ಗಂಡನ ಮನೆಯವರ ಕಿರುಕುಳಕ್ಕೆ ಬೇಸತ್ತ ಮಹಿಳೆ ಬಾವಿಗೆ ಬಿದ್ದು ಆತ್ಮಹತ್ಯೆ

ಕಮಲನಗರ:ಎ.23:ವಿವಾಹಿತ ಮಹಿಳೆಯೊರ್ವಳು ಗಂಡ, ಮಾವ, ಅತ್ತಿಗೆ, ನೆಗೆಣಿ ಮತ್ತು ನಾದುಣಿ ಕಿರುಕುಳಕ್ಕೆ ಬಲಿಯಾಗಿ ತವರು ಮನೆ ಸಂಗಮ ಗ್ರಾಮದ ಮಾಂಜ್ರಾ ನದಿ ಪಕ್ಕದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.

ಮಹೇಶ್ವರಿ ಗಂಡ ಸಂಗಮೇಶ ನಿಡೋದೆ(19) ಮೃತಪಟ್ಟಿರುತ್ತಾರೆ. ತಾಲ್ಲೂಕಿನ ಸಂಗಮ ಗ್ರಾಮದ ಬಸವರಾಜ ಬಾವಗೆ ಅವರ ಎರಡನೇ ಮಗಳಾದ ಮಹೇಶ್ವರಿಯನ್ನು ಒಂದು ವರ್ಷದ ಹಿಂದೆ ಭಾಲ್ಕಿ ತಾಲ್ಲೂಕಿನ ಸಾಯಗಾಂವ ಗ್ರಾಮದ ಸಂಗಮೇಶ ಅವರಿಗೆ ವಿವಾಹ ಮಾಡಿಕೊಡಲಾಯಿತು.

ಮದುವೆಯಾದ ಕೆಲ ದಿನಗಳ ನಂತರ ಆಕೆ ಗಂಡ ಸಂಗಮೇಶ, ಮಾವ ದಿಲೀಪ, ಅತ್ತೆ ಸುರೇಖಾ, ನೆಗೆಣಿ ಸೋನಿಕಾ ಮತ್ತು ನಾದಿಣಿ ಉಷಾ ಇವರೆಲ್ಲರು ಸೇರಿ ಕಿರುಳು ನೀಡುತ್ತಿದ್ದರು.

ಇದರಿಂದ ಬೇಸತ್ತ ಮಹೇಶ್ವರ ಏ.18 ರಂದು ಸಂಗಮ ಗ್ರಾಮದ ತವರು ಮನೆಗೆ ಬಂದಿದ್ದಾಳೆ. ಮೃತಳ ತಾಯಿ ಮಹಾನಂದಾ ಹಾಗೂ ಗ್ರಾಮಸ್ಥರು ಕೂಡಿ ಸಾಯಗಾಂವ ಗ್ರಾಮಕ್ಕೆ ತೆರಳಿ ನೆಂಟರ ಜತೆ ಮಾತುಕತೆ ನಡೆಸಿದ್ದಾರೆ. ಆದರೆ ಇದಕ್ಕೆ ಗಂಡನ ಮನೆಯವರು ಮನೆಯಲ್ಲಿ ಇಟ್ಟುಕೊಳ್ಳಲು ಸುತಾರಾಂ ಒಪ್ಪಲಿಲ್ಲ ಎನ್ನಲಾಗಿದೆ. ಹೀಗಾಗಿ ಮಹೇಶ್ವರಿ ಮತ್ತು ಸಂಗಡಿಗರು ತವರು ಮನೆಗೆ ವಾಪಸ್ಸಾಗಿದ್ದಾರೆ.

ಬುಧವಾರ ಏ.19ರಂದು ಯಾರಿಗೆ ತಿಳಿಸದೆ ಮಹೇಶ್ವರಿ ಅವರು ಮನೆಯಿಂದ ಹೋಗಿ ಮಾಂಜ್ರಾ ನದಿ ಪಕ್ಕದ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾರೆ.

ಈ ಕುರಿತು ಮೃತಳ ತಾಯಿ ಮಹಾನಂದಾ ಬಾವಗೆ ಅವರು ನೀಡಿದ ದೂರಿನಲ್ಲಿ ಮಗಳ ಸಾವಿಗೆ ಗಂಡ, ಮಾವ , ಅತ್ತೆ, ನಾದಿಣಿ ಮತ್ತು ನೆಗೆಣಿ ಅವರು ಕಾರಣರಾಗಿದ್ದಾರೆ ಎಂದು ದೂರು ಸಲ್ಲಿಸಿದ್ದಾರೆ.

ಈ ದೂರಿನನ್ವಯ ಠಾಣಾಕುಶನೂರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.