ಕಲಬುರಗಿ,ಜೂ.20:ಅರಣ್ಯಗಳಪ್ರಮಾಣಕಡಿಮೆಯಾಗಿ ಸೂಕ್ತ ಕಾಲಕ್ಕೆ ಮಳೆ-ಬೆಳೆಯಾಗದೆ ಪರಿಸರದಲ್ಲಿಏರು-ಪೇರುಗಳಾಗಿ ನೈಸರ್ಗಿಕ ಅವಘಡಗಳಾಗುತ್ತಿವೆ. ಪ್ರತಿಯೊಂದು ಜೀವರಾಶಿ ಉಳಿಯಬೇಕಾದರೆ ಪರಿಸರದ ಸಂರಕ್ಷಣೆÉಅಗತ್ಯ. ಅದಕ್ಕಾಗಿಎಲ್ಲರುಒಂದುಗಿಡ ನೆಟ್ಟುಅದನ್ನು ಮಗುವಿನಂತೆ ಪೋಷಿಸಿದರೆ ಪರಿಸರÀ ಹಸಿರುಮಯವಾಗಲು ಸಾಧ್ಯವಾಗುತ್ತದೆಎಂದುಸಿಬಿಸಿ ಉಪಾಧ್ಯಕ್ಷರವೀಂದ್ರಕುಮಾರ ವೈ.ಕೋಳಕೂರ ಹೇಳಿದರು.
ಜೇವರ್ಗಿಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪದವಿ ಪೂರ್ವಕಾಲೇಜಿನಲ್ಲಿಎನ್.ಎಸ್.ಎಸ್ಘಟಕದ ವತಿಯಿಂದ ಮಂಗಳವಾರ ಜರುಗಿದ ‘ಹಸಿರು ಸಂಭ್ರಮ-ಸಸ್ಯೋತ್ಸವ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಸಿಗಳನ್ನಿ ವಿತರಿಸಿಅವರು ಮಾತನಾಡುತ್ತಿದ್ದರು.
ಕಾಲೇಜಿನ ಪ್ರಾಚಾರ್ಯ ಮೊಹಮ್ಮದ್ಅಲ್ಲಾಉದ್ದೀನ್ ಸಾಗರಮಾತನಾಡಿ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಅರಣ್ಯಗಳ ಪ್ರಮಾಣ ಹೆಚ್ಚಾಗಿದೆ. ಅಂದರೆಅಭಿವೃದ್ಧಿಗೂ, ಅರಣ್ಯಗಳ ಪ್ರಮಾಣಕ್ಕೂ ನೇರವಾದ ಸಂಬಂಧವಿದೆಎಂದರ್ಥವಾಗಿದೆ. ಅರಣ್ಯಗಳಿಂದ ಸಾಕಷ್ಟು ಪ್ರಯೋಜನೆಗಳಿವೆ. ಆದ್ದರಿಂದ ವ್ಯಾಪಕವಾಗಿಗಿಡ-ಮರಗಳನ್ನು ಬೆಲೆಸಬೇಕಾಗಿದೆಎಂದರು.
ಕಾರ್ಯಕ್ರಮದಲ್ಲಿ ಮಂದೇವಾಲ ಸರ್ಕಾರಿ ಪಿಯುಕಾಲೇಜಿನ ಸಿಬಿಸಿ ಉಪಾಧ್ಯಕ್ಷ ಸುನೀಲ ಬಳುಂಡಗಿ, ಮುಖಂಡಗಣೇಶರಾಠೋಡ, ಎನ್.ಎಸ್.ಎಸ್ಅಧಿಕಾರಿಎಚ್.ಬಿ.ಪಾಟೀಲ, ಉಪನ್ಯಾಸಕರಾದರವಿಂದ್ರಕುಮಾರ ಬಟಗೇರಿ, ಶರಣಮ್ಮ ಭಾವಿಕಟ್ಟಿ, ನಯಿಮಾ ನಾಹಿದ್, ಶಂಕ್ರೆಪ್ಪ ಹೊಸದೊಡ್ಡಿ, ರೇಣುಕಾಚಿಕ್ಕಮೇಟಿ, ರಂಜಿತಾಠಾಕೂರ, ಸಮೀನಾ ಬೇಗಂ, ನುಝಹತ್ ಬೇಗಂ, ಪ್ರ.ದ.ಸ ನೇಸರ ಎಂ.ಬೀಳಗಿ, ಸೇವಕ ಭಾಗಣ್ಣ, ಪಾಲಕರಾದ ನಾಗಪ್ಪ ಮುದನೂರ, ಮೌನೇಶ ಬೈಲಾಪುರಸೇರಿದಂತೆಇನ್ನಿತರರುಇದ್ದರು.