ಖಾರದ ಪುಡಿ ಎರಚಿ 5 ಲಕ್ಷ ಕದ್ದೊಯ್ದ ಪ್ರಕರಣಕ್ಕೆ ಹೊಸ ತಿರುವು: ವಾಹನ ಚಾಲಕನೇ ಅಂದರ್

ಇಲಕಲ್,ಆ.11-ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಸಂಗಮ ಕ್ರಾಸ್ ಹತ್ತಿರ ಬೈಕ್ ಮೇಲೆ ಬಂದು ಖಾರದ ಪುಡಿ ಎರಚಿ 5 ಲಕ್ಷ ಹಣ ಕದ್ದು ಪರಾರಿಯಾಗಿದ್ದ ಖದೀಮರನ್ನು ಬಾಗಲಕೋಟೆ ಜಿಲ್ಲೆ ಹುನಗುಂದ ಪೆÇಲೀಸರು 48 ಗಂಟೆಯ ಒಳಗಾಗಿ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲೆಯ ಹುನಗುಂದ ತಾಲ್ಲೂಕಿನ ಕೂಡಲಸಂಗಮ ಬಳಿ 8 ನೇ ತಾರೀಖು ಎರಡು ಬೈಕ್ ಮೇಲೆ ಬಂದ 4 ಜನ ಆಗಂತುಕರು ಕ್ಯಾಂಟರ್ ವಾಹನದಲ್ಲಿದ್ದ ಕುಮಾರ ಹಿರೇಮಠ ಮತ್ತು ಚಾಲಕ ಬಸವರಾಜ್ ಅವರನ್ನು ತಡೆದು ಗಲಾಟೆಗೆ ಮಾಡಿದ್ದರು.
ಮಾತಿಗೆ ಮಾತು ಬೆಳೆಯುತ್ತಲೇ ಏಕಾಏಕಿ ಖಾರದ ಪುಡಿ ಎರಚಿದ ಖದೀಮರು, ಕುಮಾರ ಹಿರೇಮಠ ಎಂಬುವವರ ಕೈಯಲ್ಲಿದ್ದ 5,53,300 ಹಣದ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದರು. ಕುಮಾರ ಹಿರೇಮಠ ಮರೋಳ ಗ್ರಾಮದವರಾಗಿದ್ದು, ಧನ್ನೂರನಿಂದ ವಿಜಯಪುರಕ್ಕೆ ತೆರಳುವ ಮಾರ್ಗ ಮಧ್ಯೆ ಈ ಘಟನೆ ನಡೆದಿತ್ತು. ಕಿರಾಣಿ ವ್ಯಾಪಾರಕ್ಕಾಗಿ ಸಾಮಗ್ರಿ ತರಲು ಕ್ಯಾಂಟರ್ ವಾಹನದೊಂದಿಗೆ ಕುಮಾರ ಬೆಳಿಗ್ಗೆ ವಿಜಯಪುರಕ್ಕೆ ತೆರಳುತ್ತಿದ್ದರು. ಕುಮಾರ್ ಅವರ ಕ್ಯಾಂಟರ್ ವಾಹನ ತಡೆದು ಖಾರದ ಪುಡಿ ಎರಚಿ 5 ಲಕ್ಷಕ್ಕೂ ಅಧಿಕ ಹಣ ಕಸಿದುಕೊಂಡು ಬೈಕ್ ಸವಾರರು ಪರಾರಿಯಾಗಿದ್ದರು.
ಈ ಕುರಿತು ಹುನಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಬೇಧಿಸಿರುವ ಹುನಗುಂದ ಪೆÇಲೀಸರು ಹಣ ಎಗರಿಸಿದ ಪ್ರಕರಣದಲ್ಲಿ 7 ಜನ ಶಾಮೀಲಾಗಿರೋದನ್ನು ಬಹಿರಂಗ ಪಡಿಸಿದ್ದಲ್ಲದೇ 7 ಜನ ಆರೋಪಿಗಳ ಪೈಕಿ 5 ಜನರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿತರಿಂದ 4,65,000 ನಗದು ಕೃತ್ಯಕ್ಕೆ ಬಳಸಿದ 3 ಮೋಟರ್ ಸೈಕಲ್, 5 ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನುಳಿದ ಆರೋಪಿಗಳ ಪತ್ತೆಗಾಗಿ ಪೆÇಲೀಸರು ಬಲೆ ಬೀಸಿದ್ದಾರೆ.
ಹಣ ಕೊಂಡೊಯ್ಯುತ್ತಿದ್ದ ವಾಹನ ಚಾಲಕನಿಂದಲೇ ಕಳ್ಳತನಕ್ಕೆ ಸ್ಕೆಚ್: ಇನ್ನು ಕ್ಯಾಂಟರ್ ಚಾಲಕ ಬಸವರಾಜ್ ಎಂಬಾತ ಮರೋಳ ಗ್ರಾಮದವನಾಗಿದ್ದು, ಇತನೇ ಕೃತ್ಯದ ಪ್ಲ್ಯಾನರ್ ಎಂದು ಪೆÇಲೀಸ್ ತನಿಖೆಯಲ್ಲಿ ಗೊತ್ತಾಗಿದೆ. ಆರೋಪಿ ಚಾಲಕ ಬಸವರಾಜ್ ತನ್ನ ಮರೋಳ ಗ್ರಾಮದ ಸ್ನೇಹಿತ ಅಸ್ಲಂ ಮುಂದೆ ಕಿರಾಣಿ ತರಲು ಹಣ ಇಟ್ಕೊಂಡು ಹೋಗುವ ವಿಚಾರ ತಿಳಿಸಿದ್ದನು.
ಹಣ ಲಪಟಾಯಿಸೋಣ ಅಂತ ಅಸ್ಲಂ ಮುಂದೆ ಹೇಳಿರ್ತಾನೆ. ಅದರಂತೆ ಬಸವರಾಜ್ ಹಾಗೂ ಅಸ್ಲಂ ಜೊತೆಗೆ ಮಹ್ಮದ್ ಗೌಸ್, ದಾನೇಶ್, ಮೆಹಬೂಬ್, ಅಪ್ಪಾಜಿ, ದರ್ಶನ ಕೈ ಜೋಡಿಸಿ ಹಣವನ್ನು ಲೂಟಿ ಮಾಡಿದ್ದರು. ತನಿಖೆ ಕೈಗೊಂಡ ಪೆÇಲೀಸರಿಗೆ ಚಾಲಕ ಬಸವರಾಜ್ ಮೇಲೆ ಅನುಮಾನ ಶುರು ಆಗಿತ್ತು. ಹಾಗಾಗಿ ಬಸವರಾಜ್‍ನನ್ನು ಪೆÇಲೀಸರು ವಿಚಾರಿಸಿದಾಗ ಎಲ್ಲವನ್ನು ಪೆÇಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ. ಸದ್ಯ ಅಪ್ಪಾಜಿ, ದರ್ಶನ ಎಂಬುವರಿಗಾಗಿ ಪೆÇಲೀಸರ ಬಲೆ ಬೀಸಿದ್ದಾರೆ.