
ಸಿರವಾರ.ಫೆ೨೬- ಪ್ರಸ್ತುತ ಬಜೆಟ್ನಲ್ಲಿ ಗಾಣಿಗ ಅಭಿವೃದ್ಧಿ ನಿಗಮವನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ, ಅದರಲ್ಲಿ ಬರುವ ಯೋಜನೆಗಳನ್ನು ಸಮಾಜದವರು ಸದುಪಯೋಗ ಪಡೆದುಕೊಳಬೇಕು ಎಂದು ಹಿರಿಯ ಮುಖಂಡ ನಿಂಬಯ್ಯಸ್ವಾಮಿ ಹೇಳಿದರು. ಗಾಣಿಗ ಅಭಿವೃದ್ದಿ ನಿಗಮ ಪ್ರಾರಂಭಿಸಿರುವುದಕ್ಕೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಇಂದು ತಾಲೂಕ ಗಾಣಿಗ ಸಮಾಜದ ವತಿಯಿಂದ ಪೋಟೊಕೆ ಹಾಗೂ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಂಭ್ರಮಾಚರಣೆಯನ್ನು ಮಾಡಲಾಯಿತು.
ಮಾತನಾಡಿದ ಅವರ ಸಮಾಜದವರು ಬಹಳ ಜನ ಇದ್ದಾರೆ, ಆದರೆ ಕಡಿಮೆ ಸಂಖ್ಯೆಯಲ್ಲಿ ಭಾಗವಹಿಸಿರುವುದು ನೋಡಿದರೆ ಇನೂ ಕೂಡಬೇಕಾಗಿತು. ಎಲ್ಲಾ ಜಾತಿ ಜನಾಂಗದವರ ಜೊತೆ ಈ ಸಂಭ್ರಮಾಚರಣೆ ಮಾಡಬೇಕಾಗಿತು. ಎಲ್ಲಾಜಾತಿ ಜನಾಂಗದವರ ಜೊತೆ ಕೂಡಿ ಹೊಗುವುದು ಸಮಾಜ. ನಿಗಮದಿಂದ ಸಿಗುವ ಸೌಲಭ್ಯಗಳನ್ನು ಬಡವರಿಗೆ ದೊರಕಿಸಿಕೊಡುವ ಕೆಲಸ ಮಾಡಿ ಎಂದರು. ಗದ್ದಿಗೆ ಮಠ ಸಿದಯ್ಯಸ್ವಾಮಿ, ಬಸವಲಿಂಗಯ್ಯ ಸ್ವಾಮಿ, ಅದ್ಯಕ್ಷರು ಅಚ್ಚಾ ವಿರೂಪಾಕ್ಷ ಸಜ್ಜನ್, ಗೌರವ ಅದ್ಯಕ್ಷ ಬಸವರಾಜ ಸಜ್ಜನ ಅತ್ತನೂರು, ಖಜಾಂಚಿ ಅನಿಲ್ ಕುಮಾರ, ಸಂ.ಕಾ ಶ್ರೀಕಾಂತ ಸಜ್ಜನ್ ಅತ್ತನೂರ, ಮುಖಂಡರಾದ ಅಚ್ಚಾ ಅಮರೇಶಪ್ಪ, ಅಚ್ಚಾ ನಾಗಪ್ಪ, ಉಪಾದ್ಯಕ್ಷ ಮಲ್ಲಿಕಾರ್ಜುನ ಹೋಕ್ರಾಣಿ, ಅಚ್ಚಾ ಶ್ರೀಶೈಲಾ , ಕೆ.ಬಸವರಾಜ, ಕೆ.ನಟರಾಜ ಹೊಕ್ರಾಣಿ, ಅಚ್ಚಾ ಶಿವಕುಮಾರ, ಅಚ್ಚಾ ಬಾಬು, ಕುಮಾರ ಸಜ್ಜನ್, ದಿಡ್ಡಿ ಬಸವ ಸಜ್ಜನ್ ಅತ್ತನೂರು, ಮಹೇಶ ಸಜ್ಜನ್. ಚೇತನ್ ಕುಮಾರ, ಗುರುಸಜ್ಜನ್ ಮಾಡಗಿರಿ, ಅಚ್ಚಾ ಸಿದ್ಧಲಿಂಗೇಶ್ವರ, ಅಭಿಲಾಷ, ಬಸವರಾಜ ಸಜ್ಜನ ಬೆಳ್ಳಿಗನೂರು, ಚೇತನ್, ಗಂಗಾದರ ಸಜ್ಜನ್, , ಬಸವರಾಜ ಹೊಕ್ರಾಣಿ, ಬಸವರಾಜ ಅಚ್ಚಾ, ನಾಗರಾಜ ಸಜ್ಜನ್ ರೊಡಲಬಂಡ,ಅಚ್ಚಾ ಅಜಯ್ ತಾಲ್ಲೂಕು ಗಾಣಿಗ ಸಮಾಜ ಸಿರವಾರ.