ಅಥಣಿ :ಜೂ.4: ಮಹತಪಸ್ವಿ ಮುರುಘೇಂದ್ರ ಶಿವಯೋಗಿಗಳ ಆಶೀರ್ವಾದ ಮತ್ತು ಅನೇಕ ಮಠಮಾನ್ಯಗಳ ಆಶೀರ್ವಾದದ ಫಲವಾಗಿ ವಿಧಾನಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲು ಸಾದ್ಯವಾಗಿದೆ. ಮತಕ್ಷೇತ್ರದ ಜನರ ಋಣ ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ಶನಿವಾರ ಇಲ್ಲಿನ ಶೆಟ್ಟರ ಮಠದಲ್ಲಿ ಶ್ರೀ ಮರುಳಸಿದ್ಧ ಸ್ವಾಮೀಜಿ ಹಾಗೂ ಶ್ರೀ ಮಠದ ಸದ್ಭಕ್ತರಿಂದ ಅಭಿನಂದನಾ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕ್ಷೇತ್ರದ ಮತದಾರರ ಋಣ ನನ್ನ ಮೇಲೆ ಬಹಳಷ್ಟು ಇರುವುದರಿಂದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇನೆ. ಮತಕ್ಷೇತ್ರದಲ್ಲಿ ನೆನೆಗುದಿಗೆ ಬಿದ್ದಿರುವ ಅನೇಕ ಕಾಮಗಾರಿಗಳನ್ನು ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಪೂರ್ಣಗೊಳಿಸುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಆಡಳಿತ ಪಕ್ಷದ ಶಾಸಕನಾಗಿರುವದು ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಲಿದೆ. ಮತಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ತಮ್ಮೆಲ್ಲರ ಸಹಾಯ ಸಹಕಾರ ಯಾವತ್ತು ನನ್ನ ಮೇಲೆ ಇರಲಿ ಎಂದು ಹೇಳಿದರು.
ಶೆಟ್ಟರ ಮಠದ ಮರುಳಸಿದ್ದ ಸ್ವಾಮಿಜಿ ಮಾತನಾಡಿ ಲಕ್ಷ್ಮಣ ಸವದಿ ಅವರು ಸ್ವಾಭಿಮಾನಿ ರಾಜಕಾರಣಿಯಾಗಿದ್ದಾರೆ. ಬದಲಾದ ಕಾಲದಲ್ಲಿ ಪಕ್ಷ ತೊರೆದು ಬೇರೆ ಪಕ್ಷದಿಂದ ಸ್ಪರ್ಧಿಸುವ ಕಾಲದಲ್ಲಿ ಯಾವುದೆ ಶರತ್ತು ಹಾಕದೆ ನನ್ನ ಕ್ಷೇತ್ರದ ಅಭಿವೃದ್ದಿಗೆ ಬೇಕಾದ ಎಲ್ಲ ಸಹಕಾರ ನೀಡಬೇಕು ಅಂತಾ ಅಷ್ಟೇ ಹೇಳಿದ್ದು ವಿಶೇಷ. ಈಗ ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ, ಆದರೆ ಮುಂದಿನ ದಿನಮಾನಗಳಲ್ಲಿ ಅವರ ಶಕ್ತಿಯನ್ನು ಪಕ್ಷ ಬಳಸಿಕೊಂಡು ಅವರನ್ನು ಸಚಿವರನ್ನಾಗಿ ಮಾಡಬೇಕು ಎಂದು ಹೇಳಿದರು.
ಈ ವೇಳೆ ಶ್ರೀ ಮಠದ ಸದ್ಭಕ್ತರಾದ ಶಿವಾನಂದ ದಿವಾನಮಳ, ಮುರಗೇಪ್ಪ ಮಮದಾಪೂರ, ಈರಗೌಡ ಪಾಟೀಲ, ಪ್ರಕಾಶ ಮಹಾಜನ, ಶಂಭು ಮಮದಾಪೂರ, ಐ ಜಿ ಜಗದಾಳಮಠ, ಸುರೇಶ ಮಾಯಣ್ಣವರ, ಮಲ್ಲಿಕಾರ್ಜುನ ಗೋಟಖಿಂಡಿ, ಮಹಾದೇವ ಹೊನ್ನೋಳಿ, ಸುರೇಶ ಗೋಟಖಿಂಡಿ, ರಾಮನಗೌಡ ಪಾಟೀಲ, ಸಂಜಯ ತೆಲಸಂಗ, ಶಿವು ಗಜ್ಜಿ, ಸಂತೋಷ ಸಾವಡಕರ, ಶಿವಕುಮಾರ ತೆಲಸಂಗ, ಅಶೋಕ ಅಳ್ಳಿಮಟ್ಟಿ, ಮುರಗೇಶ ಬಾನೆ, ವಿಜಯ ಮಂಗಸೂಳಿ, ಅಕ್ಷಯ ಬುರ್ಲಿ ಸೇರಿ ಅನೇಕ ಗಣ್ಯರು ಉಪಸ್ಥಿತರಿದ್ದರು.