಿಕಾರಿಗಳು ಬ್ಯಾಂಕ್ಗೆ ಸಂಬಂಧಿಸಿದ ಒಟ್ಟು 21 ಸ್ಥಿರಾಸ್ತಿಗಳನ್ನು ಜಪ್ತಿ ಮಾಡಿದೆ. ಖಾಲಿ ಭೂಮಿ, ಮನೆಗಳು, ಕಮರ್ಷಿಯಲ್, ಕೈಗಾರಿಕಾ ಬಿಲ್ಡಿಂಗ್ಗಳನ್ನು ಜಪ್ತಿ ಮಾಡಿದೆ.
ಜೊತೆಗೆ ಚರಾಸ್ಥಿ ರೂಪದ 3.15 ಕೋಟಿ ರೂ ಬ್ಯಾಂಕ್ ಬ್ಯಾಲೆನ್ಸ್ ಕೂಡ ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ಅಧಿಕೃತ ಮಾಹಿತಿ ನೀಡಿದೆ. ಬ್ಯಾಂಕ್ನಿಂದ ಸಾಲ ಪಡೆದು ಸಾಲ ಮರುಪಾವತಿ ಮಾಡದೇ ಸುಸ್ತಿದಾರರಾಗಿರುವವರ ಆಸ್ತಿ-ಜಪ್ತಿಯನ್ನು ಜಪ್ತಿ ಮಾಡಲಾಗಿದೆ.