ಬೀದರ :ಎ.20:ನಗರದ ಗುಂಪಾ ರಸ್ತೆಯಲ್ಲಿರುವ ಬ್ಯಾಂಕ್ ಕಾಲೋನಿ ಸಮೀಪ ಕರ್ನಾಟಕ ಫಾರ್ಮಸಿ ಕಾಲೇಜು ಎದುರುಗಡೆ, ಗುದಗೆ ಪಾಲಿಕ್ಲಿನಿಕ್ ನಲ್ಲಿ ಏಪ್ರಿಲ್-19 ರಂದು ಮುಂಜಾನೆ 10:00 ಗಂಟೆಯಿಂದ ಸಾಯಂಕಾಲ 04:00 ಗಂಟೆಯವರೆಗೆ ವಿಶ್ವ ಲೀವರ್ ದಿನಾಚರಣೆ ನಿಮಿತ್ಯವಾಗಿ 50 ರಿಂದ 60 ಲೀವರ್ಗೆ ಸಂಬಂಧಪಟ್ಟ ರೋಗಿಗಳಿಗೆ ಹೆಸರಾಂತ ತಜ್ಞರಾದ ಡಾ|| ಜೈರಾಜ ಬೊಮ್ಮನ್ ರವರು ಲೀವರ್ ಉಚಿತ ಚಿಕಿತ್ಸೆ ನೀಡಿದರು.
ಬೀದರ ನಗರದ ಹೃದಯ ತಜ್ಞರು ಹಾಗೂ ಗುದಗೆ ಆಸ್ಪತ್ರೆಯ ಅಧ್ಯಕ್ಷರಾದ ಚಂದ್ರಕಾಂತ ಗುದಗೆಯವರು ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಲೀವರ್ ರೋಗಿಗಳಿಗೆ ಒಳ್ಳೆಯ ಮಾರ್ಗದರ್ಶನ ನೀಡುವುದರೊಂದಿಗೆ ಲೀವರ್ ರೋಗಿಗಳು ಗುಣಮಟ್ಟದ ಚಿಕಿತ್ಸೆ ಪಡೆಯಬೇಕೆಂದು ತಿಳಿಸಿದ್ದರು.
ಕುಡಿತದಿಂದ ಲೀವರ್ ಸಮಸ್ಯೆಯಾಗಿ ಬಳಲುತ್ತಿರುವ ರೋಗಿಗಳು ಕಡ್ಡಾಯವಾಗಿ ನಿರ್ಲಕ್ಷ್ಯ ಮಾಡದೇ ಪದೇ ಪದೇ ತಪಾಸಣೆ ಮಾಡಿಕೊಂಡರೆ ಬೇಗನೆ ಗುಣಮುಖರಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ಕೆಳಕಂಡಂತೆ ಉಚಿತ ತಪಾಸಣೆ ಮಾಡಲಾಗಿದೆ Free Hepatology Consultation,Free HBsAg test, Free LFT Test. ಬೀದರ ಜಿಲ್ಲೆಯ ಜನರು ಉಚಿತ ಶಿಬಿರದಲ್ಲಿ ಭಾಗವಹಿಸಿ, ಸದುಪಯೋಗ ಪಡೆದುಕೊಂಡರು.