
ಬೀದರ:ಎ.23:ಇದೇ ಏಪ್ರಿಲ್ 24 ರಿಂದ 30ರವರೆಗೆ ಬೀದರ್ ನಗರದ ಕರ್ನಾಟಕ ಫಾರ್ಮಸಿ ಕಾಲೇಜ್ ಎದುರಗಡೆ ಬ್ಯಾಂಕ್ ಕಾಲೋನಿ ಸಮೀಪ, ಗುಂಪಾ ರಸ್ತೆಯಲ್ಲಿರುವ ಗುದಗೆ ಪಾಲಿಕ್ಲಿನಿಕ್ನಲ್ಲಿ ಬಿಪಿ, ಸಕ್ಕರೆ ಕಾಯಿಲೆ ,ಇಸಿಜಿ, 2ಆ ಇಅಊಔ, ಈಸಿಹೆಚ್ಓ, ಹಾಗೂ ಟಿಎಂಟಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಬೀದ ನಗರದ ಖ್ಯಾತ ಹೃದಯ ತಜ್ಞರು ಹಾಗೂ ಗುದಗೆ ಆಸ್ಪತ್ರೆಯ ಅಧ್ಯಕ್ಷರಾದ ಡಾಕ್ಟರ್ ಚಂದ್ರಕಾಂತ್ ಗುದಗೆ ಅವರು ತಿಳಿಸಿದ್ದಾರೆ,
ಹೆಸರಾಂತ ಮಹಿಳಾ ತಜ್ಞರು, ಬಿಪಿ ಹಾಗು ಸಕ್ಕರೆ ಕಾಯಿಲೆ ಬಗ್ಗೆ ಹೆಚ್ಚು ಅಧ್ಯಯನ ಮಾಡಿದ ಡಾ. ಶ್ರೀಮತಿ ವಿಜಯಲಕ್ಷ್ಮಿ ಗುದಗೆ ಅವರು ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಿದ್ದಾರೆಂದು ಅವರು ತಿಳಿಸಿದ್ದಾರೆ, ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ