
ಮೂಡುಬಿದಿರೆ, ಜ.೯- ಪಾಲಡ್ಕ ಗ್ರಾಮದ ಕುಕ್ಕದಡಿ ನಿವಾಸಿ ದಯಾನಂದ ಎಂಬವರು ೨೦೨೦ರ ಮೇ ೨೦ರಂದು ಕ್ವಾರಂಟೈನ್ ಕೇಂದ್ರದಲ್ಲಿ ಖಿನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮೂರು ಲಕ್ಷ ರೂಪಾಯಿ ಮಂಜೂರಾಗಿದೆ.
ಮೂಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೊಟ್ಯಾನ್ ಅವರು ಪರಿಹಾರ ನಿಧಿ ಚೆಕ್ ಅನ್ನು ದಯಾನಂದ ಅವರ ಕುಟುಂದವರಿಗೆ ಹಸ್ತಾಂತರಿಸಿದರು.