ಸಂಜೆವಾಣಿ ವಾರ್ತೆ
ಹನೂರು :ಜು.25:- ಗುಂಡಾಲ್ ಜಲಾಶಯ ಮದ್ಯ ಇರುವ ಕಲ್ಲು ಕಟ್ಟೇಶ್ವರ ಸ್ವಾಮಿ ವಿಶೇಷ ಪೂಜೆ ಕೈಂಕರ್ಯಗಳು ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಹ ಪಂಕ್ತಿ ಭೋಜನ ಸ್ವೀಕರಿಸುವ ಮೂಲಕ ಭಕ್ತಿ ಪೂರ್ವಕವಾಗಿ ಕಾಯ9ಕ್ರಮ ಜರಗಿತು.
ಕಾಮಗೆರೆ ಗ್ರಾಮದ ಲಿಂಗಾಯಿತ ಸಮುದಾಯದಲ್ಲಿ ಪ್ರತಿ ವರ್ಷ ಆಚರಣೆಯ ಸಂಪ್ರದಾಯಿಕ ಸೇವೆಯಂತೆ ಗುಂಡಾಲ್ ಜಲಾಶಯದಲ್ಲಿ ಕಲ್ಲು ಕಟ್ಟೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಭಕ್ತಿ ಪರಾಕಾಷ್ಠೆ ಮೆರೆದರು.
ಕಾಮಗೆರೆ ಗ್ರಾಮದಿಂದ ಸುಮಾರು ಏಳು ಕಿಲೋಮೀಟರ್ ದೂರದಲ್ಲಿರುವ ಗುಂಡಾಲ್ ಜಲಾಶಯದ ಕಲ್ಲುಕಟ್ಟೇಶ್ವರ ಸ್ವಾಮಿ ನೆಲೆಸಿರುವ ಸ್ಥಳಕ್ಕೆ ಗ್ರಾಮದಿಂದ ಎತ್ತಿನ ಗಾಡಿಗಳಿಂದ ಆಹಾರದ ಧಾನ್ಯಗಳನ್ನು ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಸಾಗಿದರು.
ಅರಣ್ಯ ಪ್ರದೇಶದ ಜಲಾಶಯದಲ್ಲಿ ಎಲ್ಲಾ ಸಮುದಾಯದ ಯಜಮಾನರು ಮುಖಂಡರು ಸೇರಿದಂತೆ ಸಾವಿರಾರು ಭಕ್ತ ಸಾರ್ವಜನಿಕ ಬಂಧುಗಳು ಸೇರಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸುವುದು ಪ್ರತಿ ವರ್ಷದ ವಾಡಿಕೆಯಂತೆ ಜರಗಿತು.
ಅಲ್ಲಿ ನಡೆಯುವ ಸಹ ಪಂಕ್ತಿ ಭೋಜನದಲ್ಲಿ ಸಿಹಿ ಪಾಯಸ, ಕಳ್ಳೆಹುಳಿ, ರಾಗಿ ಮುದ್ದೆ, ಅನ್ನ ಸಾಂಬಾರು ಉಪಹಾರವನ್ನು ಸ್ವೀಕರಿಸಿದರು. ಪಂಕ್ತಿ ಭೋಜನ ಸಮಯದಲ್ಲಿ ಜಿಟಿ ಜಿಟಿ ಮಳೆ ಬರುತಿದ್ದರು ಇದನ್ನು ಲೆಕ್ಕಿಸದೆ ಭೋಜನ ಸ್ವೀಕರಿಸುವುದು ವಿಶೇಷವಾಗಿ ಈ ಘಳಿಗೆಯನ್ನು ಮರೆಯಲಾಗದಂತಹ ಸಂತಸ ಕ್ಷಣದ ಅನುಭವವನ್ನು ಹಂಚಿಕೊಂಡರು.
ಗುಂಡಾಲ್ ಜಲಾಶಯ ವ್ಯಾಪ್ತಿಯ ಅರಣ್ಯ ಇಲಾಖೆ ಅಧಿಕಾರಿಗಳ ಅನುಮತಿಯಂತೆ ನಿರ್ದಿಷ್ಟ ಅವಧಿ ಸಮಯ ಜಾಗದಲ್ಲಿ ಪೂಜೆ ಸಹ ಪಂಕ್ತಿ ಭೋಜನವನ್ನು ಮುಗಿಸಿದರು.